ಕಾರವಾರ: ನಕಲಿ ದಾಖಲೆ ನೀಡಿ ನೌಕಾನೆಲೆಗೆ ನುಗ್ಗಲು ಯತ್ನಿಸಿದ ಯುವಕನನ್ನು ನೌಕಾದಳದ ಪೊಲೀಸರು ಬಂಧಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರಗಾದ ಕದಂಬ ನೌಕಾನೆಲೆಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಗಾಜನೂರಿನ ಕಿರಣ್ ಎಸ್.ಆರ್.ನನ್ನು ನೌಕಾದಳ ಪೊಲೀಸರು ಬಂಧಿಸಿದ್ದಾರೆ. ನೌಕಾಪಡೆಯ ಪ್ರೊಬೆಷನರಿ ಸಬ್ ಲೆಫ್ಟಿನೆಂಟ್ ಆಫೀಸರ್ ಎಂದು ಪರಿಚಯಿಸಿಕೊಂಡಿದ್ದ ಈತ, ಮಾನವ ಸಂಪನ್ಮೂಲ ಮತ್ತು ಯೋಜನಾ ನಿರ್ದೇಶನಾಲಯದಿಂದ 2021ರ ಡಿ.14ರಂದು ತನ್ನ ನೇಮಕಾತಿಯಾಗಿದೆ ಎಂದು ಹೇಳಿಕೊಂಡಿದ್ದನು. ತನ್ನ ಗುರುತಿನ ಚೀಟಿ ಮತ್ತು ಅದಕ್ಕೊಂದು ಸಂಖ್ಯೆಯನ್ನೂ ಸಿದ್ಧಪಡಿಸಿಕೊಂಡಿದ್ದ ಈತ ನೌಕಾ ನೆಲೆಯ ಮುಖ್ಯ ಗೇಟ್ ಬಳಿ ತೆರಳುವಾಗ ತಪಾಸಣೆ ವೇಳೆ ನೀಡಿದ್ದನು. ಇದನ್ನೂ ಓದಿ: ಒಟ್ಟಿಗೆ ಫೈಟರ್ ಜೆಟ್ ಹಾರಿಸಿ ಇತಿಹಾಸ ಸೃಷ್ಟಿದ ತಂದೆ- ಮಗಳು
ಆತ ನೀಡಿದ ದಾಖಲೆಗಳು ಮತ್ತು ಗುರುತಿನ ಚೀಟಿಯನ್ನು ಪರಿಶೀಲಿಸಿದಾಗ ಎಲ್ಲವೂ ನಕಲಿ ಎಂಬುದು ದೃಢವಾಗಿದ್ದು, ಬಳಿಕ ನೌಕಾನೆಲೆಯ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ಕಾರವಾರ ಗ್ರಾಮೀಣ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಭಾರತದ ಸುಬ್ರಮಣಿಯನ್ ಈಗ ವಿಶ್ವಸಂಸ್ಥೆಯ ಸುಡಾನ್ ಮಿಷನ್ ಕಮಾಂಡರ್