ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ ಎಂದು ನಟ ವಿಜಯ ರಾಘವೇಂದ್ರ ಹೇಳಿದರು.
ರೋಟರಿ ಸಂಸ್ಥೆಯಿಂದ ಪುನೀತ್ ರಾಜಕುಮಾರ್ ಸ್ಮರಣಾರ್ಥವಾಗಿ ರಕ್ತದಾನ ಶಿಬಿರವನ್ನು ಚಾಮರಾಜನಗರದ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು. ಈ ಶಿಬಿರದ ಉದ್ಘಾಟನೆಯನ್ನು ವಿಜಯ ರಾಘವೇಂದ್ರ ಮಾಡಿದ್ದು, ತಾವೂ ಸಹ ರಕ್ತದಾನ ಮಾಡಲು ಮುಂದಾದರು.
ಈ ವೇಳೆ ಗಾಜನೂರಿನಲ್ಲಿ ಅಪ್ಪು ಅವರೊಡನೆ ಬಾಲ್ಯ ಕಳೆದ ನೆನಪನ್ನು ವಿಜಯ್ ಬಿಚ್ಚಿಟ್ಟರು. ಬೇರೆ ಯಾವುದರ ಬಗ್ಗೆಯು ತಲೆ ಕೆಡಿಸಿಕೊಳ್ಳೋದು ಬೇಡ, ಒಳ್ಳೆಯ ಕೆಲಸ ಮಾಡೋಣ ಎಂಬ ಪುನೀತ್ ಮಾತುಗಳನ್ನು ನೆನೆಪಿಸಿಕೊಂಡು ಭಾವುಕರಾದರು. ಇದನ್ನೂ ಓದಿ: ಪ್ರಾಣ ಕಳೆದುಕೊಂಡ ರೈತರಿಗಾಗಿ ‘ಅಸ್ತಿ ಕಲಶ ರ್ಯಾಲಿ’ ಆಯೋಜನೆ: ನವಾಬ್ ಮಲಿಕ್
ಸದಾ ಒಳ್ಳೆಯ ಕೆಲಸಗಳ ಬಗ್ಗೆಯೇ ಚಿಂತಿಸುತ್ತಿದ್ದರು. ಅವರ ಒಳ್ಳೆಯ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ರಕ್ತದಾನ ಶಿಬಿರ ಉದ್ಘಾಟನೆ ಹಾಗು ರಕ್ತದಾನ ಮಾಡುವುದು ಸಾರ್ಥಕತೆ ಕೊಡುತ್ತೆ. ಪುನೀತ್ ರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ ಎಂದು ತಿಳಿಸಿದರು.