ನವದೆಹಲಿ: ತಮ್ಮ ಜನರಲ್ ಪ್ರಾವಿಡೆಂಟ್ ಫಂಡ್ (GPF) ಖಾತೆಗಳನ್ನು ಮುಚ್ಚಲಾಗಿದೆ ಎಂದು ಆರೋಪಿಸಿ ಪಾಟ್ನಾ ಹೈಕೋರ್ಟ್ನ (Patna Highcourt) ಏಳು ಮಂದಿ ನ್ಯಾಯಾಧೀಶರು ಸುಪ್ರೀಂ ಕೋರ್ಟ್ಗೆ (Supreme Court) ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಡಿ.ವೈ ಚಂದ್ರಚೂಡ್ (DY Chandrachud) ನೇತೃತ್ವದ ತ್ರಿಸದಸ್ಯ ಪೀಠ ಕೇಂದ್ರ ಸರ್ಕಾರಕ್ಕೆ (Government Of India) ಶುಕ್ರವಾರ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಹಿಂಡೆನ್ಬರ್ಗ್ ರಿಪೋರ್ಟ್ ಎಫೆಕ್ಟ್- ಗೌತಮ್ ಅದಾನಿಗೆ 12 ಲಕ್ಷ ಕೋಟಿ ನಷ್ಟ
ಈ ವಿಷಯವನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ಶೀಘ್ರದಲ್ಲಿ ಮಾಹಿತಿ ನೀಡಲಿದ್ದೇವೆ ಎಂದು ಪ್ರಕರಣದ ಬಗ್ಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ (CSG), ಸಿಜೆಐ ಪೀಠದ ಮುಂದೆ ಹೇಳಿದ್ದಾರೆ. ಮುಂದಿನ ವಿಚಾರಣೆ ವೇಳೆ ಪ್ರಕರಣದ ಸ್ಥಿತಿಗತಿಯನ್ನು ತಿಳಿಸಲು ಎಎಸ್ಜಿಗೆ ನ್ಯಾಯಾಲಯವು ಸೂಚಿಸಿದೆ. ಇದನ್ನೂ ಓದಿ: ಒಬ್ಬಳನ್ನೇ ರೆಸಾರ್ಟ್ ಗೆ ಕರೆದರೆ ಉದ್ದೇಶ ಏನಿರತ್ತೆ? : ಕನ್ನಡದ ನಟಿ ಹೇಳಿಕೊಂಡ ಕಹಿ ಸತ್ಯ
ತಮ್ಮ ಜಿಪಿಎಫ್ ಖಾತೆಯನ್ನು ನಿಲ್ಲಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ಫೆಬ್ರವರಿ 24 ರಂದು ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶರ ಯಾವ ಜಿಪಿಎಫ್ ಖಾತೆಯನ್ನು ನಿಲ್ಲಿಸಲಾಗಿದೆ? ಅರ್ಜಿದಾರರು ಯಾರು ಎಂದು ಸಿಜೆಐ ಕೇಳಿದ್ದರು. ಪಾಟ್ನಾ ಹೈಕೋರ್ಟ್ನ ಏಳು ನ್ಯಾಯಾಧೀಶರು ಎಂದು ವಕೀಲರು ಪ್ರತಿಕ್ರಿಯಿಸಿದ ನಂತರ ಅರ್ಜಿಯನ್ನು ಇಂದಿಗೇ ಪಟ್ಟಿ ಮಾಡಲಾಗಿತ್ತು.
ಜಿಪಿಎಫ್ ಸರ್ಕಾರಿ ನೌಕರರನ್ನು ಉಲ್ಲೇಖಿಸುವ ಭವಿಷ್ಯ ನಿಧಿ ಯೋಜನೆಯಾಗಿದೆ. ಈ ವ್ಯವಸ್ಥೆಯಲ್ಲಿ, ಸರ್ಕಾರಿ ಅಧಿಕಾರಿಗಳು ತಮ್ಮ ಸಂಬಳದ ಸ್ವಲ್ಪ ಮೊತ್ತವನ್ನು ಖಾತೆಗೆ ನೀಡುತ್ತಾರೆ. ನಿವೃತ್ತಿ ಅಥವಾ ನಿವೃತ್ತಿಯ ಸಮಯದಲ್ಲಿ ಉದ್ಯೋಗಿಗೆ ಸಂಚಿತ ಬಾಕಿಯನ್ನು ಪಾವತಿಸಲಾಗುತ್ತದೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k