ರಾಯಚೂರಿನಲ್ಲಿ ಮಳೆಗಾಗಿ ಪ್ರಾರ್ಥನೆ, ಭಜನೆ

Public TV
1 Min Read
rcr rain pooje collage

ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಜುಲೈ ಎರಡನೇಯ ವಾರ ಬಂದರೂ ಉತ್ತಮ ಮಳೆ ಬಂದಿಲ್ಲ. ಹೀಗಾಗಿ ಎಲ್ಲೆಡೆ ಮಳೆಗಾಗಿ ಪ್ರಾರ್ಥನೆ ಭಜನೆಗಳು ನಡೆದಿವೆ.

ದೇವದುರ್ಗ ತಾಲೂಕಿನ ಹಿರೇಬೂದೂರಿನಲ್ಲಿ ಮಕ್ಕಳು ದೇವರಿಗೆ ನೀರು ಹಾಕಿ ಪ್ರಾರ್ಥನೆ ಸಲ್ಲಿಸಿದರು. `ಮಳೆ ಸುರಿಸು ದೇವರೇ’ ಎಂದು ಗ್ರಾಮದ ದೇವರುಗಳಲ್ಲಿ ಮಕ್ಕಳೆಲ್ಲ ಪ್ರಾರ್ಥಿಸಿದರು. ಮಳೆ ಬಾರದ ಹಿನ್ನೆಲೆಯಲ್ಲಿ ಬಿತ್ತನೆಯೂ ಆರಂಭವಾಗಿಲ್ಲ.

rcr rain pooje 1

ಕುಡಿಯುವ ನೀರಿಗೂ ಹಾಹಾಕಾರ ಎದ್ದಿದೆ. ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ಈ ಬಾರಿಯ ಮುಂಗಾರು ಸಹ ಕೈಕೊಟ್ಟಂತಾಗುತ್ತದೆ. ಮುಂದೆ ಮಳೆ ಬಂದರೂ ಪ್ರಯೋಜನವಿಲ್ಲ. ಹೀಗಾಗಿ ಉತ್ತಮ ಮಳೆಯ ನಿರೀಕ್ಷೆಯಲ್ಲಿರುವ ರೈತರು ಬಿತ್ತನೆ ಕಾರ್ಯಕ್ಕೆ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿದ್ದಾರೆ. ಆದರೆ ಮೋಡ ಮಾತ್ರ ಮಳೆಯಾಗಿ ಸುರಿಯುತ್ತಿಲ್ಲ. ಹೀಗಾಗಿ ಎಲ್ಲೆಡೆ ಮಳೆಗಾಗಿ ಪ್ರಾರ್ಥನೆಗಳು ನಡೆದಿವೆ.

rcr rain pooje 2

ಈ ಹಿಂದೆ ರಾಯಚೂರು ಜನರು ಮಣ್ಣೆತ್ತಿನ ಅಮವಾಸ್ಯೆಯನ್ನು ಸಂಭ್ರಮದಿಂದ ಆಚರಿಸಿದ್ದರು. ಸಾರ್ವಜನಿಕರು, ರೈತರು ಮಣ್ಣೆತ್ತುಗಳನ್ನ ಕೊಂಡು ಮನೆ, ಜಮೀನುಗಳಲ್ಲಿ ಇಟ್ಟು ಪೂಜೆ ಮಾಡಿದ್ದರು. ಅಲ್ಲದೆ ಈ ಬಾರಿ ಉತ್ತಮ ಮಳೆಯಾಗಲಿ ಎಂದು ಮಣ್ಣೆತ್ತುಗಳಲ್ಲಿ ಪ್ರಾರ್ಥಿಸಿದ್ದರು. ಬರಗಾಲದಿಂದ ಬೇಸತ್ತಿರುವ ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿ, ಮಣ್ಣೆತ್ತುಗಳ ಪೂಜೆಗೆ ಮಣಿದು ಮಳೆರಾಯ ಊರಿಗೆ ಬರುತ್ತಾನೆ ಎಂದು ನಂಬಿ ಸಡಗರ ಸಂಭ್ರಮದಿಂದ ಮಣ್ಣೆತ್ತಿನ ಅಮವಾಸ್ಯೆಯನ್ನ ಆಚರಿಸಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *