ಲಾಹೋರ್: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಂದಿನ ಶ್ರೀಲಂಕಾ ವಿರುದ್ಧದ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ನಡೆಸಲು ನಿರಾಕರಿಸಿದ್ದು, ಆ ಮೂಲಕ ಟೂರ್ನಿ ಆಡಿದರೆ ಪಾಕ್ನಲ್ಲಿ ಆಡಿ ಇಲ್ಲ ಬೇಡ ಎಂಬ ಸಂದೇಶವನ್ನು ನೀಡಿದೆ.
ಪಾಕಿಸ್ತಾನದಲ್ಲಿ ನಡೆಲಿರುವ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು ಶ್ರೀಲಂಕಾ ಕೆಲ ಆಟಗಾರರು ನಿರಾಕರಿಸಿದ್ದರು. ಅಲ್ಲದೇ ಕ್ರಿಕೆಟ್ ಬೋರ್ಡ್ ಗೆ ಶ್ರೀಲಂಕಾ ಸರ್ಕಾರ ಕೂಡ ಟೂರ್ನಿಯ ಸಂದರ್ಭದಲ್ಲಿ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ನೀಡಿತ್ತು. ಪರಿಣಾಮ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ನಡೆಸುವ ಸಲಹೆಯನ್ನು ಪಾಕ್ಗೆ ನೀಡಿತ್ತು. ಇದನ್ನು ಓದಿ: ಪಾಕ್ ಸಚಿವರ ಹೇಳಿಕೆಗೆ ಶ್ರೀಲಂಕಾ ಟಾಂಗ್
Sri Lanka T20I Squad for Pakistan tour. #PAKvSL pic.twitter.com/IhjXVvafMr
— Sri Lanka Cricket ???????? (@OfficialSLC) September 11, 2019
ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸಲಹೆಯನ್ನು ತಿರಸ್ಕರಿಸಿರುವ ಪಿಸಿಬಿ, ತಟಸ್ಥ ಸ್ಥಳದಲ್ಲಿ ಟೂರ್ನಿ ಆಯೋಜಿಸುವ ಸಲಹೆಯನ್ನು ತಳ್ಳಿ ಹಾಕಿದೆ. ಒಂದೊಮ್ಮೆ ಈ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಿದರೆ ಮುಂದಿನ ದಿನಗಳಲ್ಲೂ ಇದೇ ರೀತಿಯ ಒತ್ತಡವನ್ನು ವಿದೇಶಿ ತಂಡಗಳಿಂದ ಎದುರಿಸಬಹುದು ಎಂಬ ಚಿಂತೆ ಪಿಸಿಬಿಗೆ ತಲೆ ನೋವು ತಂದಿದೆ. ಅಲ್ಲದೇ ಶ್ರೀಲಂಕಾ ಕ್ರಿಕೆಟ್ ಟೂರ್ನಿಯ ಬೆನ್ನಲ್ಲೇ ಪಾಕ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಇಲ್ಲಿಯೂ ವಿದೇಶಿ ಆಟಗಾರರು ಭಾಗವಹಿಸಿಸುವುದು ಕಷ್ಟಸಾಧ್ಯ ಎನ್ನಲಾಗಿದೆ. ಇದನ್ನು ಓದಿ: ಭಾರತದ ಒತ್ತಡಕ್ಕೆ ಮಣಿದು ಲಂಕಾ ಕ್ರಿಕೆಟ್ ಆಟಗಾರರು ಬರುತ್ತಿಲ್ಲ – ಪಾಕ್ ಸಚಿವ
ಶ್ರೀಲಂಕಾ ತಂಡದ ಪ್ರಮುಖ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಲು ನಿರಾಕರಿಸಿದ ಪರಿಣಾಮ ಬೋರ್ಡ್ ಸ್ಟಾರ್ ಆಟಗಾರರು ಇಲ್ಲದ ಹೊಸ ಆಟಗಾರರ ತಂಡವನ್ನು ಪ್ರಕಟಿಸಿತ್ತು. ಪಾಕ್ ನ ಕರಾಚಿ ಹಾಗೂ ಲಾಹೋರಿನಲ್ಲಿ ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳ ವೇಳಾಪಟ್ಟಿ ನಿಗದಿಯಾಗಿದೆ. ಸೆ.27 ರಿಂದ ಆ.9ರ ವರೆಗೂ ಟೂರ್ನಿ ನಡೆಯಲಿದೆ.
Sri Lanka ODI Squad for Pakistan tour. #PAKvSL pic.twitter.com/eZjOux69Di
— Sri Lanka Cricket ???????? (@OfficialSLC) September 11, 2019
ಶ್ರೀಲಂಕಾ ಆಟಗಾರರು ಪಾಕ್ ಟೂರ್ನಿಯಲ್ಲಿ ಆಡಲು ನಿರಾಕರಿಸುತ್ತಿದಂತೆ ಪಾಕ್ ಸಚಿವ ಫವಾದ್ ಹುಸೇನ್ ಚೌಧರಿ ಭಾರತ ಕ್ರೀಡಾ ಸಚಿವಾಲಯದ ವಿರುದ್ಧ ಕಿಡಿಕಾರಿ, ತಮ್ಮ ರಾಜಕೀಯ ಕುತಂತ್ರ ಬುದ್ಧಿಯನ್ನು ತೋರಿಸಿದ್ದರು. ಆದರೆ ಪಾಕ್ ಸಚಿವರ ಹೇಳಿಕೆಗೆ ತಿರುಗೇಟು ನೀಡಿದ್ದ ಶ್ರೀಲಂಕಾ ಆಟಗಾರರ ಈ ನಿರ್ಧಾರಕ್ಕೆ, ಪಾಕಿಸ್ತಾನವೇ ಕಾರಣ ಎಂದು ಟಾಂಗ್ ನೀಡಿದ್ದರು.