ಇರಾನ್ ಮತ್ತು ಅಮೆರಿಕ (Iran-US) ನಡುವೆ ಶಾಂತಿ ಮಾತುಕತೆ ಆಗುವ ಲಕ್ಷಣ ಸಧ್ಯಕ್ಕಂತೂ ಕಾಣುತ್ತಿಲ್ಲ. ಹಾರ್ಮುಜ್ ಜಲಸಂಧಿ (Strait of Hormuz) ಬಿಕ್ಕಟ್ಟು ಕೂಡ ತಕ್ಷಣಕ್ಕೆ ಶಮವಾಗುವ ಸಾಧ್ಯತೆ ಗೋಚರಿಸುತ್ತಿಲ್ಲ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕದನ ವಿರಾಮದ ಆಟ ಆಡುತ್ತಿರುವಂತೆ ಕಾಣುತ್ತಿದೆ. ಒಂದು ಸುತ್ತಿನ ಮಾತುಕತೆ ವಿಫಲವಾಯಿತು. ಇನ್ನು ಮತ್ತೊಂದು ಸುತ್ತಿನ ಮಾತುಕತೆಯನ್ನು ಅನಿರ್ಧಿಷ್ಟಾವಧಿ ವರೆಗೆ ಟ್ರಂಪ್ ಮುಂದೂಡಿದ್ದರು. ಶಾಂತಿ ಒಪ್ಪಂದಕ್ಕೆ ಪಾಕಿಸ್ತಾನಕ್ಕೆ ಬರಬೇಕಿದ್ದ ಅಮೆರಿಕ ಈಗ ತನ್ನ ಪ್ರವಾಸ ರದ್ದುಗೊಳಿಸಿದೆ. ಇದನ್ನರಿತು ಇರಾನ್ ಸಚಿವರು ತಮ್ಮ ದೇಶಕ್ಕೆ ವಾಪಸ್ ಆಗಿದ್ದಾರೆ. ಇಬ್ಬರ ನಡುವೆ ಶಾಂತಿ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನಕ್ಕೆ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಮಧ್ಯಸ್ಥಿಕೆ ಎಂಬ ದೊಡ್ಡ ಜವಾಬ್ದಾರಿ ಹೊತ್ತು ಪಾಕ್ ಮುಖಭಂಗ ಅನುಭವಿಸಿದೆ. ಈ ಎಲ್ಲಾ ಪರಿಸ್ಥಿತಿಗಳನ್ನು ಭಾರತ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ.
ಶಾಂತಿ ಮಾತುಕತೆ, ಮಧ್ಯಸ್ಥಿಕೆ ಮೊದಲಾದ ವಿಚಾರಗಳಲ್ಲಿ ಸಾಕಷ್ಟು ಲೆಕ್ಕಾಚಾರ ಇದೆ. ಇರಾನ್ ಮೇಲಿನ ಅಮೆರಿಕ ದಾಳಿ ನಿಲ್ಲಿಸಲು ಟ್ರಂಪ್ ಮನವೊಲಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾದರೆ, ಜಾಗತಿಕವಾಗಿ ಅದರ ಪ್ರೊಫೈಲ್ ಮತ್ತಷ್ಟು ಹೆಚ್ಚುತ್ತದೆ. ಆದರೆ, ಸಧ್ಯದ ಮಟ್ಟಿಗೆ ಆ ಯಾವ ಲಕ್ಷಣವೂ ಕಾಣುತ್ತಿಲ್ಲ. ಶಾಂತಿ ಮಾತುಕತೆ ವಿಚಾರದಲ್ಲಿ ಪಾಕ್ ಗಂಭೀರವಾಗಿ ತೊಡಗಿಸಿಕೊಳ್ಳುತ್ತಿರುವುದೇಕೆ? ಮಧ್ಯಸ್ಥಿಕೆ ಪ್ರಯತ್ನಗಳಿಂದ ಏನು ಪಡೆಯಬಹುದು? ಈ ಬೆಳವಣಿಗೆಯಲ್ಲಿ ಭಾರತದ ನಿಲುವೇನು ಎಂಬುದರ ಕುರಿತು ಇಲ್ಲಿ ಚರ್ಚಿಸಲಾಗಿದೆ. ಇದನ್ನೂ ಓದಿ: ಟ್ರಂಪ್, ಸರ್ಕಾರದ ಮುಖ್ಯ ಅಧಿಕಾರಿಗಳೇ ಹಂತಕನ ಟಾರ್ಗೆಟ್ – ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

ಯುದ್ಧದಿಂದ ತತ್ತರಿಸಿದ ಪಾಕ್
ಇರಾನ್ ಯುದ್ಧ ಕೊನೆಗೊಳಿಸುವುದು ಪಾಕಿಸ್ತಾನಕ್ಕೆ ಅನಿವಾರ್ಯವಾಗಿದೆ. ಯುದ್ಧದಿಂದ ಹಾರ್ಮುಜ್ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಇದು ಪಾಕ್ಗೆ ಭಾರಿ ಪೆಟ್ಟು ಕೊಟ್ಟಿದೆ. ಆ ದೇಶದ ಆರ್ಥಿಕತೆಯು ಹಾರ್ಮುಜ್ ಜಲಸಂಧಿ ಮಾರ್ಗದಿಂದ ಇಂಧನ ಆಮದುಗಳ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಇಂಧನ ಬಿಕ್ಕಟ್ಟು ಪಾಕ್ನ ದೇಶೀಯ ಪರಿಸ್ಥಿತಿಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ವರ್ಕ್ ಫ್ರಂ ಹೋಮ್, ಶಾಲಾ-ಕಾಲೇಜು-ಸರ್ಕಾರಿ ಕಚೇರಿಗಳಿಗೆ ರಜೆ ಪರಿಸ್ಥಿತಿ ತಲೆದೋರಿದೆ. ಲಕ್ಷಾಂತರ ಪಾಕಿಸ್ತಾನಿಯರು ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿದ್ದು, ಮನೆಯವರಿಗೆ ಹಣ ಕಳುಹಿಸುತ್ತಿದ್ದರು. ಯುದ್ಧದಿಂದ ಅವರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಕುಟುಂಬ ನಿರ್ವಹಣೆಯೂ ಕಷ್ಟಕರವಾಗಿದೆ. ಅಲ್ಲದೆ, ಹೆಚ್ಚುತ್ತಿರುವ ಇಂಧನ ವೆಚ್ಚಗಳು ಪ್ರತಿಯೊಂದು ದೇಶದ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಆದರೆ ಪಾಕಿಸ್ತಾನಕ್ಕೆ ಮತ್ತೊಂದು ಸಮಸ್ಯೆ ಇದೆ. ರಾಷ್ಟ್ರವು ಪ್ರಸ್ತುತ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಸಾಲ ಕಾರ್ಯಕ್ರಮದಲ್ಲಿದೆ. ಅದರ ಭಾಗವಾಗಿ ವಿದೇಶಿ ಕರೆನ್ಸಿ ನಿಕ್ಷೇಪಗಳನ್ನು ಒಂದು ನಿರ್ದಿಷ್ಟ ಮಟ್ಟದಲ್ಲಿ ಕಾಯ್ದುಕೊಳ್ಳುವ ಅಗತ್ಯವಿದೆ. ತೈಲಕ್ಕಾಗಿ ಹೆಚ್ಚು ಖರ್ಚು ಮಾಡುವುದರಿಂದ ಈ ನಿಕ್ಷೇಪವು ಖಾಲಿಯಾಗುತ್ತದೆ.
ಏರುತ್ತಿರುವ ತೈಲ ಬೆಲೆಗಳು ಆಮದು ವೆಚ್ಚವನ್ನು ಹೆಚ್ಚಿಸುತ್ತವೆ. ಹಣದುಬ್ಬರದ ಒತ್ತಡಗಳನ್ನು ತೀವ್ರಗೊಳಿಸುತ್ತವೆ. ವಿನಿಮಯ ದರದ ಮೇಲೆ ಕೆಳಮುಖ ಒತ್ತಡವನ್ನು ಬೀರುತ್ತವೆ. ಇದರಿಂದಾಗಿ ಆರ್ಥಿಕ ಚಟುವಟಿಕೆ ನಿಧಾನವಾಗುತ್ತದೆ. ಹಾರ್ಮುಜ್ ಜಲಸಂಧಿಯ ಬಂದ್ ತೆರವಾಗದಿದ್ದರೆ, ಕೈಗಾರಿಕಾ ಇನ್ಪುಟ್ ವೆಚ್ಚ ಹೆಚ್ಚಾಗಬಹುದು. ಒಟ್ಟಾರೆ ವ್ಯವಹಾರ ಸಂಪೂರ್ಣ ದುರ್ಬಲಗೊಳ್ಳಬಹುದು. ಹೆಚ್ಚಿನ ಇಂಧನ ಬೆಲೆಗಳು ವ್ಯಾಪಾರ ಕೊರತೆಯನ್ನು ಹೆಚ್ಚಿಸಬಹುದು. ಬಾಹ್ಯ ಹಣಕಾಸಿನ ಅಗತ್ಯಗಳನ್ನು ತಗ್ಗಿಸಬಹುದು ಎಂದು ಪಾಕಿಸ್ತಾನ್ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಎಕನಾಮಿಕ್ಸ್ (PIDE) ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಇರಾನ್ ದಾಳಿಯಲ್ಲಿ ಅಮೆರಿಕದ ನೆಲೆಗಳಿಗೆ ಭಾರಿ ಹಾನಿ – ದುರಸ್ತಿಗೆ ಬೇಕು ಶತಕೋಟಿ ಡಾಲರ್
ಪಾಕಿಸ್ತಾನಕ್ಕೆ ಯಾರು ಹಿತವರು?
ಒಂದು ಕಡೆ ಪಾಕಿಸ್ತಾನಕ್ಕೆ ಅಮೆರಿಕದೊಂದಿಗೆ ಆತ್ಮೀಯತೆ ಹೆಚ್ಚಾಗಿದೆ. ಮತ್ತೊಂದೆಡೆ ಇರಾನ್ನೊಂದಿಗೆ ಆಳವಾದ ಸಂಬಂಧ ಹೊಂದಿದ್ದು, 900 ಕಿಮೀ ಗಡಿಯನ್ನು ಕೂಡ ಹಂಚಿಕೊಂಡಿದೆ. ಇರಾನ್ ದಾಳಿ ಮಾಡಿದ ಎಲ್ಲಾ ಗಲ್ಫ್ ರಾಷ್ಟ್ರಗಳೊಂದಿಗೆ, ವಿಶೇಷವಾಗಿ ಪ್ರಮುಖ ದಾನಿ ಸೌದಿ ಅರೇಬಿಯಾದೊಂದಿಗೆ ಪಾಕ್ ಉತ್ತಮ ಸಂಬಂಧ ಹೊಂದಿದೆ. ಅದರ ಇನ್ನೊಂದು ಪ್ರಮುಖ ದಾನಿ ಚೀನಾ, ಯುದ್ಧದಿಂದಾಗಿ ಆರ್ಥಿಕವಾಗಿ ಬಳಲುತ್ತಿದೆ. ಹೀಗಾಗಿ, ತನ್ನ ಯಾವುದೇ ಸಂಬAಧಗಳನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸುವ ಮೊದಲು ಯುದ್ಧ ಕೊನೆಗೊಳ್ಳಬೇಕೆಂದು ಪಾಕಿಸ್ತಾನ ಬಯಸುತ್ತದೆ. ಪಾಕಿಸ್ತಾನಕ್ಕೆ ಎಲ್ಲರೂ ಮುಖ್ಯ. ಆದರೆ, ಯುದ್ಧ ಪಾಕಿಸ್ತಾನವನ್ನು ಅತಂತ್ರ ಸ್ಥಿತಿಗೆ ನೂಕಿದೆ.

ಶಾಂತಿ ಮಾತುಕತೆ ಪಾಕ್ಗೆ ಏಕೆ ಮುಖ್ಯ?
ಇರಾನ್ನಲ್ಲಿರುವ ಯಾವುದೇ ಇಸ್ರೇಲಿ ಪ್ರಭಾವಿತ ಸರ್ಕಾರವು ತನ್ನ ರಾಷ್ಟ್ರೀಯ ಭದ್ರತೆಗೆ ವಿನಾಶಕಾರಿಯಾಗಬಹುದು ಎಂಬ ಕಳವಳ ಪಾಕ್ಗೆ ಇದೆ. ಪಾಕಿಸ್ತಾನದ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳಿಗಾಗಿ ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗಳನ್ನು ನಿಲ್ಲಿಸಬೇಕು. ಇರಾನ್ ಆರ್ಥಿಕವಾಗಿ, ತನ್ನ ಇಂಧನ ಭದ್ರತೆಗಾಗಿ ತೆರೆದುಕೊಳ್ಳಬೇಕೆಂದು ಪಾಕ್ ಬಯಸುತ್ತದೆ. ಆದ್ದರಿಂದ ಶಾಂತಿ ಮಾತುಕತೆಯ ಪ್ರಯತ್ನಗಳು ಪಾಕಿಸ್ತಾನಕ್ಕೆ ಬದುಕುಳಿಯುವ ತಂತ್ರಗಳಾಗಿವೆ ಎನ್ನುತ್ತಾರೆ ಪಾಕಿಸ್ತಾನದ ರಕ್ಷಣಾ ಮತ್ತು ಭದ್ರತಾ ತಜ್ಞ ಅಲಿ ಚಿಶ್ತಿ.
ಭಯೋತ್ಪಾದಕರ ಬೆಂಬಲಿತ ದೇಶದಿಂದ ಶಾಂತಿ ಮಂತ್ರ!?
ನಾಲ್ಕು ವರ್ಷಗಳ ಹಿಂದೆ, 2022ರ ಅಕ್ಟೋಬರ್ನಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ಜೋ ಬೈಡನ್, ‘ಪಾಕಿಸ್ತಾನವು ಯಾವುದೇ ಒಗ್ಗಟ್ಟು ಇಲ್ಲದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದಾಗಿರಬಹುದು’ ಎಂದು ಆತಂಕ ವ್ಯಕ್ತಪಡಿಸಿದ್ದರು. ಪಾಕಿಸ್ತಾನ ಅನೇಕ ಭಾಗಗಳಲ್ಲಿ ಭಯೋತ್ಪಾದಕರನ್ನು ಬೆಂಬಲಿಸುವ ದೇಶವಾಗಿದೆ. ಅಂತಹ ದೇಶ ಈಗ ಜಾಗತಿಕ ಆರ್ಥಿಕತೆಗೆ ಬೆದರಿಕೆ ಹಾಕುವ ಯುದ್ಧವನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಎರಡು ವಾರಗಳ ಹಿಂದೆ ಮೊದಲು ಕದನ ವಿರಾಮವನ್ನು ಘೋಷಿಸಿದಾಗ, ಯುರೋಪಿಯನ್ ಒಕ್ಕೂಟ ಮತ್ತು ಗಲ್ಫ್ ಕೌನ್ಸಿಲ್ ದೇಶಗಳು ಸಹ ಪಾಕಿಸ್ತಾನದ ಪಾತ್ರವನ್ನು ಮೆಚ್ಚಿಕೊಂಡಿದ್ದವು.
ಪಾಕಿಸ್ತಾನವು ಶಾಂತಿ ಮಂಡಳಿಯ ಸದಸ್ಯತ್ವದೊಂದಿಗೆ ಅಂತಹ ಸಾರ್ವತ್ರಿಕ ಅನುಮೋದನೆಯು ಜಾಗತಿಕ ಉನ್ನತ ಕೋಷ್ಟಕಗಳಲ್ಲಿ ಸ್ಥಾನವನ್ನು ಪಡೆಯಬಹುದು ಎಂದು ಆಶಿಸಬಹುದು. ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಪಾಕಿಸ್ತಾನದ ಆರ್ಥಿಕತೆಗೆ ಸಾಲಗಳು ಮತ್ತು ವಿದೇಶಿ ಹೂಡಿಕೆಗಳ ಅಗತ್ಯವಿದೆ ಮತ್ತು ಉತ್ತಮ ರಾಜತಾಂತ್ರಿಕ ಚಿತ್ರಣವು ಅದಕ್ಕೆ ಸಹಾಯ ಮಾಡುತ್ತದೆ. ಈಗಿನ ಶಾಂತಿ ಮಾತುಕತೆ ಸನ್ನಿವೇಶವನ್ನು ಗಮನಿಸಿ ಪಾಕಿಸ್ತಾನದ ಬಗ್ಗೆ ತಜ್ಞರು ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಾಂತಿ ಒಪ್ಪಂದದ ಮಾತುಕತೆ ಪ್ರಸ್ತುತ ಆಟದಂತೆ ಕಂಡುಬರುತ್ತಿದೆ. ಪಾಕ್ ಮಧ್ಯಸ್ಥಿಕೆಯಲ್ಲಿ ಯಾವುದೇ ಪ್ರಯೋಜನವಾದಂತೆ ಕಾಣುತ್ತಿಲ್ಲ. ಇದರಿಂದ ಪಾಕಿಸ್ತಾನ ದೂಷಣೆಗೆ ಒಳಗಾಗುತ್ತಿದೆ. ಪಾಕಿಸ್ತಾನವು ತಟಸ್ಥ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವುದಕ್ಕಿಂತ ಹೆಚ್ಚಾಗಿ ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.
ಯುದ್ಧವನ್ನು ನಿಲ್ಲಿಸುವಲ್ಲಿ ಪಾಕಿಸ್ತಾನದ ರಾಜತಾಂತ್ರಿಕ ಪಾತ್ರವು ನಿರ್ಣಾಯಕವಾಗಿದೆ. ಪಾಕಿಸ್ತಾನವು ಪ್ರಾದೇಶಿಕ ಪ್ರಭಾವವನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿದೆ. ಆದಾಗ್ಯೂ, ಅದು ಜಾಗರೂಕರಾಗಿರಬೇಕು. ಅಮೆರಿಕ ಮತ್ತೆ ಇರಾನ್ಗೆ ದ್ರೋಹ ಮಾಡಲು ಪ್ರಯತ್ನಿಸಿದರೆ, ಪಾಕಿಸ್ತಾನದ ನಿಲುವು ತುಂಬಾ ವಿಚಿತ್ರವಾಗಿರುತ್ತದೆ ಎಂದು ಕರಾಚಿ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಂಬಂಧಗಳ ವಿಭಾಗದ ಮಾಜಿ ಮುಖ್ಯಸ್ಥ ಮೂನಿಸ್ ಅಹ್ಮರ್ ತಿಳಿಸಿದ್ದಾರೆ.
ಭಾರತಕ್ಕೆ ಇದೆಲ್ಲರದ ಅರ್ಥವೇನು?
ಯಾರೇ ಮಧ್ಯಸ್ಥಿಕೆ ವಹಿಸಿದರೂ, ತಕ್ಷಣದ ಅವಧಿಯಲ್ಲಿ ಯುದ್ಧವನ್ನು ಕೊನೆಗೊಳಿಸುವುದು ಭಾರತಕ್ಕೆ ಒಳ್ಳೆಯದು. ಮಾತುಕತೆಗಳನ್ನು ಕೆಲವರು ಪಾಕಿಸ್ತಾನದ ‘ಹೈಬ್ರಿಡ್ ಆಡಳಿತ’ದ ವಿಜಯವೆಂದು ನೋಡಿದ್ದಾರೆ. ಶೆಹಬಾಜ್ ಷರೀಫ್ ಗಲ್ಫ್ ಮತ್ತು ಇತರ ಪ್ರಾದೇಶಿಕ ದೇಶಗಳೊಂದಿಗೆ ಮಾತನಾಡುತ್ತಿದ್ದರೆ, ಮುನೀರ್ ವಾಷಿಂಗ್ಟನ್ ಅನ್ನು ನಿಭಾಯಿಸಿದ್ದಾರೆ. ಮುನೀರ್, ಈ ಹಿಂದೆ ಗೂಢಚಾರ ಸಂಸ್ಥೆ ಐಎಸ್ಐನಲ್ಲಿ ಪಾತ್ರ ವಹಿಸಿದ್ದರು, ಇರಾನ್ನೊಂದಿಗೆ ಕೆಲಸ ಮಾಡಿದ್ದರು. ಟ್ರಂಪ್ ಅವರ ದೇಶದ ಜ್ಞಾನದಿಂದ ಪ್ರಭಾವಿತರಾಗಿದ್ದರು. ಮುನೀರ್ ಮತ್ತು ಆ ಮೂಲಕ ಮಿಲಿಟರಿಯನ್ನು ಬಲಪಡಿಸುವುದು ಪಾಕಿಸ್ತಾನದ ಪ್ರಜಾಪ್ರಭುತ್ವಕ್ಕೆ ಮಾತ್ರವಲ್ಲದೆ ಭಾರತಕ್ಕೂ ಪರಿಣಾಮಗಳನ್ನು ಬೀರುತ್ತದೆ. ನಾಗರಿಕ ನಾಯಕತ್ವವು ತುಲನಾತ್ಮಕವಾಗಿ ಪ್ರಬಲವಾಗಿದ್ದಾಗ ಪಾಕಿಸ್ತಾನವು ಭಾರತಕ್ಕೆ ಶಾಂತಿ ಪ್ರಸ್ತಾಪಗಳನ್ನು ಮಾಡಿದೆ. ‘ಶಾಂತಿ ಸುಗಮಕಾರ’ ಎಂಬ ಹಣೆಪಟ್ಟಿಯನ್ನು ಜಾಗತಿಕವಾಗಿ ಪಡೆದ ಪಾಕಿಸ್ತಾನ ಮುಂದೆ ಯಾವ ರೀತಿ ನಡೆದುಕೊಳ್ಳುತ್ತದೆ ಎಂಬುದು ಭಾರತಕ್ಕೆ ಮುಖ್ಯವಾಗುತ್ತದೆ.

