-ರಾಯಚೂರು ಮತ್ತು ತೆಲಂಗಾಣ ನಡುವಿನ ಸಂಪರ್ಕ ವೃದ್ಧಿಗೆ ಒತ್ತು
ರಾಯಚೂರು/ಯಾದಗಿರಿ: ಅಂತರರಾಜ್ಯ ಜಲ ಭದ್ರತೆಗೆ ಹಾಗೂ ಎರಡು ರಾಜ್ಯಗಳ ರೈತರ ಅಭಿವೃದ್ಧಿಗೆ, ವಿಶೇಷವಾಗಿ ಗಡಿಭಾಗದ ಜಿಲ್ಲೆಗಳ ಪ್ರಗತಿಗೆ ತೆಲಂಗಾಣ ಸರ್ಕಾರವು (Telangana Govt) ಕರ್ನಾಟಕಕ್ಕೆ ಅಗತ್ಯ ಸಹಕಾರ ನೀಡಲಿದೆ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ (CM Revanth Reddy) ಅವರು ಭರವಸೆ ನೀಡಿದ್ದಾರೆ ಎಂದು ಮಾಜಿ ಸಚಿವ ಎನ್.ಎಸ್. ಬೋಸರಾಜು (NS Bosaraju) ತಿಳಿಸಿದ್ದಾರೆ.
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರೊಂದಿಗೆ ಗುಡೆಂದೊಡ್ಡಿ ಜಲಾಶಯದ ಹಂತ-1ರ ಪಂಪ್ ಹೌಸ್, ಮಖ್ತಲ್-ನಾರಾಯಣಪೇಟ್-ಕೊಡಂಗಲ್ ಏತ ನೀರಾವರಿ ಯೋಜನೆ ಹಾಗೂ ಪ್ರಸ್ತಾವಿತ ಭೀಮಾ-ಕೃಷ್ಣಾ ಬ್ಯಾರೇಜ್ ಸ್ಥಳಗಳಿಗೆ ಭೇಟಿ ನೀಡಿ, ಪ್ರಮುಖ ನೀರಾವರಿ ಯೋಜನೆಗಳ ಪರಿಶೀಲನೆ ನಡೆಸಿದರು. ಇದನ್ನೂ ಓದಿ: AI ತನ್ನಷ್ಟಕ್ಕೆ ತಾನೇ ಹೊಸ ಎಐ ವ್ಯವಸ್ಥೆಗಳನ್ನು ನಿರ್ಮಿಸುವ ಮಟ್ಟಕ್ಕೆ ಬೆಳೆಯಬಹುದು: ಆ್ಯಂಥ್ರೋಪಿಕ್ ಎಚ್ಚರಿಕೆ
Today, I had the opportunity to accompany Hon’ble Chief Minister of Telangana Shri @revanth_anumula Ji during the review of the Gudendoddi Reservoir Stage-I Pump House, the Makthal–Narayanpet–Kodangal Lift Irrigation Scheme (MNKLIS), and the proposed Bhima–Krishna barrage… pic.twitter.com/ZuQfYaflCW
— N.S Boseraju (@NsBoseraju) June 5, 2026
ರಾಯಚೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗೆ ಅನುಕೂಲ:
ನಾರಾಯಣಪುರ ಜಲಾಶಯದ (ಬಸವಸಾಗರ) ಕೆಳಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಬ್ಯಾರೇಜ್ ಮೂಲಕ, ಸ್ಪಿಲ್ವೇಯಿಂದ ಬಿಡುಗಡೆಯಾಗುವ ನೀರನ್ನು ಸಮೀಪದ ಹಳ್ಳಿಗಳ ಕುಡಿಯುವ ನೀರಿನ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಪ್ರಸ್ತಾವಿತ ಬ್ಯಾರೇಜ್ ಕುಡಿಯುವ ನೀರು ಪೂರೈಕೆಯ ಪ್ರಮುಖ ಉದ್ದೇಶವನ್ನು ಹೊಂದಿದ್ದು, ಕರ್ನಾಟಕ ಮತ್ತು ತೆಲಂಗಾಣ ಎರಡೂ ರಾಜ್ಯಗಳಿಗೆ ಅಪಾರ ಪ್ರಯೋಜನವನ್ನು ತರಲಿದೆ. ಇದರಿಂದ ಮುಖ್ಯವಾಗಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಜನತೆಗೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಭಾರಿ ಅನುಕೂಲವಾಗಲಿದ್ದು, ಈ ಜಾಗದ ಸಮೀಪವಿರುವ ಹಲವಾರು ಹಾಲಿ ಏತ ನೀರಾವರಿ ಯೋಜನೆಗಳಿಗೂ ಈ ನಿರ್ಮಾಣದಿಂದ ಲಾಭವಾಗಲಿದೆ. ಇದರ ಜೊತೆಗೆ, ಈ ಬ್ಯಾರೇಜ್ ನಿರ್ಮಾಣದಿಂದಾಗಿ ರಾಯಚೂರು ಮತ್ತು ತೆಲಂಗಾಣದ ನಡುವಿನ ಸಂಪರ್ಕ ಕೂಡ ಗಣನೀಯವಾಗಿ ಸುಧಾರಿಸಲಿದ್ದು, ಈ ಭಾಗದ ಆರ್ಥಿಕತೆಗೆ ದೊಡ್ಡ ಬಲ ಸಿಗಲಿದೆ ಎಂದು ತಿಳಿಸಿದ್ದಾರೆ.

ಭೀಮಾ ಮತ್ತು ಕೃಷ್ಣಾ ನದಿಗಳಲ್ಲಿ ಅಳವಡಿಸಲಾಗಿರುವ ನೀರಾವರಿ ಯೋಜನೆಗಳು ರಾಜ್ಯಗಳ ಅಭಿವೃದ್ಧಿಗೆ ತಮ್ಮದೇ ಆದ ವಿಶೇಷ ಕೊಡುಗೆ ನೀಡುತ್ತಿವೆ. ಇವು ಕೇವಲ ಮೂಲಸೌಕರ್ಯ ಯೋಜನೆಗಳಲ್ಲ. ಮುಂಗಾರು ಹರಿವನ್ನು ಸಂರಕ್ಷಿಸಲು, ನೀರು ಸಂಗ್ರಹಣೆಯನ್ನು ಬಲಪಡಿಸಲು, ನೀರಾವರಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು, ಅಂತರ್ಜಲ ಮರುಪೂರಣ ಮತ್ತು ಇಡೀ ಪ್ರದೇಶದಲ್ಲಿ ಹವಾಮಾನ ವೈಪರೀತ್ಯವನ್ನು ಎದುರಿಸುವ ನಿಟ್ಟಿನಲ್ಲಿ ಇದೊಂದು ಅತ್ಯುತ್ತಮ ಹೆಜ್ಜೆಯಾಗಿದೆ ಎಂದು ವಿವರಿಸಿದ್ದಾರೆ.ಇದನ್ನೂ ಓದಿ: ಇದು ಸರ್ಕಾರಕ್ಕೆ ಎಚ್ಚರಿಕೆಯ ಕರೆಗಂಟೆ: ರಾಮಲಿಂಗಾರೆಡ್ಡಿ ರಾಜೀನಾಮೆ ಬಗ್ಗೆ ಹೆಚ್.ಕೆ.ಪಾಟೀಲ್ ರಿಯಾಕ್ಷನ್
Today, I had the opportunity to accompany Hon’ble Chief Minister of Telangana Shri @revanth_anumula Ji during the review of the Gudendoddi Reservoir Stage-I Pump House, the Makthal–Narayanpet–Kodangal Lift Irrigation Scheme (MNKLIS), and the proposed Bhima–Krishna barrage… pic.twitter.com/ZuQfYaflCW
— N.S Boseraju (@NsBoseraju) June 5, 2026
ಭೀಮಾ ಮತ್ತು ಕೃಷ್ಣಾ ನದಿಗಳು ತೆಲಂಗಾಣ ಮತ್ತು ಕರ್ನಾಟಕ ಎರಡೂ ರಾಜ್ಯಗಳ ಭವಿಷ್ಯವನ್ನು ಬೆಸೆಯುವ ಜೀವನಾಡಿಗಳಾಗಿವೆ. ಈ ಪ್ರಸ್ತಾವಿತ ಬ್ಯಾರೇಜ್ ಕೆಳಭಾಗದ ಪ್ರದೇಶಗಳಿಗೆ ನಿರಂತರವಾಗಿ ನೀರು ಬಿಡುಗಡೆ ಮಾಡಲು ಅನುಕೂಲ ಮಾಡಿಕೊಡಲಿದ್ದು, ಈ ಮೂಲಕ ಕೃಷ್ಣಾ ನದಿ ನೀರಿನ ಸಮರ್ಪಕ ಬಳಕೆಯನ್ನು ಖಚಿತಪಡಿಸುತ್ತದೆ. ಈ ಜಲಮೂಲಗಳ ಸುಸ್ಥಿರ ನಿರ್ವಹಣೆಯು ಕೇವಲ ಪ್ರತ್ಯೇಕ ರಾಜ್ಯಗಳ ಅಭಿವೃದ್ಧಿಯ ಅನಿವಾರ್ಯತೆಯಷ್ಟೇ ಅಲ್ಲ, ಲಕ್ಷಾಂತರ ರೈತರು ಹಾಗೂ ಗ್ರಾಮೀಣ ಸಮುದಾಯಗಳ ಬದುಕನ್ನು ಕಾಪಾಡುವ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದಿದ್ದಾರೆ.

ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಹವಾಮಾನ ವೈಪರೀತ್ಯವು ಸಾಂಪ್ರದಾಯಿಕ ಜಲ ವ್ಯವಸ್ಥೆಗಳಿಗೆ ಸವಾಲಾಗಿ ಪರಿಣಮಿಸುತ್ತಿರುವ ಈ ಸಂದರ್ಭದಲ್ಲಿ, ಲಭ್ಯವಿರುವ ಪ್ರತಿಯೊಂದು ಹನಿ ನೀರನ್ನು ನಾವು ಎಷ್ಟು ಪರಿಣಾಮಕಾರಿಯಾಗಿ ಸಂಗ್ರಹಿಸುತ್ತೇವೆ ಮತ್ತು ನಿರ್ವಹಿಸುತ್ತೇವೆ ಎಂಬುದರ ಮೇಲೆ ನಮ್ಮ ಕೃಷಿ ಆರ್ಥಿಕತೆಯ ಭವಿಷ್ಯ ನಿಂತಿದೆ. ಈ ನಿಟ್ಟಿನಲ್ಲಿ ವೈಜ್ಞಾನಿಕ ಯೋಜನೆ, ಅಂತರರಾಜ್ಯ ಸಹಕಾರ ಮತ್ತು ಸುಸ್ಥಿರ ಮೂಲಸೌಕರ್ಯಗಳ ಮೇಲಿನ ಹೂಡಿಕೆ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.
ರೈತರ ಕಲ್ಯಾಣ ಮತ್ತು ಜಲ ಭದ್ರತೆಗೆ ಒತ್ತು ನೀಡುತ್ತಿರುವ ರೇವಂತ್ ರೆಡ್ಡಿ ಅವರು ಹಾಗೂ ಅಲ್ಲಿನ ಸರ್ಕಾರದ ಬದ್ಧತೆಯನ್ನು ಬೋಸರಾಜು ಅವರು ಮುಕ್ತಕಂಠದಿಂದ ಶ್ಲಾಘಿಸಿ, ನದಿಗಳನ್ನು ಹಂಚಿಕೊಂಡಿರುವ ನೆರೆಹೊರೆಯ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣ, ಪರಸ್ಪರ ಸಹಕಾರ ಮತ್ತು ನಾವೀನ್ಯತೆಯ ಮೂಲಕ ಸುಸ್ಥಿರ ಅಭಿವೃದ್ಧಿ ಸಾಧಿಸಬೇಕಿದೆ ಎಂದು ಆಶಿಸಿದ್ದಾರೆ.ಇದನ್ನೂ ಓದಿ: ಇನ್ಮುಂದೆ ಎಲ್ಲಾ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ 10 ಗಂಟೆಯೊಳಗೆ ಹಾಜರಾಗಬೇಕು: ಸಿಎಸ್ ಆದೇಶ
