ಸ್ಪರ್ಧಿಗಳಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್

Public TV
2 Min Read
bb 7

ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಇನ್ನೂ ಕೆಲವೇ ಕೆಲವು ದಿನಗಳಲ್ಲಿ ಫಿನಾಲೆ ತಲುಪಲಿದೆ. ಹೀಗಾಗಿ ಬಿಗ್‍ಬಾಸ್, ಮನೆಯ ಸದಸ್ಯರಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಕೊಡುತ್ತಿದ್ದಾರೆ.

ಸೋಮವಾರ ಬೆಳ್ಳಂಬೆಳಗ್ಗೆ ಗಾಯಕಿ ಇಂದು ನಾಗರಾಜ್ ಅವರು ಬಿಗ್‍ಬಾಸ್ ಮನೆಗೆ ಬಂದು ಹಾಡು ಹೇಳುವ ಮೂಲಕ ಎಲ್ಲರನ್ನು ಎದ್ದೇಳಿಸಿದ್ದಾರೆ. ಇವರು ಮನೆಯಿಂದ ಹೋದ ತಕ್ಷಣ ಎಲಿಮಿನೇಟ್ ಆಗಿದ್ದ ಸುಜಾತಾ ಹಾಗೂ ದುನಿಯಾ ರಶ್ಮಿ ಆಗಮಿಸಿದ್ದಾರೆ. ಇವರು ಮನೆಯ ಸದಸ್ಯರ ಜೊತೆಗೆ ಸ್ವಲ್ಪ ಹೊತ್ತು ಮಾತನಾಡಿದ್ದಾರೆ. ಜೊತೆಗೆ ಅವರೇ ಸ್ಪರ್ಧಿಗಳಿಗೆ ತಿಂಡಿ ಕೂಡ ಮಾಡಿ ಕೊಟ್ಟಿದ್ದಾರೆ.

vlcsnap 2020 01 28 11h58m32s76

ಕೊನೆಗೆ ಸುಜಾತಾ ಹಾಗೂ ರಶ್ಮಿ ಹೊರಡುವಾಗ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಿದ್ದಾರೆ. ನಂತರ ಗುರುಲಿಂಗ ಸ್ವಾಮಿಜಿಗಳು ಬಿಗ್‍ಬಾಸ್‍ಗೆ ಬಂದಿದ್ದು, ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ ಹೋಗಿದ್ದಾರೆ. ಬಳಿಕ ಚೈತ್ರಾ ವಾಸುದೇವನ್ ಆಗಮಿಸಿ, ನಿಮ್ಮನ್ನು ನೋಡಿದರೆ ತುಂಬಾ ಖುಷಿಯಾಗುತ್ತಿದೆ ಎಂದು ಎಲ್ಲರಿಗೂ ದೃಷ್ಟಿ ತೆಗೆದಿದ್ದಾರೆ. ಇದೇ ಸಂದರ್ಭದಲ್ಲಿ ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಡು ಪ್ಲೇ ಆಗಿದೆ. ಆಗ ಮನೆಯವರ ಜೊತೆ ಸೇರಿಕೊಂಡು ಚೈತ್ರಾ ಕೂಡ ಡ್ಯಾನ್ಸ್ ಮಾಡಿ ಬಿಗ್ ಮನೆಯಿಂದ ಹೊರ ಹೋಗಿದ್ದಾರೆ.

ಜೈ ಜಗದೀಶ್ ಬಿಗ್‍ಬಾಸ್ ಮನೆಗೆ ಆಗಮಿಸಿದ್ದು, ಬಿಗ್‍ಬಾಸ್ ಪಯಣದ ತಮ್ಮ ಅನುಭವವನ್ನು ಸದಸ್ಯರ ಬಳಿ ಹಂಚಿಕೊಂಡು ಮನೆಯಿಂದ ಹೋಗಿದ್ದಾರೆ. ನಂತರ ರಕ್ಷಾ ಅವರು ಮನೆಗೆ ಆಗಮಿಸಿದರು. ಇವರ ಜೊತೆಗೆ ಶೈನ್ ಶೆಟ್ಟಿ, ವಾಸುಕಿ ವೈಭವ್, ಹರೀಶ್ ರಾಜ್ ಹಾಗೂ ಕುರಿ ಪ್ರತಾಪ್ ತುಂಬಾ ಕ್ಲೋಸ್ ಆಗಿ ನಡೆದುಕೊಂಡಿದ್ದಾರೆ. ಜೊತೆಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಇದರಿಂದ ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ಮುನಿಸಿಕೊಂಡು ಎಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.

vlcsnap 2020 01 28 11h57m28s194

ವಿಶೇಷ ಎಂದರೆ ಕಿಶನ್ ಮನೆಗೆ ಬಂದು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಆದರೆ ಕಿಶನ್ ಸಿಕ್ಕಿದ್ದೇ ಚಾನ್ಸ್ ಎಂಬಂತೆ ಮತ್ತೊಮ್ಮೆ ದೀಪಿಕಾ ದಾಸ್ ಜೊತೆಗೆ ಈಜುಕೊಳಕ್ಕೆ ಜಿಗಿದು ಮನೆಯಿಂದ ಹೊರಹೋಗಿದ್ದಾರೆ.

ಫಿನಾಲೆ ವಾರದಲ್ಲಿ ಮಿಡ್‍ವೀಕ್ ಎಲಿಮಿನೇಷನ್ ಮೂಲಕ ಮನೆಯಿಂದ ಒಬ್ಬ ಸದಸ್ಯ ಮನೆಯಿಂದ ಹೊರ ಹೋಗುತ್ತಾರೆ. ಈಗಾಗಲೇ ವಾಸುಕಿ ವೈಭವ್ ಟಿಕೆಟ್ ಟು ಫಿನಾಲೆ ಗೆದ್ದು ನೇರವಾಗಿ ಫಿನಾಲೆ ಹಂತ ತಲುಪಿದ್ದಾರೆ. ಉಳಿದ ಐದು ಮಂದಿಯಲ್ಲಿ ಅಂದರೆ ಶೈನ್ ಶೆಟ್ಟಿ, ಕುರಿ ಪ್ರತಾಪ್, ದೀಪಿಕಾ ದಾಸ್, ಹರೀಶ್ ರಾಜ್ ಹಾಗೂ ಭೂಮಿ ಶೆಟ್ಟಿ ಯಾರು ಹೊರಹೋಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *