ಕಾರವಾರ: ಮಳೆಯಿಂದಾಗಿ ಟನ್ ಗಟ್ಟಲೆ ಕಸದರಾಶಿ ಕಾರವಾರದ ಸಮುದ್ರಕ್ಕೆ ಸೇರಿ ಸಮುದ್ರದ ನೀರು ಕಪ್ಪಾಗಿದ್ದು, ಆತಂಕ ಮನೆ ಮಾಡಿದೆ.
ನಗರದ ಬಳಿಯಿರುವ ರವೀಂದ್ರನಾಥ ಟಾಗೋರ್ ಕಡಲತೀರ ನದಿ ಹಾಗೂ ನಗರದ ಕೊಚ್ಚೆ, ಮರದ ಕಸಕಡ್ಡಿಗಳಿಂದ ತುಂಬಿ ಸಮುದ್ರದ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಇದರಿಂದಾಗಿ ಸ್ಥಳೀಯ ಜನರು ಭಯಗೊಂಡು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.
ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ನಗರ ಹಾಗೂ ಕಾಳಿನದಿ ಸುತ್ತಮುತ್ತಲಿನ ಹಳ್ಳಿಗಳ ಗದ್ದೆಗಳಲ್ಲಿ ಸುಟ್ಟ ಮರಗಿಡಗಳು ತೇಲಿ ಸಮುದ್ರಕ್ಕೆ ಸೇರಿ ತೀರದ ನೂರು ಮೀಟರ್ ಪ್ರದೇಶದಲ್ಲಿ ನೀರು ಕಪ್ಪುಬಣ್ಣಕ್ಕೆ ತಿರುಗಿದೆ. ಇದರಿಂದ ಯಾವುದೇ ಅಪಾಯವಿಲ್ಲ, ಇನ್ನೆರೆಡು ದಿನ ಇದೇ ರೀತಿ ಸಮುದ್ರದ ನೀರು ಕಪ್ಪಾಗಿರುತ್ತದೆ ಎಂದು ಜೀವಶಾಸ್ತ್ರ ವಿಭಾಗದ ವಿಜ್ಞಾನಿ ಎಲ್.ಎನ್ ರಾಥೋಡ್ ರವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅರಬ್ಬೀ ಸಮುದ್ರದ ನೀರಿನ ಬಣ್ಣ ಬದಲು- ಸ್ಥಳೀಯರಲ್ಲಿ ಆತಂಕ
ಕಳೆದ ನಾಲ್ಕು ತಿಂಗಳಿಂದೆ ಓಖಿ ಚಂಡಮಾರುತದಿಂದಾಗಿ ಇಲ್ಲಿನ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಿತ್ತು. ಆದರೆ ಯಾವುದೇ ಜಲಚರಗಳಿಗೆ ಹಾನಿಯಾಗಿರಲಿಲ್ಲ. ಈಗ ಕೊಚ್ಚೆ ನೀರು ಹಾಗೂ ಸುಟ್ಟ ಮರದ ಕಾಂಡಗಳು ಸಮುದ್ರಕ್ಕೆ ಸೇರಿ ದಡದ ಭಾಗಕ್ಕೆ ಬರುತಿದ್ದು, ಯಾವುದೇ ಹಾನಿಯಾಗದಂತೆ ಜಿಲ್ಲಾಡಳಿತ ಎಚ್ಚರ ವಹಿಸಬೇಕಿದೆ.