ಬೆಡ್ ಬೇಕು ಅಂತ ಕಂದಾಯ ಸಚಿವರ ಕಾರು ಅಡ್ಡ ಹಾಕಿದ ಯುವತಿ

Public TV
1 Min Read
FotoJet 2 9

ಬೆಂಗಳೂರು: ಸಭೆಗೆಂದು ಆಗಮಿಸುತ್ತಿದ್ದ ಕಂದಾಯ ಸಚಿವರ ಕಾರನ್ನು ಅಡ್ಡ ಹಾಕಿ ಯುವತಿಯೊಬ್ಬಳು ತಂದೆಗೆ ಬೆಡ್ ಬೇಕು ಎಂದು ಅಂಗಲಾಚಿದ ಘಟನೆ ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಛೇರಿ ಬಳಿ ನಡೆದಿದೆ.

FotoJet 5 8

ಯಲಹಂಕ ರೈಲ್ವೆ ಆಸ್ಪತ್ರೆಯಲ್ಲಿ ತಾಯಿ ಮತ್ತು ತಂದೆಗೆ ಬೆಡ್ ಬುಕ್ ಆಗಿದೆ. ಒಂದು ವಾರದ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದರು. ಅವರ ತಂದೆಗೆ 65 ವರ್ಷ ವಯಸ್ಸಾಗಿದ್ದು, ರೈಲ್ವೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲ, ಐಸಿಯು ಇಲ್ಲ ಎಂದು ಅವರನ್ನು ನಿನ್ನೆ ವಿಕ್ರಮ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೀಗ ವಿಕ್ರಮ್ ಆಸ್ಪತ್ರೆಯವರು ಆಕ್ಸಿಟೋಸಿನ್ ಇಲ್ಲ ರೋಗಿಯನ್ನು ಕರೆದುಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ ಎಂದು ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ.

FotoJet 1 10

ತಂದೆಗೆ ಬೆಡ್ ಇಲ್ಲ ಅಂದ ತಕ್ಷಣ ಬಿಬಿಎಂಪಿ ವಾರ್ ರೂಂಗೆ ಆಗಮಿಸಿದ ಯುವತಿ, ಸಚಿವ ಆರ್. ಅಶೋಕ್ ಕಾರಿಗೆ ಅಡ್ಡಲಾಗಿ ನಿಂತ ಹಿನ್ನಲೆ ಇದೀಗ ಯುವತಿ ತಂದೆಗೆ ಬೆಡ್ ವ್ಯವಸ್ಥೆ ಮಾಡಿಸಲು ಮುಂದಾಗಿದ್ದಾರೆ. ಆರ್.ಅಶೋಕ್ ಮಧ್ಯಸ್ಥಿತಿಕೆಯಲ್ಲಿ ಅಂತಿಮವಾಗಿ ಯುವತಿ ತಂದೆಗೆ ಸಪ್ತಗಿರಿ ಆಸ್ಪತ್ರೆಯಲ್ಲಿ ಐಸಿಯು ಬೆಡ್ ವ್ಯವಸ್ಥೆ ಮಾಡಲಾಗಿದೆ.

FotoJet 4 8

ಈ ಕುರಿತಂತೆ ಯುವತಿ, ನನ್ನ ತಂದೆ ತಾಯಿ ಇಬ್ಬರು ಪಾಸಿಟಿವ್ ಆಗಿತ್ತು. ಬೆಡ್ ಸಿಗದ ಹಿನ್ನೆಲೆ ಏನು ಮಾಡಬೇಕೆಂದು ತಿಳಿಯದೆ ಬಿಬಿಎಂಪಿ ಕೇಂದ್ರ ಕಚೇರಿ ವಾರ್ ರೂಂ ಗೆ ಬಂದೆ. ವಾರ್ ರೂಂ ಬಂದ ವೇಳೆ ಸಚಿವ ಆರ್.ಅಶೋಕ್ ಬಳಿ ನಮ್ಮ ಕಷ್ಟ ಹೇಳಿ ಬೆಡ್ ಕೇಳಿದೆವು. ಯಲಹಂಕ ರೈಲ್ವೆ ಆಸ್ಪತ್ರೆಯಲ್ಲಿ ಹೆಚ್‍ಡಿಯು ಬೆಡ್ ಸಿಗದ ಕಾರಣ ವಿಕ್ರಂ ಆಸ್ಪತ್ರೆಗೆ ಶಿಫ್ಟ್ ಮಾಡಿದೆವು. ಈಗ ಸಪ್ತಗಿರಿ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿದೆ, ನನ್ನ ತಂದೆಯನ್ನು ಕರೆದೊಯ್ಯುತ್ತಿದ್ದೇನೆ. ಸಪ್ತಗಿರಿ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಕೊಡಿಸಿದಕ್ಕೆ ಧನ್ಯವಾದ ಎಂದು ಯುವತಿ ತಿಳಿಸಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *