ಶಿವಮೊಗ್ಗ: ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಗೂ ಹಾಗೂ ನಳಿನ್ ಕುಮಾರ್ ಕಟೀಲ್ಗೂ ತಿಳಿಸಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬರ ಆರೋಪಕ್ಕೆ ನಾನು ರಾಜೀನಾಮೆ ನೀಡಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಇದರಿಂದಾಗಿ ರಾಜೀನಾಮೆ ನೀಡಲ್ಲ. ಈ ಬಗ್ಗೆ ಈಗಾಗಲೇ ಸಿಎಂ ಬೊಮ್ಮಾಯಿ ಹಾಗೂ ಕಟೀಲ್ಗೂ ಹೇಳಿದ್ದೇನೆ. ಬೊಮ್ಮಾಯಿ ಅವರನ್ನು ನಾಳೆ ಅಥವಾ ನಾಡಿದ್ದು ಭೇಟಿ ಆಗುತ್ತೇನೆ ಎಂದು ಹೇಳಿದರು.
ವಾಟ್ಸಪ್ ಸಂದೇಶದ ಬಗ್ಗೆ ತನಿಖೆ ಆಗಬೇಕು. ಸಂತೋಷ್ ಅವರೇ ಡೆತ್ನೋಟ್ ಬರೆದಿಲ್ಲ ಎಂದ ಅವರು, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಕೇಂದ್ರದ ಯಾವುದೇ ನಾಯಕರು ನನ್ನೊಂದಿಗೆ ಮಾತನಾಡಿಲ್ಲ. ಇದನ್ನೂ ಓದಿ: ನಕಲಿ ಡೆತ್ ನೋಟ್ ಇಟ್ಕೊಂಡು ಗೊಡ್ಡು ಬೆದರಿಕೆ ಹಾಕಿದ್ರೆ ಹೆದರಲ್ಲ: ಈಶ್ವರಪ್ಪ
ದೆಹಲಿಯ ಪ್ರಧಾನಿ ಕಚೇರಿಗೆ, ಅಮಿತ್ ಶಾ ಕಚೇರಿಗೆ ನೋಟಿಸ್ ಕೊಟ್ಟಿದ್ದರು. ಕೇಂದ್ರ ನೀಡಿದ್ದ ಸ್ಪಷ್ಟನೆಗೆ ಆ ಬಗ್ಗೆ ಉತ್ತರ ನೀಡಿದ್ದೇನೆ. ಆಗ ಕಾಮಗಾರಿಗಳಿಗೆ ಟೆಂಡರ್ ನೀಡುವುದರಲ್ಲಿ ಕೆಲವು ನಿಯಮಗಳಿರುತ್ತವೆ. ಅವುಗಳನ್ನು ನೀಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಈಶ್ವರಪ್ಪರನ್ನು ಸಮರ್ಥಿಸಿಕೊಂಡ ಸಿ.ಟಿ ರವಿ, ಗೋಪಾಲಯ್ಯ
ಖಾಸಗಿ ಚಾನೆಲ್ ಅವರು ನಡೆಸಿದ್ದ ಸಂದರ್ಶನದಲ್ಲಿ ಆ ಕಾಪಿ ಮೊನ್ನೆ ನನಗೆ ಸಿಕ್ಕಿದೆ. ಅದನ್ನು ತೆಗೆದುಕೊಂಡು ನಾನು ಗುತ್ತಿಗೆದಾರ ಸಂತೋಷ್ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದೆ. ಮಾನನಷ್ಟ ಮೊಕದ್ದಮೆ ಹಾಕಿದ್ದಕ್ಕೆ ಸಂತೋಷ್ ಅವರಿಗೆ ಕೋರ್ಟ್ ನೋಟಿಸ್ ಕೊಟ್ಟಿದೆ ಎಂದ ಅವರು, ಯಾಕೆ ಹೆದರಿದರು ಎನ್ನುವುದು ನನ್ನ ಪ್ರಶ್ನೆ ಎಂದರು. ಇದನ್ನೂ ಓದಿ: ಪರ್ಸೆಂಟೇಜ್ ಕೊಡದಿದ್ದರೆ ಗುದ್ದಲಿ ಪೂಜೆನೂ ಮಾಡಲ್ಲ: ಸಿದ್ದಣ್ಣ ಶೇಗಜಿ
ಕಾಂಗ್ರೆಸ್ ಆರೋಪಗಳಿಗೆ ನಾನು ಹೆದರುವುದಿಲ್ಲ. ಇಂತಹ ನೂರು ಕೇಸ್ಗಳನ್ನು ನೋಡಿದ್ದೇನೆ. ಷಡ್ಯಂತ್ರ ಮಾಡಿದವರ ವಿರುದ್ಧ ಶಿಕ್ಷೆಯಾಗಬೇಕು. ನಾನು ಸಂತೋಷ್ ಪಾಟೀಲ್ ಮುಖವನ್ನು ಕೂಡ ನೋಡಿಲ್ಲ. ದಾಖಲೆ ಸಮೇತವಾಗಿ ಮಾತನಾಡುತ್ತಿದ್ದೇನೆ. ಈ ದಾಖಲೆಯನ್ನು ಕಟೀಲ್ ಅವರಿಗೆ ನೀಡಿದ್ದೇನೆ. ರಾಜಕಾರಣದಲ್ಲಿ ಮಾತನಾಡುವವರಿಗೆ ರಾಜಕಾರಣದಲ್ಲಿ ಉತ್ತರ ನೀಡಿದ್ದೇನೆ.