ಚೆನ್ನೈ: ತಮಿಳುನಾಡು (Tamil Nadu) ಸರ್ಕಾರದ ಕ್ಯಾಬಿನೆಟ್ ಪುನರ್ರಚನೆಯಾಗಿದ್ದು ಹಣಕಾಸು ಸಚಿವ ಪಿಟಿಆರ್ ಎಂದೇ ಖ್ಯಾತರಾಗಿದ್ದ ಮಾಜಿ ಬ್ಯಾಂಕರ್ ಪಳನಿವೇಲ್ ತ್ಯಾಗರಾಜನ್ (Palanivel Thiaga Rajan) ಅವರಿಗೆ ಮಾಹಿತಿ ತಂತ್ರಜ್ಞಾನ ಖಾತೆಯನ್ನು ನೀಡಲಾಗಿದೆ.
ತಂಗಂ ತೆನ್ನರಸು ಅವರಿಗೆ ಹಣಕಾಸು ಖಾತೆಯನ್ನು (Ministry of Finance) ನೀಡಲಾಗಿದ್ದ ಟಿಆರ್ಬಿ ರಾಜಾ ಅವರಿಗೆ ಕೈಗಾರಿಕಾ ಖಾತೆಯನ್ನು ಹಂಚಲಾಗಿದೆ. ಸ್ಟಾಲಿನ್ ಸರ್ಕಾರ ರಚನೆಯಾದ ಬಳಿಕ ಖಾತೆಯನ್ನು ಬದಲಾವಣೆ ಮಾಡಿರುವುದು ಇದೇ ಮೊದಲು. ಇದನ್ನೂ ಓದಿ: ತಂದೆ-ತಾಯಿ, ಹೆಂಡತಿ, ಮಕ್ಕಳ ಜೊತೆ ಕಾಲ ಕಳೆಯಿರಿ: ಕಾರ್ಯಕರ್ತರಿಗೆ ಸಿದ್ದರಾಮಯ್ಯ ಸಲಹೆ
ಬಿಜೆಪಿ ಅಧ್ಯಕ್ಷ ಅಣ್ಣಾಮಲೈ (Annamalai) ಅವರು ʼಡಿಎಂಕೆ ಫೈಲ್ಸ್ʼ ಹೆಸರಿನಲ್ಲಿ ಆಡಿಯೋ ರಿಲೀಸ್ ಮಾಡಿದ್ದರು. ಈ ಆಡಿಯೋದಲ್ಲಿ ಪಿಟಿಆರ್ ಸ್ಟಾಲಿನ್ ಕುಟುಂಬದ ವಿರುದ್ಧವೇ ಮಾತನಾಡಿದ್ದರು. ಪಿಟಿಆರ್ ಬಿಜೆಪಿಯ ಒಂದು ವ್ಯಕ್ತಿ, ಒಂದು ಹುದ್ದೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಆಡಿಯೋ ತಮಿಳುನಾಡು ಸರ್ಕಾರಕ್ಕೆ ಮುಜುಗರ ತಂದಿತ್ತು. ಸ್ಟಾಲಿನ್ ಮತ್ತು ಪಿಟಿಆರ್ ಆಡಿಯೋವನ್ನು ಬಿಜೆಪಿ ತಿರುಚಿದೆ ಇದು ಸುಳ್ಳು ಎಂದು ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: ಡಿಎಂಕೆ ಫೈಲ್ಸ್ ರಿಲೀಸ್ – ಅಣ್ಣಾಮಲೈ ವಿರುದ್ಧ ಮಾನನಷ್ಟ ಕೇಸ್