ಬೆಂಗಳೂರು: ಕಾಲ್ತುಳಿತ ಪ್ರಕರಣದಲ್ಲಿ ಸಿಎಂ ಆಪ್ತ ಗೋವಿಂದರಾಜು ಅವರನ್ನು ಬಂಧಿಸಬೇಕು. ಸಿಎಂ ಮತ್ತು ಡಿಸಿಎಂ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಯತ್ನಾಳ್, ವಿಧಾನಸೌಧದ DCP ಅವರು ಐಪಿಎಲ್ ವಿಜಯೋತ್ಸವ ಆಯೋಜಿಸಲು ಸಿಬ್ಬಂದಿಯ ಕೊರತೆ ಹಾಗೂ ವಿಧಾನಸೌಧವು Vital Installation ಆಗಿರುವುದರಿಂದ ಸಿ.ಸಿ. ಕ್ಯಾಮೆರಾ ಕಣ್ಗಾವಲು ಸೇರಿದಂತೆ ಇತರ ಭದ್ರತೆಗಳನ್ನು ಕಲ್ಪಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ [DPAR] ಕಾರ್ಯದರ್ಶಿಗೆ ಬರೆದ ಪತ್ರ ವೈರಲ್ ಆಗಿರುವುದು ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಿದೆ ಎಂದು ಹೇಳಿದ್ದಾರೆ.
ವಿಧಾನಸೌಧದ DCP ಅವರು ಐಪಿಎಲ್ ವಿಜಯೋತ್ಸವ ಆಯೋಜಿಸಲು ಸಿಬ್ಬಂದಿಯ ಕೊರತೆ ಹಾಗೂ ವಿಧಾನ ಸೌಧವು Vital Installation ಆಗಿರುವುದರಿಂದ ಸಿ.ಸಿ. ಕ್ಯಾಮೆರಾ ಕಣ್ಗಾವಲು ಸೇರಿದಂತೆ ಇತರ ಭದ್ರತೆಗಳನ್ನು ಕಲ್ಪಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ [DPAR] ಕಾರ್ಯದರ್ಶಿಗೆ ಬರೆದ ಪತ್ರ ವೈರಲ್ ಆಗಿರುವುದು ಸರ್ಕಾರವನ್ನು ಇಕ್ಕಟಿಗೆ… pic.twitter.com/5SKgINCyPA
— Basanagouda R Patil (Yatnal) (@BasanagoudaBJP) June 8, 2025
ಈಗ ಮುಖ್ಯ ಮಂತ್ರಿಗಳು DPAR ಕಾರ್ಯದರ್ಶಿ ಸತ್ಯವತಿಯವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಪತ್ರ ಸೋರಿಕೆಯಾಗಿರುದರ ಬಗ್ಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದರಂತೆ. ಸರ್ಕಾರ ಮಾಡಿದ ಎಡವಟ್ಟಿಗೆ ಮತ್ತೊಂದು ಅಧಿಕಾರಿಯ ತಲೆದಂಡ ಆಗುವುದು ಖಚಿತವಾಗಿದೆ.
ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಸಾಲು ಸಾಲು ತಪ್ಪುಗಳು, ರಾಜಕೀಯ ಪಾರಮ್ಯ ಮೆರೆಯಲು ಜನರ ಪ್ರಾಣವನ್ನು ಬಲಿ ಕೊಟ್ಟ ಸರ್ಕಾರ ಈಗ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತಿದೆ. ದಕ್ಷ ಅಧಿಕಾರಿ ಹಾಗೂ ಬೆಂಗಳೂರು ನಗರ ಆಯುಕ್ತರಾದ ದಯಾನಂದರನ್ನು ಅಮಾನತ್ತು ಮಾಡಿರುವುದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವಷ್ಟೇ.
ಈ ಘಟನೆಯನ್ನು ಆಯೋಜಿಸುವಲ್ಲಿ ಪಾತ್ರ ವಹಿಸಿದ ಮುಖ್ಯ ಮಂತ್ರಿಗಳ ಆಪ್ತರು ಹಾಗೂ ಸಲಹೆಗಾರರಾದ ಗೋವಿಂದರಾಜು ಅವರನ್ನು ಸರ್ಕಾರ ತಕ್ಷಣವೇ ಬಂಧಿಸಬೇಕು. ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದ ನೈತಿಕ ಜವಾಬ್ದಾರಿಯನ್ನು ಹೊತ್ತು ಮುಖ್ಯ ಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ನೀಡಬೇಕು ಎಂದು ಯತ್ನಾಳ್ ಒತ್ತಾಯಿಸಿದ್ದಾರೆ.