Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರೈತ, ಸರ್ಕಾರ, ಮಾಧ್ಯಮಗಳ ನಡುವಿನ ಸೌಹಾರ್ದ ಮಾತುಕತೆ ನಿಂತು ಹೋಗಿದೆ: ಎಚ್.ಆರ್ ರಂಗನಾಥ್ ಬೇಸರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ರೈತ, ಸರ್ಕಾರ, ಮಾಧ್ಯಮಗಳ ನಡುವಿನ ಸೌಹಾರ್ದ ಮಾತುಕತೆ ನಿಂತು ಹೋಗಿದೆ: ಎಚ್.ಆರ್ ರಂಗನಾಥ್ ಬೇಸರ

Districts

ರೈತ, ಸರ್ಕಾರ, ಮಾಧ್ಯಮಗಳ ನಡುವಿನ ಸೌಹಾರ್ದ ಮಾತುಕತೆ ನಿಂತು ಹೋಗಿದೆ: ಎಚ್.ಆರ್ ರಂಗನಾಥ್ ಬೇಸರ

Public TV
Last updated: December 26, 2021 7:54 pm
Public TV
Share
3 Min Read
raita samavesha
SHARE

ಮೈಸೂರು: ದೇಶ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಕೃಷಿ ವಿಚಾರದ ಬಗ್ಗೆ ರೈತರು, ಸರ್ಕಾರ ಹಾಗೂ ಮಾಧ್ಯಮಗಳು ನಡೆಸುವ ಸೌಹಾರ್ದ ಮಾತುಕತೆ ನಿಂತು ಹೋಗಿದೆ ಎಂದು ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್.ಆರ್. ರಂಗನಾಥ್ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಮಟ್ಟದ ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ಸೌಹಾರ್ದ ಮಾತುಕತೆ ನಿಂತು ರೈತ ಸಮಸ್ಯೆಗಳಿಗೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಸಮಗ್ರ ರೈತ ಚಳವಳಿ ಕಲ್ಪನೆ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಅವರು, ರೈತ ಈ ದೇಶದಲ್ಲಿ ಮತ ಅಲ್ಲ. ಸಮರ್ಥ ರೈತ ಹೋರಾಟ ಮತ್ತೆ ಶುರುವಾಗಬೇಕು. ರೈತ ಸಂಘಟನೆ ಹೇಳುತ್ತವೆ ಎಂದರೆ ಸರ್ಕಾರ ಆ ಮಾತು ಕೇಳಬೇಕು. ಹಿಂದಿನ ಚಳವಳಿಯ ಶಕ್ತಿ ರೈತ ಹೋರಾಟಕ್ಕೆ ಬರಬೇಕಿದೆ ಎಂದು ಹೇಳಿದರು.

raita samavesha 2

ಸರ್ಕಾರ ನೂತನ ಕಾನೂನುಗಳನ್ನು ತರುವಾಗ ರೈತರನ್ನು ಕೂರಿಸಿಕೊಂಡು ಚರ್ಚೆ ನಡೆಸಬೇಕು. ಈ ರೀತಿಯ ಸೌಜನ್ಯವನ್ನು ಸರ್ಕಾರ ಇಂದು ಕಳೆದುಕೊಂಡಿದೆ. ಇದರಿಂದಾಗಿ ಕೆಲವೊಮ್ಮೆ ಸರ್ಕಾರ ರೈತರಿಗೆ ಒಳ್ಳೆಯದಾಗುವ ಕಾನೂನನ್ನು ತಂದರೂ ಅದನ್ನು ಒಪ್ಪಿಕೊಳ್ಳದಂತ ಪರಿಸ್ಥಿತಿ ರೈತರಲಿಲ್ಲದ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.

ಕಬ್ಬು ಬೆಳೆಯುವುದು ಸುಲಭ ಎನ್ನುತ್ತಾರೆ. ಆದರೆ ರೈತನಿಗೆ ಅದರ ಕಷ್ಟ ಗೊತ್ತಿದೆ. ಕಬ್ಬಿಗೆ ಸರ್ಕಾರಗಳು ನಿಗದಿ ಪಡಿಸುವ ಬೆಲೆ ಬೇರೆ ಆಗಿರುತ್ತದೆ. ಕಾರ್ಖಾನೆಗಳು ನಿಗದಿಗೊಳಿಸುವ ಬೆಲೆಯೇ ಬೇರೆಯಾಗಿದೆ. ಇದರಿಂದಾಗಿ ರೈತ ತೊಂದರೆಗೀಡಾಗುತ್ತಾನೆ ಎಂದು ನುಡಿದರು.

ಇತ್ತೀಚಿನ ದಿನಗಳಲ್ಲಿ ಯಾರು ರೈತರು, ಯಾರು ರೈತರಲ್ಲ ಎನ್ನುವುದೇ ತಿಳಿಯದಂತ ಪರಿಸ್ಥಿತಿ ಇದೆ. ಕೃಷಿಕರಲ್ಲದವರೂ ಕೃಷಿಕರಂತೆಯೂ, ಕೃಷಿಕರು ಕೃಷಿಕರಲ್ಲದವರಂತೆ ನಟಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕೃಷಿಯೇ ಆಧಾರವಾಗಿಸಿ ಸಂತೋಷದ ಜೀವನ ನಡೆಸಬಹುದು. ಆದರೆ ಏಕ ಧಾನ್ಯ ಪದ್ಧತಿಯಲ್ಲಿ ಸಿಲುಕಿಕೊಂಡಿರುವವರು, ಇದನ್ನೆ ನಾವು ಮಾಡಬೇಕು ಎಂದು ಹಠಕ್ಕೆ ಬಿದ್ದವರು ತೊಂದರೆಗೀಡಾಗುತ್ತಿದ್ದಾರೆ. ಕೃಷಿಕನಿಗೆ ಶ್ರಮದ ಜೊತೆಗೆ ಬುದ್ಧಿವಂತಿಕೆಯು ಇದ್ದರೆ ಸುಖಕರ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು.

raita samavesha 5

ಒಂದು ನೋಟಿಸ್ ಅಥವಾ ಬೆಳೆ ನಷ್ಟಕ್ಕೆ ಹೆದರಿ ಇಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸಾವಿರಾರು ರೂಪಾಯಿ ದೋಚಿಕೊಂಡು ವಿದೇಶಕ್ಕೆ ಓಡಿ ಹೋದವರೇ ರಾಜಾರೋಷವಾಗಿ ಬದುಕುತ್ತಿದ್ದಾರೆ. ಅಂತವರೇ ಬದುಕಿದ್ದಾಗ ನಾವು ಈ ಚಿಕ್ಕಪುಟ್ಟ ಸಮಸ್ಯೆಗೆ ಹೆದರಬಾರದು ಎಂದು ಧೈರ್ಯ ತುಂಬಿದರು. ಇದನ್ನೂ ಓದಿ: ರಸ್ತೆ, ರಸ್ತೆಯಲ್ಲಿ ಕುಣಿಯುವುದಕ್ಕೆ ಬ್ರೇಕ್ ಹಾಕಿ ಬಾರ್, ರೆಸ್ಟೋರೆಂಟ್ ನಿಯಮ ಸಡಿಲಿಸಿ: ಗೋವಿಂದರಾಜ್ ಹೆಗ್ಡೆ

raita samavesha 4

ಜಾಗತಿಕ ತಾಪಮಾನದ ಏರಿಳಿತಗಳು ನಮ್ಮನ್ನು ಎಲ್ಲಿಗೆ ತೆಗದುಕೊಂಡು ಹೋಗುತ್ತಿದೆ ಎನ್ನುವುದಕ್ಕೆ ಈ ವರ್ಷ ಮಾದರಿಯಾಗಿದೆ. ವಿಚಿತ್ರವಾದ ಹವಾಮಾನ ಏರು ಪೇರಾಗುತ್ತಿದೆ. ಇದು ಬೆಳೆಗಳ ಮೇಲೂ, ನಮ್ಮ ಜೀವನದ ಮೇಲೂ ಪರಿಣಾಮ ಬೀರುತ್ತದೆ ಎಂದು ಬೇಸರಿಸಿದರು.

ಸಮಸ್ಯೆ ನಿವಾರಣೆಯಾಗುತ್ತಿಲ್ಲ:  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಎಲ್ಲಾ ರಾಜಕೀಯ ಪಕ್ಷಗಳು ರೈತನಿಗೆ ಸೇರಿದ್ದು. ಈ ಸತ್ಯ ರಾಜಕೀಯ ಪಕ್ಷಗಳಿಗೆ ಅರ್ಥವಾಗಬೇಕು. ಈ ಮನೋಭಾವ ಬಂದರೆ ರೈತರ ಕಲ್ಯಾಣ ಸಾಧ್ಯ. ಚಳವಳಿ, ರಾಜಕಾರಣದ ನಡುವೆ ಸಂಬಂಧ ಇರಬೇಕಿತ್ತು. ಆದರೆ ಈ ಸಂಬಂಧ ಇಲ್ಲದ ಕಾರಣ ರೈತರ ಕಲ್ಯಾಣ ಆಗುತ್ತಿಲ್ಲ. ಆಹಾರ ಉತ್ಪಾದನೆ ಹೆಚ್ಚಾದರೂ ರೈತನ ಸಮಸ್ಯೆ ನಿವಾರಣೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಾಸ್ಟೆಲ್‍ನಲ್ಲಿರುವ ಬ್ಯಾಗ್ ತರುತ್ತೇನೆಂದು ಹೇಳಿ ಹೋದ ಯುವತಿ ನಾಪತ್ತೆ

CM Basavaraja Bommai

ಮೈಷುಗರ್ ಬಗ್ಗೆ ಮಾತನಾಡಿ, ಮೈಷುಗರ್‌ನಲ್ಲಿ ಕಬ್ಬು ಅರೆಯುವ ವ್ಯವಸ್ಥೆ ಬೇಗ ಪುನಾರಂಭವಾಗುತ್ತದೆ. ಶ್ರೀರಾಮ ಸಕ್ಕರೆ ಕಾರ್ಖಾನೆ ಖಾಸಗಿ ಅವರು ತೆಗೆದು ಕೊಂಡಿದ್ದಾರೆ. ಇದಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಅದನ್ನು ನಿವಾರಿಸಿ ಬೇಗ ಕಾರ್ಖಾನೆ ಆರಂಭಿಸುತ್ತೇವೆ ಎಂದು ಭರವಸೆ ನೀಡಿದರು.

ಗಂಭೀರವಾಗಿ ಪರಿಗಣಿಸಿ: ಕುರುಬೂರು ಶಾಂತಕುಮಾರ್ ಮಾತನಾಡಿ, ಆಹಾರ ಉತ್ಪಾದನೆ ಹೆಚ್ಚಾಗಿದ್ದರೂ ರೈತರ ಬಾಳು ಹಸನಾಗಿಲ್ಲ. ಸರಕಾರ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಇದನ್ನೂ ಓದಿ: ಸೋಮವಾರ ಯಾದಗಿರಿಯಲ್ಲಿ ಚುನಾವಣೆ – ಪೊಲೀಸ್ ಇಲಾಖೆ ಸಜ್ಜು

KURUBURU SHANTHAKUMAR

ರೈತನದು ಅನಿಶ್ಚಿತತೆಯ ಬದುಕು. ರೈತನ ಬದುಕು ನಿಶ್ಚಿತತೆಗೆ ತರುವ ಕೆಲಸ ಆಗಬೇಕಿದೆ. ಕೃಷಿಯ ಉಪ ಚಟುವಟಿಕೆಗಳನ್ನು ರೂಪಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಬದ್ಧತೆಯಿಂದ ಚಿಂತನೆ ನಡೆಸಿದೆ. ರೈತನ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಖಾಸಗಿ ಮಾರುಕಟ್ಟೆ ಎಪಿಎಂಸಿ ಕಾಯ್ದೆಗಿಂತಾ ಮುಂಚೆಯೇ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳು ಖಾಸಗಿ ಮಾರುಕಟ್ಟೆ ಆರಂಭಿಸಿ ಬಹಳ ವರ್ಷ ಆಗಿದೆ. ಖಾಸಗಿ ಮಾರುಕಟ್ಟೆ ಈಗ ಬಂದಿದಲ್ಲ ಎಂದರು. ಇದನ್ನೂ ಓದಿ: ಹಿಂದೂ ಹಿಂದೂಗಳ ಮಧ್ಯೆ, ಭಾಷೆಗಳ ಮಧ್ಯೆ ಜಗಳ ಹಚ್ಚಲು ಷಡ್ಯಂತ್ರ: ರಾಜಾಸಿಂಗ್ ಠಾಕೂರ್

raita samavesha 3

ಈ ಕಾರ್ಯಕ್ರಮದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ಗೆ ರೈತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುತ್ತೂರು ಶ್ರೀಗಳು, ಹಿರಿಯ ಪತ್ರಕರ್ತರಾದ ರವಿ ಹೆಗಡೆ ಭಾಗಿಯಾಗಿದ್ದರು.

TAGGED:Basavaraj Bommaiformerhr ranganathKuruburu Shanthakumarಎಚ್‌.ಆರ್.‌ ರಂಗನಾಥ್‌ಕುರುಬೂರು ಶಾಂತಕುಮಾರ್ಕೃಷಿ ಕಾಯ್ದೆಬಸವರಾಜ ಬೊಮ್ಮಾಯಿರೈತ
Share This Article
Facebook Whatsapp Whatsapp Telegram

Cinema news

Koppal Anjanadri Temple Rishab Shetty
ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ರಿಷಬ್ ಶೆಟ್ಟಿ ದಂಪತಿ ಭೇಟಿ
Cinema Districts Karnataka Koppal Latest Sandalwood Top Stories
sudeep darshan
ದರ್ಶನ್‌ಗೆ ಯಾವಾಗ್ಲೂ ಒಳ್ಳೆಯದಾಗಲಿ ಎಂದು ಬಯಸುತ್ತೇನೆ: ಸುದೀಪ್
Cinema Latest Main Post Sandalwood
Sangeetha Bhat
ನೀಳ ಕೇಶರಾಶಿಗೆ ಕತ್ತರಿ ಹಾಕಿದ ಸಂಗೀತಾ ಭಟ್
Cinema Latest Sandalwood Top Stories
Rashmika Mandanna Mysaa
ರಶ್ಮಿಕಾ ಮಂದಣ್ಣ `ಮೈಸಾ’ ಸಿನಿಮಾದ ಮೊದಲ ಗ್ಲಿಂಪ್ಸ್‌ ರಿಲೀಸ್
Cinema Latest South cinema Top Stories

You Might Also Like

bengaluru sexual harassment accused
Bengaluru City

ಬೆಂಗಳೂರು: ಇನ್‌ಸ್ಟಾದಲ್ಲಿ ಪರಿಚಯ, ನಡುರಸ್ತೆಯಲ್ಲೇ ಯುವತಿಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ

Public TV
By Public TV
2 hours ago
Aravallis
Latest

ಅರಾವಳಿಯಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆ ಇಲ್ಲ: ರಾಜ್ಯಗಳಿಗೆ ಕೇಂದ್ರ ಆದೇಶ

Public TV
By Public TV
2 hours ago
new zealand groom karnataka bride
Chitradurga

ನ್ಯೂಜಿಲೆಂಡ್ ವರ.. ಕರ್ನಾಟಕದ ವಧು; ಸಾಗರದಾಚೆಗಿನ ವಿವಾಹಕ್ಕೆ ಸಾಕ್ಷಿಯಾದ ಬೆಣ್ಣೆನಗರಿ

Public TV
By Public TV
2 hours ago
mary public tv
Bengaluru City

ಬೆಂಗಳೂರು ಪ್ರೆಸ್‌ಕ್ಲಬ್‌ ವಾರ್ಷಿಕ ಪ್ರಶಸ್ತಿಗೆ ‘ಪಬ್ಲಿಕ್‌ ಟಿವಿ’ಯ ಮೇರಿ ಆಯ್ಕೆ

Public TV
By Public TV
3 hours ago
Explosion In Dhaka
Latest

ಬಾಂಗ್ಲಾದೇಶ ಬಿಕ್ಕಟ್ಟು ಮತ್ತಷ್ಟು ತೀವ್ರ – ಢಾಕಾದಲ್ಲಿ ಸ್ಫೋಟ; ಓರ್ವ ಸಾವು

Public TV
By Public TV
4 hours ago
Alcoholic Drink copy
Bengaluru City

ಗ್ಯಾರಂಟಿಗಾಗಿ 569 ಮದ್ಯದಂಗಡಿಗಳಿಗೆ ಇ-ಹರಾಜು ಲೈಸೆನ್ಸ್ – 700 ಕೋಟಿ ಆದಾಯ ಸಂಗ್ರಹ ಗುರಿ

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?