ಬೆಂಗಳೂರು: ನಗರ ಪ್ರದೇಶಗಳಲ್ಲಿ ಸ್ಫೋಟಗೊಳ್ಳುತ್ತಿರುವ ಕೊರೊನಾ ಈಗ ಗ್ರಾಮೀಣ ಭಾಗದಲ್ಲೂ ಸ್ಫೋಟಗೊಳ್ಳಲು ಆರಂಭವಾಗಿದೆ.
ಜನತಾ ಲಾಕ್ಡೌನ್ ಘೋಷಣೆ ಬೆನ್ನಲ್ಲೇ ಜನರು ಬೆಂಗಳೂರು ಸಹವಾಸ ಬೇಡ ಅಂತ ತಮ್ಮ ಊರುಗಳತ್ತ ದಾಂಗುಡಿ ಇಟ್ಟಿದ್ದರು. ಕೋವಿಡ್ ಟೆಸ್ಟ್ ಬಗ್ಗೆ ತಲೆಯೂ ಕೆಡಿಸಿಕೊಳ್ಳದೇ ಸಿಕ್ಕ ಸಿಕ್ಕ ವಾಹನಗಳಲ್ಲಿ ಹಳ್ಳಿಗಳಿಗೆ ದೌಡಾಯಿಸಿದ್ರು. ಆದ್ರೀಗ ಬೆಂಗಳೂರಿನಿಂದ ಹೋದವರೇ ತಮ್ಮ ಹಳ್ಳಿಗಳಿಗೇ ಕೊರೋನಾ ಕಂಟಕವಾಗೋ ಆತಂಕ ಮನೆ ಮಾಡಿದೆ.
ಚಿಂತಾಮಣಿಯ ಕುರಟಳ್ಳಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಉಸಿರಾಟದ ಸಮಸ್ಯೆ ಉಂಟಾಗಿ ನಡುಬೀದಿಯಲ್ಲಿ ಕುಸಿದುಬಿದ್ದ ಮಹಿಳೆಯ ನೆರವಿಗೆ ಸೋಂಕು ಭೀತಿಯ ಕಾರಣ ಗ್ರಾಮಸ್ಥರು ಯಾರು ಬರದ ಕಾರಣ ನರಳಿ ನರಳಿ ಸಾವನ್ನಪ್ಪಿದ್ದಾರೆ. ಕೊನೆಗೆ ಜೆಸಿಬಿ ಮೂಲಕ ಆ ಮಹಿಳೆಯ ಶವವನ್ನು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಅದೇ ಜೆಸಿಬಿಯಲ್ಲಿ ಗ್ರಾಮಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನಡೆಸಿದ್ದಾರೆ. ಮಗಳೀಗ ಅನಾಥಳಾಗಿದ್ದಾಳೆ.
ಬೀದರ್ ಜಿಲ್ಲೆಯ ಗಡವಂತಿ ಗ್ರಾಮದಲ್ಲಿ ಒಂದೇ ದಿನ 18 ಜನರಲ್ಲಿ ಸೋಂಕು ಕಂಡುಬಂದಿದೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಚೋರನೂರಿನಲ್ಲಿ 52ಕ್ಕೂ ಅಧಿಕ ಪಾಸಿಟಿವ್ ಕೇಸ್ ಕಂಡುಬಂದಿವೆ. ತಮಿಳುನಾಡಿಂದ ಚೋರನೂರಿಗೆ ಬೇಕರಿಯಲ್ಲಿ ಕೆಲಸ ಮಾಡಲು ಬಂದಿದ್ದ ಕಾರ್ಮಿಕನಿಂದ ಸೋಂಕು ಹಬ್ಬಿದೆ ಎಂದು ಹೇಳಲಾಗಿದೆ.
ಬೆಂಗಳೂರಿಂದ ಹಳ್ಳಿಗಳಿಗೆ ವಾಪಸ್ ಆದವರೆಷ್ಟು, ಎಷ್ಟು ಜನಕ್ಕೆ ಸೋಂಕು ತಗುಲಿದೆ ಎಂಬ ಬಗ್ಗೆ ಆರೋಗ್ಯ ಇಲಾಖೆಯ ಸರ್ವೇ ನಡೆಸಿದ್ದು, ಅದರ ಅಂಕಿ ಅಂಶ ಇಂತಿದೆ.
ಗ್ರಾಮೀಣ ಭಾಗಕ್ಕೆ ಕೊರೋನಾ `ವಲಸೆ’.
* ಬೆಂಗಳೂರಿನಿಂದ ಊರಿಗೆ ಹೋದವ ಸಂಖ್ಯೆ – 1,13,928
* ಇದುವರೆಗೆ ಪತ್ತೆಯಾದ ಸೋಂಕಿತರ ಸಂಖ್ಯೆ – 25,222
* ಕೊರೋನಾ ಸೋಂಕು ಸ್ಫೋಟ ಇನ್ನಷ್ಟು ಹೆಚ್ಚುವ ಸಾಧ್ಯತೆ