ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (BS Yediyurappa) ಪುತ್ರ ಸಂಸದ ಬಿ. ವೈ ರಾಘವೇಂದ್ರ (B Y Raghavendra) ಅವರು ಆನ್ಲೈನ್ ವಂಚನೆಗೆ ಒಳಗಾಗಿ 16 ಲಕ್ಷ ಕಳೆದುಕೊಂಡಿರುವ ವಿಚಾರವೊಂದನ್ನು ಬಯಲು ಮಾಡಿದರು.
ಕಾರ್ಯಕ್ರಮವೊಂದರಲ್ಲಿ ಮಾತನಡುತ್ತಾ, ಆನ್ಲೈನ್ ವಂಚನೆ (Online Cheating) ಗೆ ಒಳಗಾಗಿದ್ದನ್ನು ಹೇಳಿಕೊಂಡರು. ಮುಂಬೈ ಮೂಲದ ವಂಚಕನಿಂದ ವಂಚನೆಗೆ ಬಿವೈಆರ್ ಒಳಗಾಗಿದ್ದು, 16 ಲಕ್ಷ ಹಣ ಕಳೆದುಕೊಂಡಿದ್ದನ್ನು ನೆನಪಿಸಿಕೊಂಡರು.
ಶಿವಮೊಗ್ಗದ ಎಂಜಿನಿಯರಿಂಗ್ ಕಾಲೇಜಿನ ಅಕೌಂಟ್ ನಿಂದ ಕಿಡಿಗೇಡಿ 16 ಲಕ್ಷ ಹಣವನ್ನು ಆನ್ಲೈನ್ ನಲ್ಲಿ ಲಪಟಾಯಿಸಿದ್ದನು. ಬಳಿಕ ಪೊಲೀಸರ ಸಹಾಯದಿಂದ ಹಣವನ್ನು ಹಿಂಪಡೆದುಕೊಂಡಿರುವುದಾಗಿ ಸಂಸದರು ತಿಳಿಸಿದರು. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳ ಗಿಮಿಕ್ – ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಕ್ಕಲ್ಲ: ಪ್ರಣಾವಾನಂದ ಸ್ವಾಮೀಜಿ
ಓಟಿಪಿ (OTP) ಮೂಲಕ ಹಣ ಕದ್ದಿರುವುದಾಗಿ ಸಂಸದರು ತಿಳಿಸಿದ್ದಾರೆ. ಹೀಗಾಗಿ ಯಾರೂ ಕೂಡ ಓಟಿಪಿಯನ್ನು ಯಾರಿಗೂ ಕೊಡಬೇಡಿ ಎಂದು ಮನವಿ ಮಾಡಿಕೊಂಡರು. ಯಾವುದೇ ಬ್ಯಾಂಕ್ ನಿಂದ ಓಟಿಪಿಯನ್ನು ಕೇಳುವುದಿಲ್ಲ. ಈ ರೀತಿ ಕೇಳಿ ದಂಧೆ ಮಾಡುತ್ತಾರೆ ಎಚ್ಚರಿಕೆ ವಹಿಸಿ ಎಂದು ಸಂಸದರು ಮನವಿ ಮಾಡಿಕೊಂಡರು.