Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಧರ್ಮಣ್ಣನ ಸಾವು ಆತ್ಮಹತ್ಯೆ ಅಲ್ಲ, ರಾಜಕೀಯ ಕೊಲೆ: ಹೆಚ್‍ಡಿಕೆ ಆರೋಪ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಧರ್ಮಣ್ಣನ ಸಾವು ಆತ್ಮಹತ್ಯೆ ಅಲ್ಲ, ರಾಜಕೀಯ ಕೊಲೆ: ಹೆಚ್‍ಡಿಕೆ ಆರೋಪ

Bengaluru City

ಧರ್ಮಣ್ಣನ ಸಾವು ಆತ್ಮಹತ್ಯೆ ಅಲ್ಲ, ರಾಜಕೀಯ ಕೊಲೆ: ಹೆಚ್‍ಡಿಕೆ ಆರೋಪ

Public TV
Last updated: December 29, 2020 12:27 pm
Public TV
Share
3 Min Read
HDK 2
SHARE

– ಕಾಫಿ ಡೇ ಸಿದ್ಧಾರ್ಥ್ ನೆನಪಿಸಿಕೊಂಡ ಮಾಜಿ ಸಿಎಂ

ಬೆಂಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡರ ಸಾವು ಆತ್ಮಹತ್ಯೆಯಲ್ಲ, ರಾಜಕೀಯ ಕೊಲೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

HDK 3 2

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1995 ರಿಂದ ಧರ್ಮೇಗೌಡರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇನೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಮನಸ್ಥಿತಿಯವರಾಗಿರಲಿಲ್ಲ, ಆದರೆ ಇಂದು ಆತ್ಮಹತ್ಯೆ ಮಾಡಿಕೊಂಡಿರುವುದು ನನ್ನ ಜೀವನದ ಮರೆಯಲಾಗದ ದುರಂತ ದಿನವಾಗಿದೆ. ಇದು ಆತ್ಮಹತ್ಯೆಯಲ್ಲ ರಾಜಕೀಯ ಕೊಲೆ ಎಂದು ಆರೋಪಿಸಿದರು.

congress vidhan parishad

ಹಲವಾರು ಸ್ನೇಹಿತರನ್ನು ಕಳೆದ 15 ವರ್ಷದ ರಾಜಕೀಯ ಜೀವನದಲ್ಲಿ ಕಳೆದುಕೊಂಡಿದ್ದೇನೆ. ಆದರೆ ನನ್ನ ಸಹೋದರನ ಸಮಾನರಾದ ಧರ್ಮಣ್ಣನ ಸಾವು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಮಾತ್ರವಲ್ಲದೆ ಎಲ್ಲಾ ರಾಜಕಾರಣಿಗಳು ಈ ಘಟನೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಧರ್ಮೇಗೌಡರ ತಂದೆ ಲಕ್ಷ್ಮಯ್ಯರ ಹೇಳಿಕೊಂಡಿದ್ದರು, ನಾನಂತೂ ಮಂತ್ರಿ ಆಗಲಿಲ್ಲ ನಾನು ಸಾಯುವ ಮುನ್ನ ನನ್ನ ಮಗ ಮಂತ್ರಿ ಆಗಬೇಕು ಎನ್ನುವ ಬಯಕೆ ವ್ಯಕ್ತಪಡಿಸಿದ್ದರು. ಅವರು ಆಸೆ ಪಟ್ಟಂತೆ ರಾಜಕೀಯಕ್ಕೆ ಬಂದ ಅಣ- ತಮ್ಮ ಧರ್ಮೇಗೌಡ ಮತ್ತು ಭೋಜೆ ಗೌಡರು ಕಾಂಗ್ರೆಸ್ಸಿಗೆ ಸೇರಲು ಸಿದ್ಧರಾಗಿದ್ದರು. ನಂತರ ನನ್ನ ಬಳಿ ಬಂದು ಮಾತಾನಾಡಿದರು. ನಾನು ನಮ್ಮ ಪಕ್ಷದಲ್ಲಿ ಎಂಎಲ್‍ಎ ಸ್ಥಾನ ಕೊಡಿಸುವುದಾಗಿ ತಿಳಿಸಿದ ನಂತರ ನಮ್ಮ ಪಕ್ಷ ಸೇರಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು. ಅದರಂತೆ ನಾನು ಅವರನ್ನು ವಿಧಾನಪರಿಷತ್ ಉಪಸಭಾಪತಿ ಮಾಡಿದ್ದೆ. ಆದರೆ ಅದೇ ಅವರ ಜೀವ ಹೋಗೋದಕ್ಕೆ ಕಾರಣವಾಯಿತು ಅಂತ ಅನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

DHARMEGOWDA FINAL

ಪ್ರತಿಭಾವಂತ ಕೃಷಿಕನಾಗಿ, ಪರಿಸರ ಪ್ರೇಮಿಯಾಗಿದ್ದ ಧರ್ಮೇಗೌಡರು ಗಿಡಕ್ಕೆ ಏಟಾದರು ನೊಂದುಕೊಳ್ಳುವಂತ ಮನಸ್ಥಿತಿಯವರು. ಆದರೆ ಇಂದು ರಾಜಕೀಯದ ಒತ್ತಾಸೆಯಿಂದ ನಿಷ್ಠಾವಂತ ನಾಯಕನನ್ನು ಕಳೆದುಕೊಂಡಿದ್ದೇವೆ. ಎಲ್ಲಾ ರಾಜಕೀಯ ಪಕ್ಷಗಳಿಗೆ ಮತ್ತು ಮಾಧ್ಯಮದರೊಂದಿಗೆ ಕೈ ಜೋಡಿಸಿ ಮನವಿ ಮಾಡುತ್ತೇನೆ, ಸದನದ ಘಟನೆಯ ಪರಿಣಾಮದಿಂದ ಈ ಘಟನೆ ನಡೆದಿದೆ ಎಂದು ಮತ್ತೊಮ್ಮೆ ಆರೋಪಿಸಿದರು.

DHARMEGOWDA 1

ಭೋಜೆ ಗೌಡರು ಕಳೆದ 8-10 ದಿನದ ಹಿಂದೆ ಸಂಪರ್ಕಿಸಿದ್ದರು. ನಮ್ಮಣ್ಣ ಬಹಳ ಧೃತಿಗೆಟ್ಟಿದ್ದಾನೆ, ಜೀವಕ್ಕೆ ಅಪಾಯ ಮಾಡಿಕೊಳ್ಳುತ್ತಾನೆ ಎಂದು ಅನಿಸುತ್ತಿದೆ ಎಂದಿದ್ದರು. ನಾನು ಅರ್ಧಗಂಟೆ ಮಾತಾಡಿ ನಿನ್ನ ತಪ್ಪಿಲ್ಲ ಎಂದಿದ್ದೆ. ದೇವೇಗೌಡರು ಮಾತಾಡಿದ್ದರು, ಕೌನ್ಸಿಲ್ ಸೆಕ್ರೆಟರಿ ಹೆಣ್ಣುಮಗಳು ಮಹಾಲಕ್ಷ್ಮಿ ಸಭಾಪತಿ ನೋಟಿಸ್ ಗೆ ಉತ್ತರ ಕೊಡಲಾಗದೆ, ಒಂದೂವರೆ ಪುಟದ ವರದಿ ಕೊಟ್ಟಿದ್ದಾರೆ. ಅದರಲ್ಲಿ ಧರ್ಮೇಗೌಡರ ವಿರುದ್ಧ ಚಾರ್ಜ್ ಮಾಡಿದ್ದಾರೆ. ಇದೆಲ್ಲದರ ಹಿನ್ನೆಲೆಯಲ್ಲಿ ಈ ಘಟನೆ ಆಗಿರಬಹುದು ಎಂದು ಅನಿಸುತ್ತಿದೆ. ವ್ಯಕ್ತಿಯ ಕೊಲೆಗೆ ರಾಜಕೀಯ ವ್ಯವಸ್ಥೆ ಕಾರಣವಾಗಿದೆ ಎಂದು ಅನಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

HDK 1 2

ಧರ್ಮೇಗೌಡ ಎಂಬ ಹೆಸರಿನ ಇವರು ನಿಜವಾದ ಧರ್ಮರಾಯರಾಗಿದ್ದರು. ನಿಜವಾದ ಧರ್ಮರಾಯನನ್ನು ಕಳೆದುಕೊಂಡಿದ್ದೇನೆ. ನಾನು ಮಾನ ಮರ್ಯಾದೆ ಇಲ್ಲದೆ ಜೀವನ ಮಾಡುವ ರಾಜಕಾರಣಿಗಳು ನೋಡಿದ್ದೇನೆ. ಅದೇ ರೀತಿ ಇಂತಹ ಸೂಕ್ಷ್ಮ ಜೀವಿಗಳನ್ನು ರಾಜಕೀಯದಲ್ಲಿ ನೋಡಿದ್ದೇನೆ. ಇಂತ ಕೆಟ್ಟ ಕ್ಷಣ ನನ್ನ ಜೀವನದಲ್ಲಿ ಬರುತ್ತೆ ಅಂತ ನಾನು ಯಾವತ್ತೂ ಊಹಿಸಿರಲಿಲ್ಲ. ನಾವೆಲ್ಲಾ ಸೇರಿ ಅವರನ್ನ ಕೊಲೆ ಮಾಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು.

SL DHARMEGOWDA

ಹಿಂದೆ ಎಸ್.ಎಂ ಕೃಷ್ಣ ಕುಟುಂಬದಲ್ಲಿ ಆತ್ಮಹತ್ಯೆ ನಡೆದಿತ್ತು. ಎರಡು ದಿನದ ಹಿಂದೆ ಸಿದ್ಧಾರ್ಥ್ ಸಾವಿನ ಬಗ್ಗೆ ಆಪ್ತರ ಬಳಿ ಮಾತನಾಡಿದ್ದಾರೆ. ಇವರಿಗೆ ಈಜು ಬರ್ತಿತ್ತು ಅದೆಲ್ಲವನ್ನು ಯೋಚನೆ ಮಾಡಿಯೇ ಹೀಗೆ ತೀರ್ಮಾನ ಮಾಡಿದ್ದಾರೆ. ಅಂತಿಮವಾಗಿ ವಿಧಿ ಈ ರೀತಿ ಇತಿ ಶ್ರೀ ಹಾಡಿದ್ದು ದುರಂತ. ಬ್ಲ್ಯಾಕ್ ಡೇ ಇದು. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯಬಾರದು. ಯಾರ ಜೀವನದಲ್ಲೂ ಹೀಗಾಗಬಾರದು. ಈ ವ್ಯವಸ್ಥೆ ಮರುಕಳಿಸದಂತೆ ಘಟನೆಯ ಬಗ್ಗೆ ಸ್ಪಷ್ಟವಾದ ಸತ್ಯ ಹೊರಬರಬೇಕು. ಕಾನೂನಿನ ವಿರುದ್ಧವಾಗಿ ಯಾವತ್ತು ನಿರ್ಧಾರ ಕೈಗೊಂಡಿಲ್ಲ. ಅವರು ಮಗು ಇದ್ದಂತೆ ಮಗುವಿನಂತ ಮನಸ್ಸು ಅವರದ್ದು, ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಈ ಘಟನೆಯಲ್ಲಿ ಯಾರ್ಯಾರ ಪಾತ್ರ ಇದೆ ಅವರೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

HDK 2 2

ಎರೆಡು ಸದನದಲ್ಲಿಯೂ ಇದರ ಸತ್ಯ ಹೊರಬರಬೇಕು. ರಾಜ್ಯದ ರಾಜಕಾರಣದಲ್ಲೇ ಇದು ಕಪ್ಪು ಚುಕ್ಕೆ. ಅವರು ಎಂದಿಗೂ ಹೇಡಿ ಅಲ್ಲ. ಕೆಲವೇ ಕೆಲವು ಮಂದಿಗೆ ಅಂತ ಪಾಪ ಪ್ರಜ್ಞೆ ಕಾಡೋದು. ಅವರು ಮಾಡದ ತಪ್ಪಿಗೆ ಅವರು ಬಲಿಯಾಗಿದ್ದಾರೆ. ಜಾತಿ ವ್ಯವಸ್ಥೆಯ ಬಗ್ಗೆಯೂ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಆ ಸಮಾಜಕ್ಕೆ ನಾನು ಕೇಳುತ್ತೇನೆ. ನನ್ನ ಸ್ವಂತ ಅಣ್ಣ-ತಮ್ಮಂದಿರಿಗಿಂತ ಹೆಚ್ಚಾಗಿದ್ದರು. ಬಾಂಧವ್ಯದ ಬೆಲೆಯನ್ನ ಈ ಕುಟುಂಬ ತೋರಿಸಿದೆ. ಅಣ್ಣ ತಮ್ಮಂದಿರ ಹತ್ತಿರ ನಾನು ಆತ್ಮೀಯನಾಗಿದ್ದೆ ಅಂತ ಕೆಲವರು ನನ್ನ ಮೇಲೆ ಕೋಪಿಸಿಕೊಂಡರು ಎಂದು ಹೆಚ್‍ಡಿಕೆ ತಿಳಿಸಿದರು.

TAGGED:bengaluruhd kumaraswamyPublic TVsl dharmegowdasuicideಆತ್ಮಹತ್ಯೆಎಸ್.ಎಲ್.ಧರ್ಮೇಗೌಡಪಬ್ಲಿಕ್ ಟಿವಿಬೆಂಗಳೂರುಹೆಚ್‍ಡಿ ಕುಮಾರಸ್ವಾಮಿ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

2 Iranian Gunboats Fire On Tanker In Hormuz Crew Safe UK Body
Latest

ಭಾರತದ ಎರಡು ತೈಲ ಟ್ಯಾಂಕರ್‌ ಮೇಲೆ ಇರಾನ್ ಗುಂಡಿನ ದಾಳಿ

Public TV
By Public TV
4 minutes ago
Chinese woman tosses out Rs1 5 crore cash from balcony after argument with husband
Latest

ಗಂಡನ ಜೊತೆ ಜಗಳ – ಸಿಟ್ಟಿನಲ್ಲಿ ಮೇಲಿನಿಂದ 1.5 ಕೋಟಿ ಎಸೆದ ಪತ್ನಿ

Public TV
By Public TV
20 minutes ago
Tim David
Bengaluru City

26 ರನ್‌ ಹೊಡೆದರೂ ಐಪಿಎಲ್‌ನಲ್ಲಿ ವಿಶೇಷ ಸಾಧನೆ ಮಾಡಿದ ಟಿಮ್ ಡೇವಿಡ್‌

Public TV
By Public TV
23 minutes ago
ELEPHANT 1
Districts

ಮೂರು ದಿನಗಳ ಆಪರೇಷನ್‌ ಯಶಸ್ವಿ – ನರಹಂತಕ ಕಾಡಾನೆ ಸೆರೆ

Public TV
By Public TV
1 hour ago
Pat Cummins
Cricket

IPL 2026 | ಭಾರತಕ್ಕೆ ಮರಳಿದ ಕಮ್ಮಿನ್ಸ್ – ಮತ್ತೆ SRH ನಾಯಕತ್ವದಲ್ಲಿ ಬದಲಾವಣೆ

Public TV
By Public TV
1 hour ago
Heat Weather
Bagalkot

Heat Wave Alert | ನೆತ್ತಿ ಸುಡುವ ಸೂರ್ಯ – ಕಾದು ಕೆಂಡವಾದ ಕರುನಾಡು!

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?