ಕಳೆದ ವಾರದಿಂದ ತಮಿಳಿನ ಹೆಸರಾಂತ ನಟ ರಜನಿಕಾಂತ್ (Rajinikanth) ಮೇಲೆ ತೆಲುಗು ಚಿತ್ರರಂಗದ ಹಲವು ನಟ ನಟಿಯರು ಮುಗಿ ಬಿದ್ದಿದ್ದಾರೆ. ಮೊನ್ನೆಯಷ್ಟೇ ಖ್ಯಾತ ನಟಿ ರೋಜಾ (Roja) ರಜನಿಕಾಂತ್ ವಿರುದ್ಧ ಗುಡುಗಿದ್ದರು. ಇದೀಗ ಹಿರಿಯ ನಟ ಪೋಸಾನಿ ಕೃಷ್ಣ ಮುರುಳಿ (Posani Krishna Murali) ಕೂಡ ರಜನಿ ವಿರುದ್ಧ ಮಾತನಾಡಿದ್ದಾರೆ. ನಮಗೆ ಸೂಪರ್ ಸ್ಟಾರ್ ಅಂದರೆ ರಜನಿಕಾಂತ್ ಅಲ್ಲ, ಚಿರಂಜೀವಿ ನಮಗೆ ಸೂಪರ್ ಸ್ಟಾರ್ ಎಂದಿದ್ದಾರೆ.
ರಜನಿ ವಿರುದ್ಧ ನಟ ನಟಿಯರು ತಿರುಗಿ ಬಿದ್ದಿರುವುದಕ್ಕೆ ಕಾರಣ ಚಂದ್ರಬಾಬು ನಾಯ್ಡು (Chandrababu Naidu) ಅವರನ್ನು ರಜನಿ ಬಾಯ್ತುಂಬಾ ಹೊಗಳಿದ್ದರು. ಮಾಜಿ ಸಿಎಂ ಎನ್.ಟಿ.ಆರ್ ಅವರ ನೂರನೇ ಜನ್ಮದಿನದ ಪ್ರಯುಕ್ತ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ರಜನಿಕಾಂತ್ ಹೊಗಳಿದ್ದರು. ನಾಯ್ಡು ಪರವಾಗಿ ಮಾತನಾಡಿದ್ದರು. ಅದು ರಾಜಕೀಯ ಅಂಗಳದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇದನ್ನೂ ಓದಿ:ಬ್ಲೌಸ್ ಇಲ್ಲದೇ ಸೀರೆಯುಟ್ಟು ಮಿಂಚಿದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಾಯಕಿ
ಚಂದ್ರುಬಾಬು ನಾಯ್ಡು ಅವರನ್ನು ಹೊಗಳಿದ ಕಾರಣದಿಂದಾಗಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ರಜನಿಕಾಂತ್ ಮಾತಿಗೆ ನಾವು ಗೌರವ ಕೊಡುವುದಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ರಜನಿಕಾಂತ್ ಆಂಧ್ರಕ್ಕೆ ಬಂದು ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಪೋಸಾನಿ ಕೃಷ್ಣ ಮುರಳಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸದಸ್ಯರೂ ಆಗಿರುವುದರಿಂದ ಈ ಮಾತು ಸಹಜವಾಗಿದೆ.
ರಜನಿಕಾಂತ್ ಬಗ್ಗೆ ಎರಡ್ಮೂರು ದಿನಗಳ ಹಿಂದೆಯಷ್ಟೇ ರೋಜಾ ಕೂಡ ಹರಿಹಾಯ್ದಿದ್ದರು. ರಜನಿಕಾಂತ್ ನೇರವಾಗಿ ರಾಜಕಾರಣಕ್ಕೆ ಬರಲಿ ಎಂದಿದ್ದರು. ಚಂದ್ರಬಾಬು ನಾಯ್ಡು ಎಂತಹ ರಾಜಕಾರಣಿ ಎಂದು ಅರಿತುಕೊಂಡು ಮಾತನಾಡಲಿ ಎಂದು ಸಲಹೆ ನೀಡಿದ್ದರು.