ದಾವಣಗೆರೆ: ತಡರಾತ್ರಿ ಕೆಟ್ಟು ನಿಂತಿದ್ದ ಅಂಬುಲೆನ್ಸ್ ಟಯರ್ ಬದಲಿಸಿ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾನವೀಯತೆ ಮೆರೆದಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ನಗರದ ನ್ಯಾಮತಿ ರಸ್ತೆಯಲ್ಲಿ ಅಂಬುಲೆನ್ಸ್ ಕೆಟ್ಟು ನಿಂತಿತ್ತು. ಅದೇ ಮಾರ್ಗದಲ್ಲಿ ರೇಣುಕಾಚಾರ್ಯ ಬರುತ್ತಿದ್ದರು. ಅಂಬುಲೆನ್ಸ್ ನಿಂತಿರುವುದನ್ನು ಕಂಡ ಕೊಡಲೇ ತಮ್ಮ ವಾಹನವನ್ನು ನಿಲ್ಲಿಸಿ ವಿಚಾರಿಸಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್ ಪಂಚರ್ ಆಗಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಎಗ್ಲೆಸ್ ‘ಚಾಕೊಲೇಟ್ ಬ್ರೌನಿ’ ಮಾಡುವ ವಿಧಾನ
ಈ ಹಿನ್ನೆಲೆ ರೇಣುಕಾಚಾರ್ಯ ತಕ್ಷಣ ಜಾಕ್ ನೀಡಿ, ಅವರೇ ಸ್ಥಳದಲ್ಲಿ ನಿಂತು ಅಂಬುಲೆನ್ಸ್ ರಿಪೇರಿಗೆ ನೆರವಾಗಿದ್ದಾರೆ. ಬಳಿಕ ಅಂಬುಲೆನ್ಸ್ನಲ್ಲಿದ್ದ ರೋಗಿಯ ಆರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.