ಬಾಲಿವುಡ್ನ ಸದ್ಯದ ಹಾಟ್ ಟಾಪಿಕ್ ಅಂದ್ರೆ ರಣ್ವೀರ್ ಸಿಂಗ್ ನಗ್ನ ಫೋಟೋಶೂಟ್ ವಿಚಾರ. ಅಶ್ಲೀಲ ಫೋಟೋಗಳೊಂದಿಗೆ ಮಹಿಳೆಯರ ಭಾವನೆಗೆ ಧಕ್ಕೆ ಮಾಡಿದ್ದಕ್ಕಾಗಿ ರಣ್ವೀರ್ ಮೇಲೆ ಕೇಸ್ ಕೂಡ ದಾಖಲಾಗಿದೆ. ಇದೀಗ ರಣ್ವೀರ್ ಸಿಂಗ್ ಪರವಾಗಿ ನಟಿ ವಿದ್ಯಾ ಬಾಲನ್ ಮಾತನಾಡಿದ್ದಾರೆ.
View this post on Instagram
ಬಾಲಿವುಡ್ನ ಸಾಕಷ್ಟು ಸಿನಿಮಾಗಳ ಮೂಲಕ ಹೈಪ್ ಕ್ರಿಯೆಟ್ ಮಾಡಿದ್ದ ರಣ್ವೀರ್ ಸಿಂಗ್ ಇದೀಗ ತನ್ನ ನಗ್ನ ಫೋಟೋಶೂಟ್ ಮೂಲಕ ಬಿಟೌನ್ನಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಈ ಫೋಟೋಶೂಟ್ ಬಳಿಕ ಸಾಕಷ್ಟು ಮಹಿಳೆಯರ ಕೆಂಗಣ್ಣಿಗೆ ಗುರಿಯಾಗುವುದರ ಜತೆಗೆ ಸಖತ್ ಟ್ರೋಲ್ ಕೂಡ ಆಗಿದ್ದಾರೆ. ಟ್ರೋಲ್ ಮತ್ತು ರಣ್ವೀರ್ ಮೇಲಿನ ಕೇಸ್ ಗಮನಿಸಿರುವ ವಿದ್ಯಾ ಬಾಲನ್, ರಣ್ವೀರ್ ಪರ ಖಡಕ್ ವಾರ್ನಿಂಗ್ ಕೂಡ ಮಾಡಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಶ್ವೇತಾ ಶ್ರೀವಾಸ್ತವ್
ರಣ್ವೀರ್ ಸಿಂಗ್ಗೆ ಜಾನ್ ಅಬ್ರಾಹಂ, ಪರಿಣಿತಿ ಚೋಪ್ರಾ, ಸಾಥ್ ನೀಡಿದ ಬಳಿಕ ಇದೀಗ ವಿದ್ಯಾ ಬಾಲನ್ ಮಾತನಾಡಿದ್ದಾರೆ. ಯಾರೊಬ್ಬರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದು ತಪ್ಪು, ನಿಮಗೆ ರಣ್ವೀರ್ ಫೋಟೋಶೂಟ್ ಇಷ್ಟವಾಗದಿದ್ದರೆ ಕಣ್ಣು ಮುಚ್ಚಿ ಎಂದು ನಟಿ ಮಾತನಾಡಿದ್ದಾರೆ. ಈ ಮೂಲಕ ನಟನಿಗೆ ವಿದ್ಯಾ ಬಾಲನ್ ಸಾಥ್ ನೀಡಿದ್ದಾರೆ.