ಕೊಪ್ಪಳ: ಕಳೆದ ಚುನಾವಣೆಯಲ್ಲಿ ನಾವು 80 ಸ್ಥಾನ ಗೆದ್ದಿದ್ದರೂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರನ್ನ ಸಿಎಂ ಮಾಡಿದ್ದೆವು. ಕೋಮುವಾದಿ ಬಿಜೆಪಿಯನ್ನು (BJP) ದೂರ ಇಡಲು ಸಿಎಂ ಮಾಡಿದ್ದೆವು ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.
ಕೊಪ್ಪಳ (Koppal) ಜಿಲ್ಲೆ ಯಲಬುರ್ಗಾ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ (Congress) ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಎನ್ನೋದು ಸೇವೆ. ಅಧಿಕಾರ ಬಂದ ಮೇಲೆ ಇನ್ನೊಬ್ಬರ ಮೇಲೆ ಸೇಡು ತೀರಿಸಿಕೊಳ್ಳುವುದಲ್ಲ. ಬಿಜೆಪಿಗರು (BJP) ಜನರ ಸೇವೆ ಬಿಟ್ಟಿದ್ದಾರೆ. ಬರೀ ಲೂಟಿ ಹೊಡೆಯೋದೆ ಮಾಡುತ್ತಿದ್ದಾರೆ. ರಾಯರೆಡ್ಡಿ ಈ ಕ್ಷೇತ್ರದಲ್ಲಿ ಸೋತಿದ್ರು ಎನ್ನುವುದು ನಂಗೆ ಉಹಿಸೋಕೊಳ್ಳೊಕೆ ಸಾಧ್ಯವಾಗ್ತಿಲ್ಲ. ಈ ಬಾರೀ ನೂರಕ್ಕೆ ನೂರು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದರು. ಇದನ್ನೂ ಓದಿ: ಪೊಲೀಸ್ ಸರ್ಪಗಾವಲು – ಆಳಂದ ದರ್ಗಾದಲ್ಲಿ ನಡೆಯಿತು ಉರುಸ್, ಶಿವಲಿಂಗ ಪೂಜೆ
ಈ ವೇಳೆ ಕಾರ್ಯಕರ್ತರು, ಮುಂದಿನ ಸಿಎಂ ನೀವೇ ಎಂದು ಜೈಕಾರ ಕೂಗಿದರು. ಮಾತು ಮುಂದುವರಿಸಿದ ಸಿದ್ದರಾಮಯ್ಯ, ಅಶ್ವಥ್ ನಾರಾಯಣ್ (Ashwath Narayan) ಅಲ್ಲ ಅವನು. ನಿಜವಾಗಲು ಅಸ್ವಸ್ಥನೆ ಇರಬಹುದು. ಜೊತೆಗೆ ಅವನಿಗೆ ಮಾನಸಿಕ ಸಮಸ್ಯೆ ಇರಬೇಕು. ನಬಬ್ಬಯ ಮುಗಿಸಬೇಕು ಅಂತ ಹೇಳಿದ್ದಾನೆ. ಅವರನ್ನ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರೋಕೆ ಬಿಡಬಾರದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೃತ ಬೇಟೆಗಾರನ ಬಳಿ ಜಿಂಕೆ, ಗನ್ ಸಿಕ್ಕಿದೆ, ಪರಮಾತ್ಮನಿಂದಲೇ ಶಿಕ್ಷೆಯಾಗಿದೆ: ಸೋಮಣ್ಣ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k