ಬಳ್ಳಾರಿ: ಇಲ್ಲಿನ ಹೊಸಪೇಟೆ ಈಶಾನ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸರ್ಕಾರ ಕೊಟ್ಟಿರೋ ಕಾರಣನ್ನ ತನ್ನ ಕುಟುಂಬದ ಕೆಲಸಕ್ಕೂ ಬಳಸುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ವಾಮಿ ಕಾರ್ಯದ ಜೊತೆಗೆ ಸ್ವಕಾರ್ಯ ಎನ್ನುವಂತೆ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮಹ್ಮದ್ ಪೈಜ್ ಅವರು ತಮ್ಮ ಕಚೇರಿ ಕೆಲಸಕ್ಕೆ ಮಾತ್ರವಲ್ಲದೆ ತಮ್ಮ ಕುಟುಂಬ ಸದಸ್ಯರ ಶಾಪಿಂಗ್ ಸೇರಿದಂತೆ ಇತರೆ ಕಾರ್ಯಗಳಿಗೆ ಬಳಕೆ ಮಾಡುತ್ತಿದ್ದಾರೆ. ಅಧಿಕಾರಿ ಕುಟುಂಬದ ಸದಸ್ಯರು ಎನ್ಇಕೆಎಸ್ಆರ್ಟಿಸಿ ಹಾಗೂ ಕರ್ನಾಟಕ ಸರಕಾರ ನಾಮಫಲಕ ಹೊಂದಿದ ಕಾರಿನಲ್ಲಿ ಭಾನುವಾರ ಇಡೀ ದಿನ ಶಾಪಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ.
ಅಲ್ಲದೇ ಶಾಪಿಂಗ್ ವೇಳೆಯೂ ಕಾರನ್ನು ಸ್ಟಾರ್ಟ್ನಲ್ಲೇ ಇಟ್ಟು ನಿರಂತರವಾಗಿ ಎಸಿ ಬಳಕೆ ಮಾಡಿದ್ದಾರೆ. ಇದನ್ನ ನೋಡಿದ ಸಾರ್ವಜನಿಕರು ಪೈಜ್ ವಿರುದ್ಧ ಕಿಡಿಕಾರಿದ್ದಾರೆ.