ಚಿಕ್ಕೋಡಿ: ಪೊಲೀಸರಿಗೆ ಮಾಹಿತಿ ನೀಡಿದರೆ ನಿಮ್ಮ ಮನೆ ಸರ್ವನಾಶವಾಗುತ್ತದೆ ಎಂದು ವಿಚಿತ್ರವಾದ ಡೆತ್ನೋಟ್ (Death Note) ಬರೆದು ಯುವಕನೋಬ್ಬ (Young Man) ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಳಗಾವಿ (Belegavi) ಜಿಲ್ಲೆಯ ಅಥಣಿ ತಾಲೂಕಿನ ತಾವಂಶಿ ಗ್ರಾಮದಲ್ಲಿ ನಡೆದಿದೆ.
ಆಕಾಶ್ ಮಹಾದೇವ ಮಿರ್ಜಿ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ನನ್ನ ಸಾವಿಗೆ ನಾನೇ ಕಾರಣ. ನಮ್ಮ ಮನೆಯವರು ಕಾರಣರಲ್ಲ. ಯಾವ ಹುಡುಗಿಗಾಗಿಯೂ ನಾನು ಆತ್ಮಹತ್ಯೆ ಮಾಡಿಕೊಂಡಿಲ್ಲ. ಯಾರಾದರೂ ಪೊಲೀಸ್ ಸ್ಟೇಷನ್ಗೆ ಹೋದರೆ ನಿಮ್ಮ ಮನೆ ಸರ್ವನಾಶವಾಗುತ್ತದೆ ಎಂದು ಡೆತ್ನೋಟ್ ಬರೆದು ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಮಲಗಿದ್ದಲ್ಲೇ ಪ್ರಾಣಬಿಟ್ಟ ‘ದಿ ವೈರ್’ ಖ್ಯಾತಿಯ ನಟ ಲ್ಯಾನ್ಸ್ ರೆಡ್ಡಿಕ್
ಮೃತ ಆಕಾಶ್ ಅಥಣಿಯ ಎಸ್ಎಸ್ಎಂಸಿ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದ. ತಾವಂಶಿ ಗ್ರಾಮದ ಅನಂತಪೂರ ರಸ್ತೆ ಪರಮಾನಂದ ತೋಟದ ಬಳಿ ನೇಣಿಗೆ ಶರಣಾಗಿದ್ದಾನೆ. ಆದರೆ ವಿಚಿತ್ರವಾಗಿ ಡೆತ್ನೋಟ್ ಬರೆದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ವ್ಹೀಲಿಂಗ್ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ