ಬೆಳಗಾವಿ: ಟ್ಯೂಷನ್ಗೆ ಹೊರಟಿದ್ದ 9 ವರ್ಷದ ಬಾಲಕಿಯ ಅಪಹರಣ (Kidnap) ಪ್ರಕರಣದ ಆರೋಪಿಯನ್ನು ದೂರು ದಾಖಲಾದ 12 ಗಂಟೆಯೊಳಗೆ ಖಡೇಬಜಾರ್ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ (Belagavi) ಮಾರುತಿ ನಗರದ ಗಜಾನನ ಪಾಟೀಲ್ (35) ಬಂಧಿತ ಆರೋಪಿ. ಗಜಾನನ ಪಾಟೀಲ್ ವಿಕೃತ ಮನಸ್ಥಿತಿ ಹೊಂದಿದವ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ. ತನಗೆ ಮದುವೆ ಆಗಿಲ್ಲ. ಹೀಗಾಗಿ ಬಾಲಕಿಯನ್ನು ಅಪಹರಣ ಮಾಡಲು ಯತ್ನಿಸಿದ್ದೇನೆ ಎಂದು ಆತ ತಿಳಿಸಿದ್ದಾನೆ.
ನಗರದ ಎಲ್ಲ ಬಡಾವಣೆ ಸುತ್ತಾಡುತ್ತ ಮಹಿಳೆಯರು, ಯುವತಿಯರನ್ನು ಕೆಟ್ಟ ದೃಷ್ಟಿಯಿಂದ ಆರೋಪಿ ನೋಡುತ್ತಿದ್ದ. ಗಜಾನನ ವರ್ತನೆಗೆ ಬೇಸತ್ತು ಓರ್ವ ಸಹೋದರ ಬೇರೆ ಮನೆಯಲ್ಲಿ ವಾಸವಾಗಿದ್ದರು. ಮೈಸೂರಿನಲ್ಲಿರುವ ಮತ್ತೋರ್ವ ಸಹೋದರನ ಮನೆಯಲ್ಲಿ ಗಜಾನನ ತಾಯಿ ವಾಸವಾಗಿದ್ದರು. ಇದನ್ನೂ ಓದಿ: ದೇಶವ್ಯಾಪಿ ಮುಂಗಾರು ಕುಂಠಿತ – ರಾಜ್ಯದ 25 ಜಿಲ್ಲೆಗಳಲ್ಲಿ ಮಳೆ ಕೊರತೆ
ಕುಟುಂಬಸ್ಥರು ಮನೆ ಬಿಟ್ಟು ಹೋದರೂ ತಾನು ಮಾತ್ರ ವರ್ತನೆ ಬದಲಿಸಿಕೊಳ್ಳದೇ ಇಡೀ ದಿನ ಗಲ್ಲಿ ಗಲ್ಲಿ ಸುತ್ತಾಡಿ ಮಹಿಳೆಯರನ್ನು ನೋಡುವುದೇ ಗಜಾನನನ ನಿತ್ಯ ಕಾಯಕವಾಗಿತ್ತು. ಹೀಗೆಂದು ಸ್ವತಃ ತಾನೇ ಪೊಲೀಸರ ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹಿಂಡಲಗಾ ಜೈಲಿಗೆ ಅಟ್ಟಿದ್ದಾರೆ. ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜೆಜೆಎಂ ಪೈಪ್ಗೆ ಚರಂಡಿ ನೀರು ಸೇರ್ಪಡೆ; ನೀರು ಸೇವಿಸಿದ 30ಕ್ಕೂ ಹೆಚ್ಚು ಜನರು ಅಸ್ವಸ್ಥ
Web Stories