ತಿರುವನಂತಪುರಂ: ಮಹಿಳಾ ಉದ್ಯಮಿಯೊಬ್ಬರನ್ನು ಕೊಲೆ ಮಾಡಿ ಆರೋಪಿಯು ತಲೆಮರೆಸಿಕೊಂಡ ಘಟನೆ ಕೇರಳದ ತ್ರಿಶ್ಯೂರ್ನಲ್ಲಿ ಗುರುವಾರ ರಾತ್ರಿ ನಡೆದಿದೆ.
ಮನ್ನಾರ ಪರಂಬು ಗ್ರಾಮದವರಾದ ರಿನ್ಸಿ ನಾಜರ್ (30) ಕೊಲೆಯಾದ ಮಹಿಳೆ. ರಿನ್ಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಿಯಾಜ್ (25) ಕೊಲೆಗೈದ ಆರೋಪಿ. ಮಹಿಳೆಯು ರಾತ್ರಿ ಅಂಗಡಿ ಮುಚ್ಚಿ ತನ್ನ ಮಕ್ಕಳೊಂದಿಗೆ ಸ್ಕೂಟರ್ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಅವರ ಅಂಗಡಿಯಲ್ಲಿಯೇ ಕೆಲಸ ಮಾಡಿದ್ದ ಮಾಜಿ ನೌಕರ ರಿಯಾಜ್, ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ಹೆಣ್ಣುಮಕ್ಕಳೇ ನಾನು ಪ್ರಧಾನಮಂತ್ರಿಯಾಗಲು ಶಕ್ತಿ ಕೊಟ್ಟಿದ್ದು: ಹೆಚ್ಡಿಡಿ
ರಿಯಾಜ್ ತನ್ನ ಬೈಕ್ನಲ್ಲಿ ರಿನ್ಸಿಯನ್ನು ಹಿಂಬಾಲಿಸಿ ಅವರ ಸ್ಕೂಟರ್ ಅನ್ನು ಹಿಂದಿಕ್ಕಿ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಅವರು ಸ್ಕೂಟರ್ ಮೇಲಿಂದ ಬಿದ್ದಿದ್ದಾರೆ. ನಂತರ ಚಾಕು ತೆಗೆದುಕೊಂಡು ಅವರ ಮುಖ ಮತ್ತು ಕೈಯನ್ನು ಕತ್ತರಿಸಿದ್ದಾನೆ. ಅವರ ದೇಹದಿಂದ ಮೂರು ಬೆರಳುಗಳು ಬೇರ್ಪಟ್ಟಿವೆ. ದೇಹದಲ್ಲಿ 30 ಕ್ಕೂ ಹೆಚ್ಚು ಗಾಯಗಳಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ನಾನೂ ಹಿಂದೂ ಸಮಾಜದಲ್ಲಿಯೇ ಹುಟ್ಟಿದ್ದೇನೆ: ಎಚ್ಡಿಕೆ
ಮಕ್ಕಳ ಕೂಗು ಕೇಳಿ ಅಕ್ಕಪಕ್ಕದ ಜನರು ಆಗಮಿಸಿದರು. ಸ್ಥಳಕ್ಕೆ ಧಾವಿಸಿದವರಿಗೆ ರಿಯಾಜ್ ಬೆದರಿಕೆ ಹಾಕಿದ್ದಾನೆ. ಈ ಹಿಂದೆ ರಿನ್ಸಿ ನಿವಾಸದ ಮೇಲೆ ದಾಳಿ ಮಾಡಿದ್ದಕ್ಕಾಗಿ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆರೋಪಿಯು ಜವಳಿ ಅಂಗಡಿಗೆ ಭೇಟಿ ನೀಡಿ ಅಲ್ಲಿಯೂ ಬೆದರಿಕೆ ಹಾಕುತ್ತಿದ್ದ ಎಂದು ತಿಳಿದು ಬಂದಿದೆ.