Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಂಬಳ ವಿಚಾರದ ಬಗ್ಗೆ ಮ್ಯಾನೇಜರ್ ಕಿರಿಕ್ – ಅಂಬರೀಶ್ ಬಾಂಧವ್ಯದ ಬಗ್ಗೆ ಜಗ್ಗೇಶ್ ಮನದಾಳದ ಮಾತು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸಂಬಳ ವಿಚಾರದ ಬಗ್ಗೆ ಮ್ಯಾನೇಜರ್ ಕಿರಿಕ್ – ಅಂಬರೀಶ್ ಬಾಂಧವ್ಯದ ಬಗ್ಗೆ ಜಗ್ಗೇಶ್ ಮನದಾಳದ ಮಾತು

Bengaluru City

ಸಂಬಳ ವಿಚಾರದ ಬಗ್ಗೆ ಮ್ಯಾನೇಜರ್ ಕಿರಿಕ್ – ಅಂಬರೀಶ್ ಬಾಂಧವ್ಯದ ಬಗ್ಗೆ ಜಗ್ಗೇಶ್ ಮನದಾಳದ ಮಾತು

Public TV
Last updated: November 26, 2018 10:22 am
Public TV
Share
3 Min Read
JAGGESH
SHARE

ಬೆಂಗಳೂರು: ಕಲಿಯುಗ ಕರ್ಣ ಅಂಬರೀಶ್ ಜೊತೆ ಹಲವರು ತುಂಬಾ ಆತ್ಮೀಯ ಒಡನಾಟ ಇಟ್ಕೊಂಡಿದ್ರು. ಅಂಥವರಲ್ಲೊಬ್ಬರು ನಟ ಜಗ್ಗೇಶ್. ಜಗ್ಗೇಶ್ – ಅಂಬರೀಶ್ ಒಡನಾಟ ವೈಯಕ್ತಿಕ, ಕೌಟುಂಬಿಕ, ಚಿತ್ರರಂಗ ಹಾಗೂ ರಾಜಕೀಯವಾಗಿತ್ತು. ಜಗ್ಗೇಶ್ ಅಂಬರೀಶ್ ಕುರಿತ ತಮ್ಮ ಮನದ ಮಾತುಗಳನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ.

ಅಂಬರೀಶ್ ಅವರ ಜೊತೆ ಮೊದಲು ನಾನು ನಟಿಸಿಲ್ಲ. ನನ್ನ ದೊಡ್ಡ ಮಗ ಗುರುರಾಜ್ ನಟಿಸಿದ್ದನು. ಮಲ್ಲಿಗೆ ಹೂವೆ ಎಂಬ ಚಿತ್ರಕ್ಕೆ ಒಂದು ಮಗು ಬೇಕು ಅಂತ ಕೇಳಿದಾಗ ನಿರ್ದೇಶಕರು ಜಗ್ಗೇಶ್ ಮಗನೇ ಇದ್ದಾನೆ ಅಂತ ಹೇಳಿ ಕರೆದುಕೊಂಡು ಬರಲು ಹೇಳಿದ್ದರು. ಹೀಗಾಗಿ 2 ವರ್ಷದ ಗುರುರಾಜ್ ಅವರ ಜೊತೆ ಅಭಿನಯಿಸಿದ್ದನು. ಆ ಸಂದರ್ಭದಲ್ಲೇ ನಮ್ಮಿಬ್ಬರ ಗೆಳೆತನ ಆರಂಭವಾಯಿತು ಅಂದ್ರು.

kichcha sudeep 2

ಮೊದಲು ಅವರು ನನ್ನ ನೋಡಿ ತಮಿಳಿನವನು ಅಂದುಕೊಂಡು ತಮಿಳಿನಲ್ಲೇ ಮಾತು ಶುರು ಮಾಡಿದ್ರು. ಆಗ ನಾನು ಇಲ್ಲ ನಾನು ಗೌಡನೇ ಅಂತ ಹೇಳಿದ್ದೆ. ತುಮಕೂರು ಕಡೆಯವರು ಅಂತ ಹೇಳಿದ ಬಳಿಕ ಹೌದೆನು ಅಂತ ಮಧ್ಯಾಹ್ನ ಒಟ್ಟಿಗೆ ಕುಳಿತು ಮಾತನಾಡಿದ್ದೆವು ಅಂತ ತಿಳಿಸಿದ್ರು.

ಇದಾದ ಬಳಿಕ ಅವರು ನನ್ನ ಬಳಿ ತುಂಬಾನೇ ಆತ್ಮೀಯತೆಯಿಂದ ನಡೆದುಕೊಂಡರು. ರೌಡಿ ಎಂಎಲ್ ಎ ಅನ್ನೋ ಚಿತ್ರವೊಂದನ್ನು ಮಾಡಿದ್ದೆ. ಆ ಸಿನಿಮಾ ಮಾಡಲು 35 ಸಾವಿರ ಸಂಬಳ ಕೇಳಿದ್ದೆ. ಆಗ ಮ್ಯಾನೇಜರ್ ಬಂದು ನಿನ್ನ ಮಕಕ್ಕೆ 35 ಸಾವಿರ ಅಂತ ಹೇಳಿ ನನ್ನ ಮೇಲಿಂದ ಕೆಳಗೆವರೆಗೆ ನೋಡಿದ್ದ. ಇದರಿಂದ ನನಗೆ ಬೇಜಾರಾಗಿತ್ತು. ಈ ವೇಳೆ ಮಾತಿಗೆ ಮಾತು ಬೆಳೆಸಿ ಸಿಟ್ಟುಮಾಡಿಕೊಂಡಿದ್ದೆ. ಸಂಜೆ ಅಂಬರೀಶ್ ಬಳಿ ಹೋಗಿ ಆತ, ಯಾರು ಯಾರು ಏನೇನು ಮಾಡಿದ್ದಾರೆ ಅಂತ ಲಿಸ್ಟ್ ಕೊಟ್ಟಿದ್ದ. ಅದರಲ್ಲಿ ಒಂದು ಪಾತ್ರಕ್ಕೆ ಸಿಹಿಕಹಿ ಚಂದ್ರುನ ಹಾಕಿದ್ದೀರಿ ಅಂತ ಅಂಬಿ ಪ್ರಶ್ನಿಸಿದ್ದರು. ಈ ವೇಳೆ ಮ್ಯಾನೇಜರ್ ಜಗ್ಗೇಶ್ ಜಾಸ್ತಿ ಹಣ ಕೇಳಿಬಿಟ್ಟ ಅದಕ್ಕೆ ಚಂದ್ರುನ ಹಾಕಿದ್ದೀವಿ ಅಂತ ಹೇಳಿದ್ರಂತೆ. ಅವಾಗ ಅಂಬಿ ಎಷ್ಟು ಕೇಳಿದ ಅಂತ ಮರು ಪ್ರಶ್ನಿಸಿದ್ರು. ಈ ವೇಳೆ ಮ್ಯಾನೇಜರ್ 35 ಸಾವಿರ ಅಂದಿದ್ದಾರೆ. ಇದರಿಂದ ಸಿಟ್ಟುಗೊಂಡ ಅಂಬಿ, ನನ್ನ ಮಗನೇ ಅವನು ಒಂದು ಲಕ್ಷ ತೆಗೆದುಕೊಂಡಿದ್ದ. ನಾನೇ ಅವನಿಗೆ 35 ಕೇಳು ಅಂತ ಹೇಳಿದ್ದು. ಇದೀಗ ನೀನು ಹೇಳಿದ ಹಾಗೂ ಅವನನ್ನು ಬೇಡ ಅಂದ ತಪ್ಪಿಗೆ ಅವನಿಗೆ 50 ಸಾವಿರ ಕೊಡು ಅಂತ ಹೇಳಿದ್ದರು. ಕೊಟ್ರೆ ಸಿನಿಮಾ ಆರಂಭಿಸುವುದಾಗಿ ಅಂಬಿ ಹೇಳಿದ್ದರು. ಅದೇ ದಿನ ಆ ಮ್ಯಾನೇಜರ್ ಬಂದು ನನ್ನ ಕಾಲಿಗೆ ಬಿದ್ದಿದ್ದಾನೆ. ಅಂಬರೀಶ್ ಅವರು ಬೈದ್ರು. ಲಕ್ಷ ಕೇಳೋನಿಗೆ ನೀವು ಕಮ್ಮಿ ಹೇಳಿ ಅಪಮಾನ ಮಾಡಿದ್ದೀರಿ ಅಂತ ಬೈದರು ಅಂತ ಹೇಳಿದ. ಬಳಿಕ ನಾನು ಆ ಸಿನಿಮಾದಲ್ಲಿ ನಟಿಸಿದ್ದೆ ಅಂತ ಅಂದಿನ ದಿನವನ್ನು ಮೆಲುಕು ಹಾಕಿಕೊಂಡರು.

ambareesh cremation process 4

ಅದು ಒಬ್ಬ ಕಲಾವಿದನಿಗೆ ಇದ್ದಂತಹ ಅಭಿಮಾನ. ನನ್ನಂತೆ ಇನ್ನೊಬ್ಬ ಕಲಾವಿದನೂ ಚೆನ್ನಾಗಿರಬೇಕು ಅನ್ನೋದು ದೊಡ್ಡ ಗುಣ ಅವರಲ್ಲಿತ್ತು. ಇತ್ತೀಚೆಗೆ ಕಲಾವಿದರ ಸಂಘದಲ್ಲೇ ಅವರನ್ನು ಭೇಟಿ ಮಾಡಿದ್ದೆ. ಸುಮಾರು 4 ತಾಸು ಮಾತುಕತೆ ನಡೆಸಿದ್ದೆವು. ತುಂಬಾ ಜನರಿಗೆ ಅನ್ನ ಹಾಕಿ, ಆನಂದಪಡುವ ಜೀವ ಅದು. ನಾನು ಹೋಗ್ತೀನಿ ಅಂದ್ರೂ ಬಿಡದೆ ಕೂರಿಸಿ ಊಟ ಹಾಕಿ ತಿನ್ನಿಸಿ, ಭಾವನಾತ್ಮಕವಾಗಿ ಮಾತನಾಡಿಸುವ ಒಳ್ಳೆಯ ಗುಣ ಅವರಲ್ಲಿತ್ತು ಅಂದ್ರು.

vlcsnap 2018 11 25 10h48m57s104

ರಾಜ್ ಕುಮಾರ್ ಕನಸನ್ನು ನೀನು ಸಾಕಾರ ಮಾಡಿಬಿಟ್ಟಿದ್ದೀಯಾ. ಇದಕ್ಕೋಸ್ಕರ ನಾನು ತುಂಬಾನೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಚಿತ್ರರಂಗದ ವತಿಯಿಂದ ತುಂಬಾನೇ ಥ್ಯಾಂಕ್ಸ್ ಹೇಳುತ್ತೇನೆ. ಯಾಕಂದ್ರೆ ರಾಜ್ ಕುಮಾರ್ ಅವರಿಗೆ ಎಲ್ಲಾ ಕಲಾವಿದರು ನೆರಳಲ್ಲಿ ಕುಳಿತುಕೊಳ್ಳಬೇಕು ಅನ್ನೊ ಒಂದು ದೊಡ್ಡ ಕನಸಿತ್ತು ಇತ್ತು. ಆದ್ರೆ ಅದನ್ನು ಯಾರಿಗೂ ಮಾಡಲು ಸಾಧ್ಯವಾಗಿರಲಿಲ್ಲ. ಯಾರಿಗೂ ಒಂದೇ ಒಂದು ಕೂದಲು ಅಲ್ಲಾಡಿಸಲು ಸಾಧ್ಯವಾಗಿಲ್ಲ. ಆದ್ರೆ ಅಂಬರೀಶ್ ಅವರು ತಾನೇ ನಿಂತು ಸರ್ಕಾರಗಳ ಜೊತೆ ಜಗಳವಾಡುತ್ತಿದ್ದರು. ಅವರಿಗೆ ಒಂದು ಪ್ರೀತಿ ಇತ್ತು. ಎಲ್ಲಾರಿಗೂ ಪಕ್ಷ ಇತ್ತು. ಆದ್ರೆ ಅಂಬರೀಶ್ ಅವರಿಗೆ ಪಕ್ಷ ಇರಲಿಲ್ಲ. ನಾನು ಅವರ ಜೊತೆ ಹೋಗಿ 4 ಜನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೆ. ಆ ಸಂತೋಷವನ್ನು ನಾನು ಕಣ್ಣಾರೆ ಕಂಡಿದ್ದೇನೆ ಅಂದ್ರು.

ambareesh airlift

ಅಂಬಿ ಸಾವು ನನಗೂ ನೋವು ತಂದಿದೆ. ಸಾವು ಖಚಿತ. ಅವರು ಇನ್ನೂ 15- 20 ವರ್ಷ ನಮ್ಮ ಜೊತೆ ಇರ ಬೇಕಿತ್ತು. ಆದ್ರೂ ಅವರ ಆಥ್ಮಕ್ಕೆ ಶಾಂತಿ ಸಿಗಲಿ ಅಂತ ಅವರು ಸಂತಾಪ ಸೂಚಿಸಿದ್ರು.

https://www.youtube.com/watch?v=E1eeCqAkbf0

https://www.youtube.com/watch?v=t5JPHT_oqa0

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:AmbareeshbengalurujaggeshKannada Film IndustryPublic TVsandalwoodಅಂಬರೀಶ್ಕನ್ನಡ ಚಿತ್ರರಂಗಜಗ್ಗೇಶ್ಪಬ್ಲಿಕ್ ಟಿವಿಬೆಂಗಳೂರುಸ್ಯಾಂಡಲ್ ವುಡ್
Share This Article
Facebook Whatsapp Whatsapp Telegram

Cinema news

Sarse Ninna Seraga Sarse song jogi prem
ಸರ್ಸೆ ಸೆರಗ ಸೆರ್ಸೆ ಹಾಡಿನಲ್ಲಿ ಅಶ್ಲೀಲತೆ ಆರೋಪ – ನಿರ್ದೇಶಕ ಪ್ರೇಮ್ ಸೇರಿ ಹಲವರಿಗೆ ಮಹಿಳಾ ಆಯೋಗ ನೋಟಿಸ್
Cinema Latest Main Post Sandalwood
Dhurandhar 2
ವಿಶ್ವದಾದ್ಯಂತ ‘ಧುರಂಧರ್‌ 2’ ರಿಲೀಸ್‌ – ರಣವೀರ್‌ ಸಿಂಗ್‌ ಕಮಾಲ್‌
Bollywood Cinema Latest Main Post
KD Vulgar Song Controversy I will write and release a new song Director Prem apologizes 1
ಹೊಸ ಹಾಡನ್ನು ಬರೆದು ಬಿಡುಗಡೆ ಮಾಡುತ್ತೇನೆ: ಕ್ಷಮೆ ಕೇಳಿದ ಪ್ರೇಮ್‌
Bengaluru City Cinema Districts Latest Main Post
KD The Devil Thanks for opposing the song Nora Fatehi Reacts To Vulgar Song Controversy
ಸಾಂಗ್‌ ವಿರೋಧಿಸಿದ್ದಕ್ಕೆ ಥ್ಯಾಂಕ್ಸ್‌ – ಕೆಡಿಯ ಸರ್ಸೆ ಸೆರಗ ಹಾಡಿಗೆ ನೋರಾ ಕಿಡಿ ಕಿಡಿ
Bollywood Cinema Latest Sandalwood

You Might Also Like

Drone hits Saudi Arabias Samref refinery
Latest

ಯುದ್ಧ ಆರಂಭವಾದ ಬಳಿಕವೂ ತೈಲ ರಫ್ತು ಮಾಡುತ್ತಿದ್ದ ಸೌದಿಯ ರಿಫೈನರಿ ಮೇಲೆಯೇ ಇರಾನ್‌ ಡ್ರೋನ್‌ ದಾಳಿ

Public TV
By Public TV
9 minutes ago
Ras Laffan
Latest

ವಿಶ್ವದ ಅತಿ ದೊಡ್ಡ LNG ಸ್ಥಾವರದ ಮೇಲೆ ಇರಾನ್‌ ದಾಳಿ- ಭಾರತದ ಮೇಲೆ ಪರಿಣಾಮ ಏನು?

Public TV
By Public TV
11 minutes ago
Javaramma
Districts

ಮಾಜಿ ಪ್ರಧಾನಿ ದೇವೇಗೌಡರ ಸಹೋದರಿ ನಿಧನ

Public TV
By Public TV
29 minutes ago
plastics industry
Dakshina Kannada

ಇರಾನ್‌ ಯುದ್ಧ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ಲಾಸ್ಟಿಕ್ ಉದ್ಯಮಕ್ಕೆ ಬಂದ್ ಭೀತಿ

Public TV
By Public TV
30 minutes ago
Flights
Latest

ಮಧ್ಯಪ್ರಾಚ್ಯ ಸಂಘರ್ಷ – ಭಾರತದ ಪ್ರವಾಸೋದ್ಯಮ, ವಿಮಾನಯಾನ ಕ್ಷೇತ್ರಕ್ಕೆ ಆತಂಕ

Public TV
By Public TV
43 minutes ago
Indian Origin Men Fined Rs 1.7 Lakh Each In for Spitting Paan On Streets
Latest

ಲಂಡನ್‌ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರಿಗೆ ತಲಾ 1.7 ಲಕ್ಷ ದಂಡ

Public TV
By Public TV
51 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?