ಬೆಂಗಳೂರು: ಬಿಬಿಎಂಪಿ ತನ್ನ ಆಸ್ತಿಗಳನ್ನು ಅಡವಿಡುತ್ತ ಬರುತ್ತಿದೆ, ಅಲ್ಲದೆ ಆಸ್ತಿ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕೇಳಿ ಬರುತ್ತಿದ್ದವು. ಇದೀಗ ಆ ಸ್ಥಿತಿ ಬದಲಾಗಿದ್ದು, ಅಡವಿಟ್ಟ ಆಸ್ತಿಯನ್ನು ಬಿಬಿಎಂಪಿ ಬಿಡಿಸಿಕೊಂಡಿದೆ.
ಇದೆಲ್ಲದರ ನಡುವೆ ಒಂದೇ ಪಾಲಿಕೆಯಿಂದ ಆಡಳಿತ ನಿರ್ವಹಣೆ ಸಾಧ್ಯವಾಗುತ್ತಿಲ್ಲ, ಸಾಲ ಹೆಚ್ಚುತ್ತಿದೆ. ಹೀಗಾಗಿ ಬಿಬಿಎಂಪಿಯನ್ನು ನಾಲ್ಕು ಪಾಲಿಕೆಗಳನ್ನಾಗಿ ವಿಂಗಡಿಸಬೇಕು. ಅಂದರೆ ಮಾತ್ರ ಆಡಳಿತ ನಿರ್ವಹಣೆ ಸುಗಮವಾಗಲಿದೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತವೆ. ಬಿಬಿಎಂಪಿಗೆ ಆಸ್ತಿ ನಿರ್ವಹಣೆ, ತೆರಿಗೆ ಸಂಗ್ರಹ ಸವಾಲಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತದೆ. ಇದೆಲ್ಲದರ ಮಧ್ಯೆ ಇದೀಗ ಬಿಬಿಎಂಪಿ ಅಡವಿಟ್ಟ ತನ್ನ ಆಸ್ತಿಯನ್ನು ಮತ್ತೆ ಬಿಡಿಸಿಕೊಳ್ಳುತ್ತಿದ್ದು, ಈ ಮೂಲಕ ಉತ್ತಮ ಸ್ಥಿತಿಗೆ ಮರಳುತ್ತಿದೆ.
- Advertisement 2
- Advertisement 3
ಅಡವಿಟ್ಟ ಆಸ್ತಿಯನ್ನು ಬಿಡಿಸಿಕೊಳ್ಳಲು ಬಿಬಿಎಂಪಿ ನಿರಂತರ ಪ್ರಯತ್ನ ನಡೆಸಿದ್ದು, ಸ್ಲಾಟರ್ ಹೌಸ್ ಹಾಗೂ ರಾಜಾಜಿನಗರದ ಬಿಬಿಎಂಪಿಯ ಆಸ್ತಿಯನ್ನು ಋಣಮುಕ್ತವನ್ನಾಗಿ ಮಾಡಿಕೊಂಡಿದೆ. ಒಟ್ಟು 211 ಕೋಟಿ ರೂ. ಸಾಲವನ್ನು ಪಾಲಿಕೆ ಮರುಪಾವತಿಸಿ ಆಸ್ತಿಯನ್ನು ಪಡೆದುಕೊಂಡಿದೆ. ಅಲ್ಲದೆ, 9 ತಿಂಗಳ ಹಿಂದೆಯಷ್ಟೇ 871 ಕೋಟಿ ರೂ. ಸಾಲವನ್ನು ಬಿಬಿಎಂಪಿ ತೀರಿಸಿತ್ತು. ಈ ಮೂಲಕ ದಾಸಪ್ಪ ಆಸ್ಪತ್ರೆ ಕಟ್ಟಡ, ಪಬ್ಲಿಕ್ ಯುಟಿಲಿಟಿ ಕಟ್ಟಡ, ಕಲಾಸಿಪಾಳ್ಯ ಮಾರುಕಟ್ಟೆ ಮತ್ತು ಪೂರ್ವ ಬಿಬಿಎಂಪಿ ಕಚೇರಿಯನ್ನು ಋಣ ಮುಕ್ತವಾಗಿದ್ದವು.
- Advertisement 4
ಒಟ್ಟು ಅಡವಿಟ್ಟ 11 ಆಸ್ತಿಗಳ ಪೈಕಿ ಇದೀಗ 10 ಆಸ್ತಿಗಳನ್ನು ಋಣಮುಕ್ತವನ್ನಾಗಿಸಿದ್ದು, ಪಾಲಿಕೆಯಲ್ಲಿ ಕಾಂಗ್ರೆಸ್ ಮಾಡಿದ್ದ ಸಾಲವನ್ನು ಮೈತ್ರಿ ತೀರಿಸುತ್ತಿದೆ ಎಂದು ಬಿಜೆಪಿ ನಾಯಕ ಪದ್ಮನಾಭ ರೆಡ್ಡಿ ವ್ಯಂಗ್ಯವಾಡಿದ್ದಾರೆ.