ಹಾವೇರಿ: ಹಾನಗಲ್ ಗ್ಯಾಂಗ್ ರೇಪ್ (Hanagal Gang Rape) ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರಿ ಮೇಲೆ ಹಲ್ಲೆ ಮಾಡಿ ಗ್ಯಾಂಗ್ ರೇಪ್ ಮಾಡಿದ್ದಾರೆ. ಎರಡು ಸ್ಥಳದಲ್ಲಿ ಸಾಮೂಹಿಕವಾಗಿ ರೇಪ್ ಮಾಡಿದ್ದಾರೆ ಎಂದು ಸಂತ್ರಸ್ತೆ ಸಂಬಂಧಿ ಸೈಯದ್ ಬಸೀರ್ ಹೇಳಿಕೆ ನೀಡಿದ್ದಾರೆ.
ಪ್ರಕರಣ ಸಂಬಂಧ ಸಂತ್ರಸ್ತೆ ಕುಟುಂಬದರು ಸಿಎಂಗೆ ಮನವಿ ಸಲ್ಲಿಸಲು ಹಾವೇರಿಯ (Haveri) ನರಸೀಪುರದಲ್ಲಿರುವ ಹೆಲಿಪ್ಯಾಡ್ಗೆ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಂತ್ರಸ್ತೆ ಸಂಬಂಧಿ ಬಸೀರ್, ಮೊದಲ ದಿನ ಅತ್ಯಾಚಾರ ಬಗ್ಗೆ ಹೇಳಿಕೆ ನೀಡದಂತೆ ಒತ್ತಡ ಬಂದಿತ್ತು. ಪ್ರಕರಣದ ಬಗ್ಗೆ ಸರಿಯಾದ ತನಿಖೆ ಮಾಡಬೇಕು. ಸಂತ್ರಸ್ತೆಗೆ ಸರ್ಕಾರಿ ಉದ್ಯೋಗ ನೀಡಬೇಕು, ಪರಿಹಾರ ಕೊಡಬೇಕು. ಸಂತ್ರಸ್ತೆ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಸಂತ್ರಸ್ತೆಗೆ ಚಿಕಿತ್ಸೆ ಕೊಡಿಸಬೇಕು. ಬೆದರಿಕೆ ಹಾಕಿದರೂ ನಾವು ಅಂಜುವುದಿಲ್ಲ ಎಂದರು. ಇದನ್ನೂ ಓದಿ: ಸಂಸದ ಅನಂತಕುಮಾರ್ ಹೆಗಡೆ ಕುಂಭಕರ್ಣನಿದ್ದಂತೆ: ಕಾಂಗ್ರೆಸ್ ಕಿಡಿ
ಈ ಕುರಿತು ರಹೀಮಾ ಪ್ರತಿಕ್ರಿಯಿಸಿದ್ದು, ಸಂತ್ರಸ್ತೆ ನನಗೆ ಸಹೋದರಿ ಆಗಬೇಕು. ಅವರಿಗೆ ಬಹಳ ತೊಂದರೆ ಆಗಿದೆ. ನಮ್ಮ ಸಹೋದರಿಗೆ ಯಾರೂ ಭೇಟಿ ಆಗಲಿಲ್ಲ, ಏನು ಹೇಳಲೂ ಇಲ್ಲ. ನಮಗೆ ಪರಿಹಾರ ನೀಡಬೇಕು. ಅವರಿಗೆ ಮತ್ತೆ ಈಗ ಹುಷಾರಿಲ್ಲ, ಚಿಕಿತ್ಸೆ ನೀಡಬೇಕಿದೆ. ಪೋಲೀಸರು ಏಕಾಏಕಿ ಬಂದು ಮನೆಗೆ ಕರೆದುಕೊಂಡು ಬಿಟ್ಟು ಹೋಗಿದ್ದಾರೆ. ಪೊಲೀಸರು ಏನು ಹೇಳಲಿಲ್ಲ. ಬಂದು ಮನೆಗೆ ಬಿಟ್ಟು ಹೋದರು ಅಷ್ಟೇ ಎಂದು ತಿಳಿಸಿದರು. ಇದನ್ನೂ ಓದಿ: ಘೀಳಿಡುತ್ತಾ ಅಟ್ಟಾಡಿಸಿದ ಒಂಟಿ ಸಲಗ – ಸ್ಕೂಟಿಯನ್ನು ಬಿಟ್ಟು ಮರ ಏರಿ ಪಾರಾದ ಇಟಿಎಫ್ ಸಿಬ್ಬಂದಿ