ಬೆಂಗಳೂರು: ಹಳೆ ಮೈಸೂರು (Old Mysuru) ಭಾಗವನ್ನ ಬಿಜೆಪಿ (BJP) ಕಬ್ಜ ಮಾಡಲು ಹೈಕಮಾಂಡ್ ಕೊಟ್ಟಿದ್ದ ಟಾಸ್ಕ್ನಲ್ಲಿ ರಾಜ್ಯ ಬಿಜೆಪಿ ನಾಯಕರು ಠುಸ್ ಆಗಿದ್ದಾರೆ.
6 ತಿಂಗಳ ಹಿಂದೆ ಟಾಸ್ಕ್ ಕೊಟ್ಟಾಗಲೇ ಮಂಡ್ಯ ಉಸ್ತುವಾರಿ ಸಚಿವರ ಫೈನಲ್ ಮಾಡುವಂತೆ ಸಿಎಂ (CM Basavaraj Bommai) ಅಮಿತ್ ಶಾ ಸೂಚಿಸಿದ್ದರು. ಆದರೆ ಸುಮ್ಮನಿದ್ದ ಸಿಎಂ ಇತ್ತೀಚಿಗೆ ಅಮಿತ್ ಶಾ (Amit Shah) ಮಂಡ್ಯಕ್ಕೆ ಬರುವ ಮುನ್ನ ಗೋಪಾಲಯ್ಯರನ್ನು ಬದಲಿಸಿ ಅಶೋಕ್ಗೆ ಹೊಣೆ ಕೊಟ್ಟಿದ್ದರು. ಮಂಡ್ಯ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದು ಅಶೋಕ್ ಹಿಂದೆ ಸರಿದರು. ಇದನ್ನೂ ಓದಿ: ಕರ್ಮ ಯಾರನ್ನೂ ಬಿಡಲ್ಲ, ನಾನು ದೇವರನ್ನು ನಂಬ್ತೀನಿ: ಕುಸುಮಾ
ಸಿಎಂ ಇಂದಿಗೂ ಹೊಸ ಉಸ್ತುವಾರಿಯನ್ನು ನೇಮಿಸಲು ಆಗದೇ ಪರದಾಡುತ್ತಿದ್ದಾರೆ. ಹಿಂದಿನ ಉಸ್ತುವಾರಿ ಸಚಿವರಾದ ಗೋಪಾಲಯ್ಯ, ನಾರಾಯಣಗೌಡ ಪದೇ ಪದೇ ಬಲಾವಣೆಯಾಗಿರುವ ಮಂಡ್ಯ ಉಸ್ತುವಾರಿ ಪಡೆಯಲು ಹಿಂದೇಟು ಹಾಕಿದ್ದರೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಕೂಡ ಚುನಾವಣೆ ಸಂದರ್ಭ ನನಗೆ ಯಾಕೆ ಉಸಾಬರಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k