ಪಂಚಾಂಗ
ಶ್ರೀ ವಿಶ್ವಾವಸುನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದಮಾಸ, ಶುಕ್ಲಪಕ್ಷ,
ಚತುರ್ದಶಿ, ಶನಿವಾರ,
ಧನಿಷ್ಠ ನಕ್ಷತ್ರ
ರಾಹುಕಾಲ: 09:17 ರಿಂದ 10:49
ಗುಳಿಕಕಾಲ: 06:12 ರಿಂದ 07:45
ಯಮಗಂಡಕಾಲ: 01:53 ರಿಂದ 03:25
ಮೇಷ: ಭೂಮಿ ವಾಹನಗಳಿಂದ ಅಧಿಕ ಲಾಭ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಅಧಿಕಾರಿಗಳಿಂದ ಸಮಸ್ಯೆ.
ವೃಷಭ: ಪತ್ರ ವ್ಯವಹಾರಗಳಿಗೆ ಅನುಕೂಲ, ಕೆಲಸ ಕಾರ್ಯಗಳಿಗೆ ಅಡೆತಡೆ, ಉದ್ಯೋಗ ವ್ಯಾಪಾರದಲ್ಲಿ ಒತ್ತಡ, ದಾಂಪತ್ಯದ ಮೇಲೆ ದುಷ್ಪರಿಣಾಮ.
ಮಿಥುನ: ತಂದೆಯಿಂದ ಧನಾಗಮನ, ಉದ್ಯೋಗನಿಮಿತ್ತ ಪ್ರಯಾಣ, ಆರೋಗ್ಯದಲ್ಲಿ ಏರುಪೇರು.
ಕಟಕ: ಸ್ವಯಂಕೃತ ಅಪರಾಧಿಗಳಾಗುವಿರಿ, ಬಂಧು ಬಾಂಧವರಿಂದ ತೊಂದರೆ, ಮೆಚ್ಚುಗೆಯ ಮಾತುಗಳಿಂದ ಕಾರ್ಯಜಯ.
ಸಿಂಹ: ಸಂಗಾತಿಗೋಸ್ಕರ ಅಧಿಕ ಖರ್ಚು, ಸ್ತ್ರೀಯರೊಂದಿಗೆ ಕಲಹ, ಮಾನಸಿಕವಾಗಿ ನೋವು.
ಕನ್ಯಾ: ಆಸ್ಪತ್ರೆಗೆ ದಾಖಲಾಗುವ ಸಂದರ್ಭ, ಸಾಲದ ಸಹಾಯ ಲಭಿಸುವುದು, ದಾಯಾದಿಗಳ ಕಿರಿಕಿರಿ, ನಿದ್ರಾಭಂಗ.
ತುಲಾ: ಉದ್ಯೋಗ ಸ್ಥಳದಲ್ಲಿ ಉತ್ತಮ ಹೆಸರು, ದೂರ ಪ್ರದೇಶಗಳಿಗೆ ತೆರಳುವ ಆಲೋಚನೆ, ಸಹೋದರನೊಂದಿಗೆ ವಾಗ್ವಾದ.
ವೃಶ್ಚಿಕ: ರೋಗಭಾದೆಗಳಿಂದ ಮುಕ್ತಿ, ಉದ್ಯೋಗ ಸ್ಥಳದಲ್ಲಿ ಕಲಹ, ಶತ್ರುಗಳು ಅಧಿಕ, ಸಾಲದ ಚಿಂತೆ.
ಧನಸ್ಸು: ಅನಿರೀಕ್ಷಿತ ಉದ್ಯೋಗ ಪ್ರಾಪ್ತಿ, ಅಧಿಕಾರಿಗಳ ಕಿರಿಕಿರಿಯಿಂದ ನಿದ್ರಾಭಂಗ, ಆತ್ಮೀಯರು ದೂರ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಕೋರ್ಟ್ ಕೇಸುಗಳಲ್ಲಿ ಜಯ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ.
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಜೀವನದಲ್ಲಿ ಗೆಲ್ಲಬೇಕೆಂಬ ಛಲ, ಗೃಹ ಉದ್ಯೋಗ ಸ್ಥಳ ಬದಲಾವಣೆಯಿಂದ ತೊಂದರೆ.
ಮೀನ: ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಸಾಲ ಮಾಡುವ ಪರಿಸ್ಥಿತಿ, ಮಕ್ಕಳು ದೂರವಾಗುವರು.