– ಬಿಜೆಪಿಯವ್ರ ಜೀವನ ಚರಿತ್ರೆಯಿಂದ ದೊಡ್ಡ ಸಿನಿಮಾ ತೆಗೀಬೋದು
ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರ ಜೀವನ ಚರಿತ್ರೆ ತೆರೆದ ಪುಸ್ತಕ. ಆದರೆ ಬಿಜೆಪಿಯವರ ಜೀವನ ಚರಿತ್ರೆಯಿಂದ ದೊಡ್ಡ ಸಿನಿಮಾವನ್ನೇ ತೆಗೆಯಬಹುದು ಎಂದು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಬಿಜೆಪಿಯಿಂದ ಕುಮಾರಸ್ವಾಮಿ ವಿರುದ್ಧ ವೈಯಕ್ತಿಕ ಟೀಕೆ ವಿಚಾರ ಸಂಬಂಧ ಕಿಡಿಕಾರಿರುವ ಶಿವರಾಮೇಗೌಡ, ಕುಮಾರಸ್ವಾಮಿ ಅವರು ಏನ್ ಹೇಳಬೇಕು, ಏನ್ ಆಗಿದೆ ಅನ್ನೋದನ್ನು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ನಾಯಕರ ಜೀವನ ಚರಿತ್ರೆಯನ್ನು ದೊಡ್ಡ ಸಿನಿಮಾ ತೆಗೆಯಬಹುದು. ಬಿಜೆಪಿ ಅವರು ಇನ್ನೊಬ್ಬರಿಗೆ ಉಪದೇಶ ಮಾಡುವ ಹಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರ ಇರುವುದರಿಂದ ಅವರ ವಾಸನೆ ಇನ್ನೂ ಬರ್ತಾ ಇಲ್ಲ. ಹೀಗಾಗಲೇ ಅವರದ್ದು ಸಾಕಷ್ಟು ಬಂದಿವೆ. ಹಾನಗಲ್ ಮತ್ತು ಸಿಂದಗಿಯಲ್ಲಿ ಜೆಡಿಎಸ್ ಗೆಲ್ಲುವ ಸೂಚನೆ ಜಾಸ್ತಿ ಇದೆ. ಇದಕ್ಕಾಗಿ ಈ ರೀತಿಯ ಟೀಕೆಯನ್ನು ಬಿಜೆಪಿ ಮಾಡುತ್ತಿದೆ ಎಂದರು. ಇದನ್ನೂ ಓದಿ: ಬಿಜೆಪಿಯವರ ಬ್ರಹ್ಮಾಂಡಗಳನ್ನು ಹೇಳ ಹೊರಟರೆ ಸಮಯ ಹಿಡಿಯುತ್ತೆ: ಪ್ರಜ್ವಲ್ ರೇವಣ್ಣ
ಡಿಕೆಶಿ ಅವರು ಬಿಜೆಪಿ ಅವರು ಮೂಟೆಗಟ್ಟಲೆ ಹಣ ತಂದು ಹಂಚುತ್ತಿದ್ದಾರೆ ಅಂತಾ ಹೇಳಿದ್ದಾರೆ. ಅದೇ ರೀತಿ ಅವರು ದುಡ್ಡು ಹಂಚುತ್ತಿದ್ದಾರೆ. ಬಿಜೆಪಿ ಅವರಿಗೆ ರಾಜಮಾರ್ಗದಲ್ಲಿ ರಾಜಕಾರಣ ಮಾಡಿ ಅನುಭವವಿಲ್ಲ. ಅವರಿಗೆ ವಾಮಮಾರ್ಗದಲ್ಲಿ ರಾಜಕೀಯ ಮಾಡಿ ಅಭ್ಯಾಸ. ಬೆಂಗಳೂರಿನಲ್ಲಿ ಒಬ್ಬರು ಹೇಳ್ತಾ ಇದ್ದರು, ನಾವು ದುಡ್ಡು ಕೊಟ್ಟು ಕೊಂಡಿಕೊಳ್ಳುತ್ತೇವೆ ಅಂತಾ. ಇದು ಬಿಜೆಪಿಯ ಸಂಸ್ಕೃತಿ ಎಂದು ಸಿಡಿಮಿಡಿಗೊಂಡರು. ಇದನ್ನೂ ಓದಿ: ಜೈಲಿಗೆ ಹೋಗೋ ಸ್ಥಿತಿ ಬಂದರೆ ಹೋಗೋಕೆ ಸಿದ್ಧವಾಗಿದ್ದೇನೆ: ರಮೇಶ್ ಕುಮಾರ್
ಆರ್ಎಸ್ಎಸ್ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇವರ ಬಂಡವಾಳ ಇಡೀ ರಾಷ್ಟ್ರಕ್ಕೆ ಗೊತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಎಲ್ಲರೂ ಕೆಟ್ಟವರು ಅಂತ ಹೇಳಲ್ಲ. ಅಲ್ಲಿ ಹೆಚ್ಚಿನ ಜನ ಕಣ್ಣಿಗೆ ಕಾಣಲ್ಲ. ಆರ್ಎಸ್ಎಸ್ ನಲ್ಲಿ ಇರುವಂತವರು ಮಾಡುವ ಭ್ರಷ್ಟಚಾರ ಇನ್ನೆಲ್ಲಿಯೂ ಇಲ್ಲ ಎಂದು ಮೊನ್ನೆ ಯಾರೋ ಒಬ್ಬರು ಶಾಸಕರು ಹೇಳಿದ್ದಾರೆ ಎಂಬುದನ್ನು ಇದೇ ವೇಳೆ ಪ್ರಸ್ತಾಪಿಸಿದರು. ಇದನ್ನೂ ಓದಿ: ನಾನು ಅಧಿಕಾರದ ಮದದಿಂದ ಮಾತನಾಡಿಲ್ಲ: ಕೆ. ಸುಧಾಕರ್
ತುಮಕೂರಿನ ಬಿಜೆಪಿ ಮುಖಂಡ ಸುರೇಶಗೌಡ ಅದರ ಬಗ್ಗೆ ಮಾತನಾಡೋದನ್ನ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇನೆ. ನೀಲಿ ಚಿತ್ರ ನೋಡುವವರು, ಭ್ರಷ್ಟಚಾರ ಮಾಡುವವರು ಇರಬಹುದು ಬಿಜೆಪಿಯಲ್ಲಿ ಇದ್ದಾರೆ. ಇವತ್ತು ಈ ದೇಶದಲ್ಲಿ ಹಣವಿಲ್ಲದೆ ಯಾವ ಕೆಲಸ ಹಾಕ್ತಿಲ್ಲ. ಭ್ರಷ್ಟಚಾರ ಮುಗಿಲು ಮುಟ್ಟಿದೆ ಎಂದು ಹೇಳುವ ಮೂಲಕ ಮಾಜಿ ಸಂಸದರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.