ರಕ್ತ ಚೆಲ್ಲಿದ ಇರಾನಿ ಜನ – ಧಾರವಾಡದಲ್ಲಿ ವಿಶಿಷ್ಟವಾಗಿ ಮೊಹರಂ ಆಚರಣೆ

Public TV
1 Min Read
Muharram 1

ಧಾರವಾಡ: ಭಾವೈಕ್ಯತೆ ಹಾಗೂ ತ್ಯಾಗದ ಪ್ರತೀಕ ಈ ಮೊಹರಂ ಹಬ್ಬ. ಹಸೇನ್ ಹುಸೇನ್‌ರ ತ್ಯಾಗವನ್ನು ನೆನಪಿಸುವ ಹಬ್ಬವೂ ಹೌದು. ಅದರಲ್ಲೂ ಧಾರವಾಡದಲ್ಲಿ ನಡೆಯುವ ಈ ವಿಶಿಷ್ಟ ಆಚರಣೆ ಗಮನಸೆಳೆದಂತೆ ಭಯವೂ ಹುಟ್ಟಿಸಿದೆ.

Muharram

ಹೌದು ಹಸೇನ್ ಹುಸೇನ್‌ರ ತ್ಯಾಗವನ್ನು ನೆನಪಿಸುವುದಕ್ಕೋಸ್ಕರ ಧಾರವಾಡದ ಇರಾನಿ ಸಮುದಾಯದ ಜನ ತಮ್ಮ ರಕ್ತವನ್ನೇ ಚೆಲ್ಲಿದ್ದಾರೆ. ಪ್ರತಿವರ್ಷ ಮೊಹರಂ ಹಬ್ಬದಂದು ಇವರು ತಮ್ಮ ಎದೆಗೆ ಬ್ಲೇಡ್‌ನಿಂದ ಹೊಡೆದುಕೊಳ್ಳುವ ಮೂಲಕ ರಕ್ತ ಚೆಲ್ಲಿ ಮೊಹರಂ ಹಬ್ಬವನ್ನು ಆಚರಿಸಿ, ತ್ಯಾಗದ ಸಂದೇಶ ಸಾರುತ್ತಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಗಟ್ಟಿಯಾಯ್ತು ಡಿಕೆ, ಸಿದ್ದು ಜೋಡಿ- ಪರಸ್ಪರ ಟೋಪಿ ಹಾಕಿಕೊಂಡ ನಾಯಕರು

ಹಾಗೆಯೇ ಇಂದು ನಡೆದ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಇರಾನಿ ಸಮುದಾಯದ ಜನ ನಗರದ ಜನ್ನತನಗರದಿಂದ ಹೊಸಯಲ್ಲಾಪುರದವರೆಗೆ ಪಾಂಜಾಗಳ ಮೆರವಣಿಗೆ ಮಾಡಿದರು. ಈ ಮೆರವಣಿಗೆಯಲ್ಲಿ ಇವರು ಬ್ಲೇಡ್‌ನಿಂದ ತಮ್ಮ ಎದೆಗೆ ಹೊಡೆದುಕೊಂಡು ರಕ್ತ ಚೆಲ್ಲುವ ಮೂಲಕ ಹಬ್ಬವನ್ನು ಆಚರಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *