ಜೈಪುರ: ಓರಲ್ ಸೆಕ್ಸ್ಗೆ ನಿರಾಕರಿಸಿದ 40 ವರ್ಷದ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿ 9 ದಿನಗಳ ಹಿಂದೆಯೇ ಶವವನ್ನ ನೀರಿಲ್ಲದ ಕೊಳದಲ್ಲಿ (Dry Pond) ಬಿಸಾಡಿರುವ ಘಟನೆ ರಾಜಸ್ಥಾನದ (Rajasthan) ಬರಾನ್ ಜಿಲ್ಲೆಯಲ್ಲಿ ನಡೆದಿದೆ.
ಸೆಕ್ಸ್ಗೆ ನಿರಾಕರಿಸಿದ್ದ ವ್ಯಕ್ತಿಯನ್ನು ಆತನ ಇಬ್ಬರು ಸ್ನೇಹಿತರೇ ಸೇರಿ ಹತ್ಯೆ ಮಾಡಿದ್ದಾರೆ. ನಂತರ ಶವವನ್ನು ನೀರಿಲ್ಲದ ಕೊಳದಲ್ಲಿ ಎಸೆದು ಹೋಗಿದ್ದಾರೆ ಎಂದು ಬರಾನ್ ಜಿಲ್ಲಾ ಪೊಲೀಸರು (Baran Police) ತಿಳಿಸಿದ್ದಾರೆ. ಬರಾನ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಂ ಪ್ರಕಾಶ್ ಬೈರ್ವ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಮದುಮಗ ಮಸಣಕ್ಕೆ – ಜಿಮ್ ಮಾಲೀಕನನ್ನು ಇರಿದು ಕೊಂದ ತಂದೆ
ಬಂಧಿತ ಆರೋಪಿಗಳನ್ನು ಮುರಳೀಧರ್ ಪ್ರಜಾಪತಿ (32) ಮತ್ತು ಸುರೇಂದ್ರ ಯಾದವ್ ಎಂದು ಗುರುತಿಸಲಾಗಿದೆ. ಹತ್ಯೆಗೈದ ಇಬ್ಬರು ಆರೋಪಿಗಳ ಪೈಕಿ ಪ್ರಜಾಪತಿಯನ್ನು ಬಂಧಿಸಲಾಗಿದೆ. ಬಂಧನದ ಭೀತಿಯಿಂದ ಯಾದವ್ ವಿಷ ಸೇವಿಸಿದ್ದು, ಆತನನ್ನ ಆಸ್ಪತ್ರೆಗೆ (Rajasthan Hospital) ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜ್ಕುಮಾರ್ ಚೌಧರಿ ತಿಳಿಸಿದ್ದಾರೆ. ಇದನ್ನೂ ಓದಿ: ಬಾಂಬ್ ಸ್ಫೋಟ ಕೇಸ್; ಬಂಡೆಗಳನ್ನು ಸಿಡಿಸಲು ಬಳಸುವ ಪೌಡರ್ ಬಳಸಿದ್ದ ಶಂಕಿತ ಉಗ್ರ!
ಕೊಲೆ ನಡೆದಿದ್ದು ಹೇಗೆ?
ಅಂದು ಯಾದವ್ ಮತ್ತು ಬೈರ್ವಾ ಒಟ್ಟಿಗೆ ಮದ್ಯ ಸೇವಿಸಿದ್ದರು. ನಂತರ ಪ್ರಜಾಪತಿಯ ಸಹೋದರಿಯನ್ನು ಭೇಟಿ ಮಾಡಲು ಹತ್ತಿರದ ಹಳ್ಳಿಗೆ ಹೋಗಿದ್ದಾರೆ. ಹಿಂದಿರುಗುವಾಗ ತಮ್ಮೊಂದಿಗೆ ಓರಲ್ ಸೆಕ್ಸ್ ಮಾಡುವಂತೆ ಪ್ರಜಾಪತಿ ಮತ್ತು ಸುರೇಂದ್ರ ಯಾದವ್ ಬೈರ್ವನನ್ನ ಕೇಳಿಕೊಂಡಿದ್ದಾರೆ. ಅದಕ್ಕೆ ನಿರಾಕರಿಸಿದ್ದರಿಂದ ಬೈರ್ವಾನನ್ನ ಹೊಡೆದು ಕೊಂದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬರಾನ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.