ಹಾವೇರಿ: ಆಸ್ತಿಗಾಗಿ ಸಹೋದರರ ನಡುವೆ ನಡೆದ ಕಲಹ ಬಚ್ಚಲಲ್ಲಿ ಅನಾವರಣವಾಗಿದೆ. ಅಣ್ಣನ ಮನೆಯ ಅಡುಗೆಮನೆಯಲ್ಲಿ, ಅತ್ತಿಗೆಯ ಮುಂದೆ ಮೈದುನ ಅರೆ ಬೆತ್ತಲೆಯಾಗಿ ಸ್ನಾನ ಮಾಡಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಡೊಳ್ಳೇಶ್ವರ ಗ್ರಾಮದಲ್ಲಿ ನಡೆದಿದೆ.
ಮಾಲತೇಶ ಬಾರ್ಕಿ ಮತ್ತು ಗಣೇಶ ಬಾರ್ಕಿ ಸಹೋದರರ ಮನೆಗಳು ಅಕ್ಕಪಕ್ಕದಲ್ಲಿ ಇದೆ. ಪ್ರಜ್ಞಾವಂತನಾದ ಗಣೇಶ, ತನ್ನ ಅಣ್ಣ ಮಾಲತೇಶ ಹೆಚ್ಚಿಗೆ ಜಾಗ ಹೊಂದಿದ್ದಾನೆ ಎಂದು ಮಾಲತೇಶನ ಮನೆಗೆ ತೆರಳಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಅತ್ತಿಗೆಯ ಮುಂದೆಯೇ ಅರಬೆತ್ತಲೆಯಾಗಿ ಸ್ನಾನ ಮಾಡಿದ್ದಾನೆ.
ಈ ದೃಶ್ಯವನ್ನ ಮಾಲತೇಶನ ಮಕ್ಕಳು ಚಿತ್ರಿಕರಿಸಿಕೊಂಡಿದ್ದಾರೆ. ಆದ್ರೆ ಈ ದೃಶ್ಯ ಸೆರೆಹಿಡಿಯುತ್ತಿದ್ದ ಮಕ್ಕಳಿಗೆ ಹೆದರಿಸಿ ಯಾರಿಗೆ ಬೇಕಾದ್ರು ಕೋಡ್ರಿ. ನನಗೇನು ಮಾಡಬೇಕು ಎನ್ನುವುದು ಗೋತ್ತು ಅಂತಾ ಅತ್ತಿಗೆಗೆ ದಬಾಯಿಸಿದ್ದಾನೆ.
ಅಲ್ಲದೆ ಮನೆಯಲ್ಲಿ ಹಿರಿಯಣ್ಣ ಇಲ್ಲದ ಸಮಯದಲ್ಲಿ ಮಕ್ಕಳಿಗೆ ಹೊಡೆಯುವುದು, ಮನೆಬಿಟ್ಟು ಹೋಗುವಂತೆ ದೌರ್ಜನ್ಯವೆಸಗುತ್ತಿದ್ದಾನೆಂದು ನೊಂದ ಕುಟುಂಬ ಈ ಸತ್ಯವನ್ನ ಮಾಧ್ಯಮದ ಮುಂದೆ ಬಿಚ್ಚಿಟ್ಟಿದೆ.
ತಮ್ಮನ ಈ ಕೃತ್ಯ ಅಣ್ಣನನ್ನ ತಲೆ ತಗ್ಗಿಸುವಂತೆ ಮಾಡಿದೆ. ಅಲ್ಲದೆ ತಾಯಿ ಸಮಾನಳಾದ ಅತ್ತಿಗೆಯ ಎದುರು, ಅಡುಗೆ ಮನೆಯಲ್ಲಿಯೇ ಈ ರೀತಿ ಅರಬೇತ್ತಲೆಯಾಗಿ ಮನೆ ಬಿಡುವಂತೆ ಸ್ನಾನ ಮಾಡಿರುವುದು ಸಮಾಜವೇ ನಾಚುವಂತಾಗಿದೆ.