– ನಾಡು ಸಮೃದ್ಧಿಯಾಗಲಿ ಎಂದು ಆಶಿಸಿದ ಸಿಎಂ
ಬೆಂಗಳೂರು: ಮೊದಲಿನಿಂದಲೂ ದೇವರಲ್ಲಿ ಅಪಾರ ಭಕ್ತಿ, ನಂಬಿಕೆ ಹೊಂದಿರುವ ಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ರಾಜ್ಯದ ಒಂದಿಲ್ಲೊಂದು ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸಿ, ದೇವರಲ್ಲಿ ಪ್ರಾರ್ಥಿಸುತ್ತಾರೆ.
ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಭರ್ಜರಿ ಗೆಲುವಿನ ಬೆನ್ನಲ್ಲೇ ಸಿಎಂ ಡಿ ಕೆ ಶಿವಕುಮಾರ್ ಅವರು ಪತ್ನಿ ಉಷಾ ಅವರ ಜತೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಶುಕ್ರವಾರ ಮುಂಜಾನೆ ತೆರಳಿ ವೆಂಕಟೇಶ್ವರ ದೇವರ ದರ್ಶನ ಪಡೆದರು.#DKShivakumar #Congress #Tirupati pic.twitter.com/AQWXADUPGs
— PublicTV (@publictvnews) June 19, 2026
ಅದೇ ರೀತಿ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಸಿಎಂ ಡಿ.ಕೆ ಶಿವಕುಮಾರ್ ಅವರು ಪತ್ನಿ ಉಷಾ ಅವರ ಜೊತೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳಿದ್ದಾರೆ. ಶುಕ್ರವಾರ (ಇಂದು) ಮುಂಜಾನೆ ತೆರಳಿ ವೆಂಕಟೇಶ್ವರ ದೇವರ ದರ್ಶನ ಪಡೆದಿದ್ದಾರೆ. ದೇವಸ್ಥಾನದಲ್ಲಿ ಸೆರೆ ಹಿಡಿದ ಫೋಟೋಗಳನ್ನ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹರಕೆ ತೀರಿಸಿದ ಸಿಎಂಗೆ ಅಣ್ಣಮ್ಮ ದೇವಿ ಶುಭಸೂಚನೆ – ಡಿಕೆಶಿ ಇಷ್ಟಾರ್ಥ ಈಡೇರುತ್ತಾ?
ʻಓಂ ನಮೋ ವೆಂಕಟೇಶಾಯ
ಕಾಮಿತಾರ್ಥ ಪ್ರದಾಯಿನೇ
ಪ್ರಣತಃ ಕ್ಲೇಶ ನಾಶಾಯ
ಗೋವಿಂದಾಯ ನಮೋ ನಮಃ
ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ (Lord Venkateshwara) ಸನ್ನಿಧಿಗೆ ಧರ್ಮಪತ್ನಿಯೊಂದಿಗೆ ಭೇಟಿ ನೀಡಿ, ದೇವರ ದಿವ್ಯ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದ್ದೇನೆ. ಜಗದೋದ್ಧಾರಕ ಶ್ರೀನಿವಾಸನ ಅನುಗ್ರಹವೂ ಪ್ರತಿಯೊಬ್ಬರ ಮೇಲಿರಲಿ, ನಾಡು ಸಮೃದ್ಧಿಯಾಗಲಿ ಎಂದು ಆಶಿಸಿದ್ದಾರೆ.
Blessed to have the divine darshan of Lord Venkateshwara at Tirumala after assuming office as the Chief Minister of Karnataka.
I offered prayers for the peace, prosperity, progress and well-being of all. https://t.co/TIcgIwIBSp
— DK Shivakumar (@DKShivakumar) June 19, 2026
ಇತ್ತೀಚೆಗೆ ನಗರ ದೇವತೆ ಅಣ್ಣಮ್ಮ ದೇವಿ (Sri Annamma Devi) ದೇವಸ್ಥಾನಕ್ಕೆ ಬಂದು ಮುಖ್ಯಮಂತ್ರಿಗಳು ಹರಕೆ ತೀರಿಸಿದ್ದರು. ಇದನ್ನೂ ಓದಿ: ಹೊಸ ಸರ್ಕಾರ ಬಂದ ಮೇಲೆ ಶಾಸಕರ ಬೆಂಬಲ ನೋಡಿ ಆಶ್ಚರ್ಯ ಆಗ್ತಿದೆ: ಡಿಕೆಶಿ
ರಾಜ್ಯದ ಮುಖ್ಯಮಂತ್ರಿಯಾದರೆ, ಅಣ್ಣಮ್ಮದೇವಿ ಸನ್ನಿಧಾನಕ್ಕೆ ಬಂದು ಹರಕೆ ತೀರಿಸುವುದಾಗಿ ಹರಕೆ ಹೊತ್ತಿದ್ದ ಡಿಕೆಶಿ ನುಡಿದಂತೆ ನಡೆದುಕೊಂಡಿದ್ದರು. ಉಪ್ಪು, ಮೊಸರು ಹಾಕಿ, ಸುಃಖ, ಶಾಂತಿ, ನೆಮ್ಮದಿ ನೀಡುವಂತೆ ಪ್ರಾರ್ಥಿಸಿದ್ದಾರೆ. ತಾಯಿ ಅಣ್ಣಮಗೆ ನಮಿಸಿ ಆಶೀರ್ವಾದ ಪಡೆದುಕೊಂಡಿದ್ದರು. ಇದೇ ವೇಳೆ ಬಿಸಿಲು ಮಾರಮ್ಮನಿಗೂ ಉಪ್ಪು, ಮೊಸರು ಹಾಕಿ ನಮಿಸಿದ್ದರು.
