ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಜನ ಮನೆಯಲ್ಲೇ ಬಂಧಿಯಾಗಿದ್ದಾರೆ. ಪರಿಣಾಮ ಊಟಕ್ಕೂ ಪರದಾಡುತ್ತಿರುವವರಿಗೆ ಕೆಲವರು ಸಹಾಯ ಹಸ್ತ ಚಾಚುತ್ತಿದ್ದಾರೆ. ಈ ಮಧ್ಯೆ ಮಂಗಳಮುಖಿಯೊಬ್ಬರಿಗೆ ನಮಗೆ ಒಂದು ಹೊತ್ತಿನ ಊಟ ಕೊಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಹೌದು. ಬೆಂಗಳೂರಿನಲ್ಲಿ ಮಂಗಳಮುಖಿಯರು ಹಸಿವಿನಿಂದ ಬಳಲುತ್ತಿದ್ದು, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಯಾರಾದರೂ ನಮಗೆ ಒಂದು ಹೊತ್ತಿನ ಊಟ ಕೊಡಿ ಅಂತ ಕೈ ಮುಗಿದು ಕಣ್ಣೀರು ಹಾಕಿದ್ದಾರೆ.
ಕಳೆದ ಮೂರು ದಿನಗಳಿಂದ ಊಟವಿಲ್ಲದೇ ಬರೀ ನೀರು ಸೇವಿಸಿ ಜೀವನ ಕಳೆಯುತ್ತಿದ್ದಾರೆ. ಭಿಕ್ಷಾಟನೆ ಮಾಡಲು ಈಗ ಟೋಲ್, ರೋಡ್, ಅಂಗಡಿ, ಹೊಟೇಲ್ ಗಳು ಬಂದ್ ಆಗಿವೆ. ರಸ್ತೆಗೆ ಯಾರೂ ಬರುತ್ತಿಲ್ಲ. ಯಾರಿಂದ ನಾವು ಹಣ ಕೇಳೋಕೆ ಆಗುತ್ತೆ. ರೂಮ್ ಬಾಡಿಗೆ ಕಟ್ಟೋಕು ಆಗ್ತಿಲ್ಲ. ಯಾರಾದರೂ ನಮ್ಮ ನೆರವಿಗೆ ಬನ್ನಿ ಅಂತ ಮಂಗಳಮುಖಿಯರು ಕೈ ಮುಗಿದು ಕೇಳ್ಕೊಂಡಿದ್ದಾರೆ.