ಬೆಂಗಳೂರು/ ಉಡುಪಿ: ಜೆಡಿಎಸ್ನಲ್ಲಿ (JDS) ಹಾಸನ (Hassan) ಟಿಕೆಟ್ ಗೊಂದಲ ಬಗೆಹರಿಯುತ್ತಿಲ್ಲ. ಬದಲಾಗಿ ಇನ್ನಷ್ಟು ಗೋಜಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಮಾಜಿ ಮಂತ್ರಿ ಹೆಚ್.ಡಿ ರೇವಣ್ಣ (HD Revanna) ಕುಟುಂಬ ದೇವರ ಮೊರೆಹೋಗಿದೆ. ಪತ್ನಿ ಭವಾನಿ ರೇವಣ್ಣಗೆ ಟಿಕೆಟ್ ಸಿಗುವಂತೆ ಹೆಚ್.ಡಿ. ರೇವಣ್ಣ ವಿಶೇಷ ಯಾಗ ಮಾಡಿಸಿದ್ದಾರೆ.
ಚುನಾವಣಾ ಹೊಸ್ತಿಲಲ್ಲೇ ರೇವಣ್ಣ ಮತ್ತು ಕುಟುಂಬದ ಸದಸ್ಯರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ನವದುರ್ಗಿ ಚಂಡಿಕಾ ಯಾಗವನ್ನು ಮಾಡಿಸಿದ್ದಾರೆ. ಭವಾನಿ ರೇವಣ್ಣ, ರೇವಣ್ಣ ಸೇರಿ ಕುಟುಂಬದ ಸದಸ್ಯರು ಯಾಗದಲ್ಲಿ ಭಾಗಿಯಾಗಿದ್ದಾರೆ. ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೂ ಈ ನವದುರ್ಗಿ ಚಂಡಿಕಾ ಯಾಗ ನಡೆದಿದೆ.
- Advertisement 2
- Advertisement 3
ಮೂಲಗಳ ಪ್ರಕಾರ, ದೇವೇಗೌಡರ ಆರೋಗ್ಯದ ನೆಪದಲ್ಲಿ ವಿಶೇಷ ಪೂಜೆ ಆಯೋಜನೆ ಮಾಡಲಾಗಿದೆ. ದೇವೇಗೌಡರ ಆರೋಗ್ಯದಲ್ಲಿ ಸುಧಾರಣೆ ಆಗಬೇಕು ಅಂತ ಯಾಗ ನಡೆಸಲಾಗಿದೆ. ಇದೆಲ್ಲದೆ ಜೆಡಿಎಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬರಬೇಕು ಅಂತ ಪೂಜೆ ಸಲ್ಲಿಕೆ ಮಾಡಲಾಗಿದೆ ಅಂತ ತಿಳಿಸಿವೆ. ಇದನ್ನೂ ಓದಿ: ಅಮಿತ್ ಶಾ ಕೊಟ್ಟ ಟಾಸ್ಕ್ನಲ್ಲಿ ಕರ್ನಾಟಕ ಬಿಜೆಪಿ ಫೇಲ್
- Advertisement 4
ಇತ್ತೀಚೆಗಷ್ಟೇ ಮಾಜಿ ಮಂತ್ರಿ ಹೆಚ್.ಡಿ.ರೇವಣ್ಣ (H.D.Revanna) ಮಾತನಾಡಿ, ಪಕ್ಷ ಸೂಚಿಸಿದ್ರೆ ಹಾಸನದಿಂದಲೂ ಸ್ಪರ್ಧೆಗೆ ರೆಡಿ ಎಂದು ಘೋಷಿಸಿದ್ದರು. ಹಾಸನದಿಂದ ಭವಾನಿ ರೇವಣ್ಣ ಟಿಕೆಟ್ ಪಟ್ಟು ಬೆನ್ನಲ್ಲೇ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡೋದಾಗಿ ಹೇಳಿದ್ದರು. ಇದನ್ನೂ ಓದಿ: ಉಡುಪಿಗೆ ನಡ್ಡಾ – ಇಂದು ಮೂರು ಕಾರ್ಯಕ್ರಮದಲ್ಲಿ ಭಾಗಿ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k