ಬೆಂಗಳೂರು: ಬ್ಯಾಟರಾಯನಪುರದ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತ ಭರತ್ ಭಾನುವಾರ ಕಾಂಗ್ರಸ್ ಪಕ್ಷಕ್ಕೆ ಸೇರಿದ್ದು ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ಈ ವೇಳೆ ಭರತ್ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಅಂತಾನೂ ಹೇಳಲಾಗುತ್ತಿತ್ತು. ಆದ್ರೆ ಸ್ವತಃ ಭರತ್ ಕಾರಿಗೆ ಬೆಂಕಿ ಹಚ್ಚುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಸೋಮವಾರ ಜಕ್ಕೂರಿನ ಕಾರ್ಪೋರೆಟರ್ ಮುನಿಂದ್ರ ಅವ್ರ ಮನೆಯ ಮುಂದೆ ತನ್ನ ಕಾರನಲ್ಲಿ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಭರತ್ ಓಡಿಹೋಗಿದ್ದಾರೆ. ಇಷ್ಟೆಲ್ಲ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬಿಜೆಪಿಯಿಂದ ಕಾಂಗ್ರಸ್ ಪಕ್ಷಕ್ಕೆ ಸೇರಿದ್ದಕ್ಕಾಗಿ ಬಿಜೆಪಿ ಅವ್ರು ಈ ರೀತಿ ಮಾಡಿದ್ದಾರೆ ಅಂತಾ ಸುಳ್ಳು ಸುದ್ದಿ ಹಬ್ಬಿಸಲು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಅದ್ರೆ ಅಲ್ಲಿದ್ದ ಸಿಸಿಟಿವಿ ಭರತ್ ಕುತಂತ್ರ ಬಯಲಾಗಿದೆ.
ಇದೇ ರೀತಿ ಜನರಿಗೆ ಸುಳ್ಳು ಹೇಳಿಕೊಂಡೆ ಕಾಂಗ್ರೆಸ್ ನವರು ಇಲ್ಲಿ ಗೆದ್ದಿರೋದು. ಅಲಿ ಸಿಸಿಟಿವಿ ಇಲ್ಲ ಅಂದಿದ್ರೆ ನಮ್ಮ ಮೇಲೆ ಕಾಂಗ್ರಸ್ ಪಕ್ಷದವರು ಅಪಪ್ರಚಾರ ಮಾಡುತ್ತಿದ್ರು. ನಾವೇ ಪೊಲೀಸ್ ಕಂಪ್ಲೇಂಟ್ ಕೊಡಲಾಗಿದ್ದು, ಘಟನೆ ಬಳಿಕ ಭರತ್ ನಾಪತ್ತೆಯಾಗಿದ್ದನೆ.. ಇದು ಕಾಂಗ್ರೆಸ್ನವ್ರ ದೊಡ್ಡ ಕುತಂತ್ರ ಅಂತಾ ಬಿಜೆಪಿಯ ಅಭ್ಯರ್ಥಿ ಎ ರವಿ ಆರೋಪಿಸಿದ್ದಾರೆ.
https://youtu.be/zuqIq7lIiaM