ಕೊಪ್ಪಳ: ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಗೃಹಿಣಿಯೊಬ್ಬರು ವಿಷ ಸೇವಿಸಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಜಿಲ್ಲೆಯ ಯಲಬುರ್ಗಾ ಬೋದೂರು ಗ್ರಾಮದ ಚೆನ್ನಬಸವ ಎಂಬವರಿಗೆ ಹಿರೇಹರನಹಳ್ಳಿಯ ನಾಗರತ್ನಾ ಎಂಬವರನ್ನು ಒಂದೂವರೆ ವರ್ಷದ ಹಿಂದೆ ಮದ್ವೆ ಮಾಡಿಕೊಡಲಾಗಿತ್ತು. ಆದ್ರೆ, ನಾಗರತ್ನಗೆ ಅತ್ತೆ ಅಂಬವ್ವ, ಮಾವ ಸಿದ್ದಪ್ಪ, ಪತಿ ಚೆನ್ನಬಸವ ಮೈಮೇಲೆ ಬರೆ ಹಾಕಿ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದಾರೆ.
- Advertisement 2
ಇದರಿಂದ ನೊಂದ ನಾಗರತ್ನ ವಿಷ ಸೇವಿಸಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಸಾವು ಬದುಕಿನ ಹೋರಾಟ ನಡೆಸ್ತಿದ್ದಾರೆ. ಆದ್ರೆ, ಪತಿ ಚೆನ್ನಬಸವನ ಮನೆಯವರೇ ವಿಷ ಕುಡಿಸಿದ್ದಾರೆ ಅಂತ ನಾಗರತ್ನ ಪೋಷಕರು ಇದೀಗ ಆರೋಪಿಸುತ್ತಿದ್ದಾರೆ.
- Advertisement 3
- Advertisement 4