ರಾಯಚೂರು: ಉಕ್ರೇನ್ನಲ್ಲಿ ನಾನಾ ಕಷ್ಟ ಎದುರಿಸಿ ದೇಶಕ್ಕೆ ಮರಳಿ ಬಂದ ವಿದ್ಯಾರ್ಥಿ ಈಗ ಸಮಾಜ ಸೇವೆಗೆ ಮುಂದಾಗಿದ್ದಾನೆ.
ಬಿಸಿಲನಾಡು ರಾಯಚೂರಿನ ಮೆಡಿಕಲ್ ವಿದ್ಯಾರ್ಥಿ ಮೊಹಮ್ಮದ್ ಅಸರ್ ಹುಸೇನ್, ಉಕ್ರೇನ್ ರಷ್ಯಾ ಯುದ್ದ ಹಿನ್ನೆಲೆ ಮೈನಸ್ 10 ಡಿಗ್ರಿಯಲ್ಲಿ ಗಂಟೆಗಟ್ಟಲೆ ಕಾದು ಉಕ್ರೇನ್ ಗಡಿದಾಟಿ ಭಾರತಕ್ಕೆ ಬಂದಿದ್ದಾನೆ. ರಾಯಚೂರಿಗೆ ಬಂದ ವಿದ್ಯಾರ್ಥಿ ಈಗ ಸಮಾಜಸೇವೆ ಮಡಲು ಮುಂದಾಗಿದ್ದಾನೆ.
ಹಾವುಗಳ ರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ಹಾವಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾನೆ. ತಂದೆ ಉರಗತಜ್ಞ ಅಫ್ಸರ್ ಹುಸೇನ್ ಕಳೆದ 32 ವರ್ಷಗಳಿಂದ ಹಾವುಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ತಂದೆಯಿಂದ ವಿವಿಧ ಬಗೆಯ ಹಾವುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿರುವ ಅಸರ್ ಹುಸೇನ್ ಈಗ ತಾನೂ ಸಹ ಹಾವುಗಳ ರಕ್ಷಣೆ ಕೆಲಸ ಮಾಡುತ್ತಿದ್ದಾನೆ. ಯಾರೇ ಫೋನ್ ಕರೆ ಮಾಡಿದರು ಅವರ ಮನೆ, ಕಚೇರಿಗೆ ತೆರಳಿ ಹಾವುಗಳ ಹಿಡಿದು ಕಾಡಿಗೆ ಬಿಡುವ ಕೆಲಸಕ್ಕೆ ಮುಂದಾಗಿದ್ದಾನೆ. ಇದನ್ನೂ ಓದಿ: 3ನೇ ತರಗತಿ ಬಾಲಕಿಯ ಬಟ್ಟೆ ಬಿಚ್ಚಿ ಅತ್ಯಾಚಾರಗೈದ ಪ್ರಿನ್ಸಿಪಾಲ್!
ಉಕ್ರೇನ್ನ ಇವ್ಯಾನೋ ಫ್ರಾನ್ಸಿವಿಸ್ಕ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಮೊದಲ ವರ್ಷದ ಎಂಬಿಬಿಎಸ್ ಓದುತ್ತಿದ್ದ ಅಸರ್ ಹುಸೇನ್ ದೇಶಕ್ಕೆ ಮರಳಿರುವುದರಿಂದ ಮುಂದಿನ ಓದಿನ ಬಗ್ಗೆ ಗೊಂದಲದಲ್ಲಿದ್ದಾನೆ. ತಾನು ಸುರಕ್ಷಿತವಾಗಿ ಬಂದ ಹಾಗೇ ಉಳಿದ ವಿದ್ಯಾರ್ಥಿಗಳನ್ನು ಕರೆತರಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಿದ್ದಾನೆ.
ಅಸರ್ ಇದ್ದ ಸ್ಥಳದಿಂದ ಕೇವಲ 10 ಕಿ.ಮೀ ದೂರದಲ್ಲಿ ರಷ್ಯಾ ದಾಳಿ ಜೋರಾಗಿತ್ತು. ಸ್ಫೋಟದ ಶಬ್ಧಕ್ಕೆ ಹೆದರಿ ಬಂಕರ್ಗೆ ಓಡುತ್ತಿದ್ದದ್ದನ್ನ ನೆನೆದು ಇನ್ನೂ ಉಳಿದವರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾನೆ. ಉಕ್ರೇನ್ ಗಡಿಯಲ್ಲಿ ಕುಡಿಯಲು ಊಟ, ನೀರು ಸಿಗದೆ ಕಷ್ಟ ಅನುಭವಿಸಿದ್ದು. ಗಡಿಗೆ ತಲುಪಲು 18 ಕಿ.ಮೀ ನಡೆದುಕೊಂಡೆ ಹೋದ ಅನುಭವ ಹಂಚಿಕೊಂಡಿದ್ದಾನೆ. ಇನ್ನೂ ಮಗ ಮನೆಗೆ ಸುರಕ್ಷಿತವಾಗಿ ಬಂದಿರುವುದಕ್ಕೆ ಪೋಷಕರು ಸಂತಸ ವ್ಯಕ್ತಪಡಿಸಿದ್ದು. ತಂದೆ ಉರಗತಜ್ಞ ತಮ್ಮ ಜೊತೆಯೆ ಮಗನನ್ನು ಹಾವುಗಳ ರಕ್ಷಣಾ ಕಾರ್ಯಕ್ಕೆ ಕರೆದೊಯ್ಯುತ್ತಿದ್ದಾರೆ. ಇದನ್ನೂ ಓದಿ: ಡಬಲ್ ಎಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ ಇದು: ಸಿದ್ದು ಕಿಡಿ
ಒಟ್ಟಿನಲ್ಲಿ, ಯುದ್ದ ಭೂಮಿಯಿಂದ ಜೀವ ಉಳಿಸಿಕೊಂಡು ಬಂದವನು ಈಗ ಹಾವುಗಳ ರಕ್ಷಣೆ ಹಾಗೂ ಹಾವುಗಳಿಂದ ಜನರ ರಕ್ಷಣೆಗೆ ಮುಂದಾಗಿದ್ದಾನೆ.