ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಎಂದಿನಂತೆ ಚಳಿಯ ವಾತಾವರಣ ಇರಲಿದೆ. ಮುಂಜಾನೆ ಕೊರೆಯುವ ಚಳಿ ಇರಲಿದ್ದು, ಮಧ್ಯಾಹ್ನದ ಹೊತ್ತಿಗೆ ಬಿಸಿಲು ಇರಲಿದೆ. ರಾತ್ರಿ ವೇಳೆ ಮತ್ತೆ ಚಳಿ ಅನುಭವವಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಸ್ವಲ್ಪ ಮಟ್ಟಿಗೆ ಮಳೆಯ ಪ್ರಭಾವ ಬೀರುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರು, ಉಡುಪಿ, ಕಾರವಾರ, ಬಾಗಲಕೋಟೆ ನಗರಗಳಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 28-19
ಮಂಗಳೂರು: 33-25
ಶಿವಮೊಗ್ಗ: 32-20
ಬೆಳಗಾವಿ: 31-19
ಮೈಸೂರು: 30-20
ಮಂಡ್ಯ: 31-20
ಮಡಿಕೇರಿ: 27-17
ರಾಮನಗರ: 30-20
ಹಾಸನ: 29-18
ಚಾಮರಾಜನಗರ: 29-20
ಚಿಕ್ಕಬಳ್ಳಾಪುರ: 27-17
ಕೋಲಾರ: 28-19
ತುಮಕೂರು: 29-19
ಉಡುಪಿ: 33-24
ಕಾರವಾರ: 33-25
ಚಿಕ್ಕಮಗಳೂರು: 29-18
ದಾವಣಗೆರೆ: 32-21
ಹುಬ್ಬಳ್ಳಿ: 32-21
ಚಿತ್ರದುರ್ಗ: 32-19
ಹಾವೇರಿ: 33-21
ಬಳ್ಳಾರಿ: 32-21
ಗದಗ: 32-20
ಕೊಪ್ಪಳ: 32-21
ರಾಯಚೂರು: 32-21
ಯಾದಗಿರಿ: 33-22
ವಿಜಯಪುರ: 32-21
ಬೀದರ್: 30-19
ಕಲಬುರಗಿ: 32-21
ಬಾಗಲಕೋಟೆ: 33-21