ಭವಾನಿ ಕಡೇ ಆಟ.. ಕಡೇ ಓಟ – ಹೆಚ್.ಡಿ.ರೇವಣ್ಣ ಅವತ್ತು ಐಡಿಯಾ ಮಾಡಿದ್ಯಾಕೆ?

ಬೆಂಗಳೂರು: ಅಂದು ಹಾಸನ (Hassan) ಜಿಲ್ಲೆ ಟಿಕೆಟ್ ಘೋಷಣೆ ಬೇಡ ಅಂದಿದ್ದೇ ರೇವಣ್ಣ (H.D.Revanna). ಹಾಸನ ಸೇರಿ ಆ ಮೂರು ಕ್ಷೇತ್ರಗಳ ಗೊಂದಲಕ್ಕೆ ಪರಿಹಾರ ಬೇಕು ಅಂತಾ ಘೋಷಣೆ ತಡೆದಿದ್ರು ಎನ್ನಲಾಗಿದೆ. ಆದ್ರೆ ಗೊಂದಲ ಪರಿಹಾರಕ್ಕೂ ಮುನ್ನವೇ ಭವಾನಿ (Bhavani Revanna) ಸ್ವಯಂ ಘೋಷಣೆ ಮಾಡಿದ್ದೀಗ ಚರ್ಚೆಗೆ ಗ್ರಾಸವಾಗಿದೆ. ಭವಾನಿ ಕಡೇ ಆಟ.. ಕಡೇ ಓಟ.. ಹಾಸನ ಸ್ಪರ್ಧೆಯ ಗುಟ್ಟೇನು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ ಜೆಡಿಎಸ್ ಕಾರ್ಯಕರ್ತರು.
ಅಂದಹಾಗೆ ಪತಿ ಶಾಸಕ, ಸಚಿವರಾಗಿದ್ದೂ ಆಯ್ತು. ಮಕ್ಕಳು ರಾಜಕೀಯಕ್ಕೆ ಇಳಿದಿದ್ದೂ ಆಯ್ತು. ಒಬ್ಬ ಮಗ ಸಂಸದ ಆಗಿದ್ದೂ ಆಯ್ತು. ಒಬ್ಬ ಮಗ ಪರಿಷತ್ ಸದಸ್ಯ ಆಗಿದ್ದೂ ಆಯ್ತು. ನಾನೀಗ ಶಾಸಕಿ ಆಗ್ಲೇಬೇಕು ಅಂತಾ ಭವಾನಿ ರೇವಣ್ಣ ಪಟ್ಟು ಹಿಡಿದು ಕುಳಿತಿದ್ದಾರಂತೆ. ಇದನ್ನೂ ಓದಿ: ಜೆಡಿಎಸ್ಗೆ ಸೊಸೆ ಸಂಕಟ – ಮಾವನ ಕೈಯಲ್ಲಿ ಸೊಸೆ ಭವಿಷ್ಯ.!?
ಕಳೆದ ಒಂದು ವರ್ಷದಿಂದ ಹಾಸನದಲ್ಲಿ ವೇದಿಕೆ ತಯಾರು ಮಾಡಿಕೊಳ್ಳುತ್ತಿದ್ದಾರಂತೆ ಭವಾನಿ. ಆ ಕಾರಣಕ್ಕಾಗಿಯೇ ಹಾಸನ ಜಿಲ್ಲೆ ಟಿಕೆಟ್ ಘೋಷಣೆ ಬೇಡ ಎಂದಿದ್ದರಂತೆ ರೇವಣ್ಣ. ಹಾಸನ, ಅರಸೀಕೆರೆ, ಅರಕಲಗೂಡು ಕ್ಷೇತ್ರಗಳಲ್ಲಿ ಸಮಸ್ಯೆ ಇದೆ ಎಂದು ಗೌಡ್ರಿಗೆ ಮಾಹಿತಿ ಕೊಟ್ಟಿದ್ದರು ಎನ್ನಲಾಗಿದೆ. ಆಗ ಗೌಡರ ಸೂಚನೆಯ ಮೇರೆಗೆ ಹಾಸನ ಜಿಲ್ಲೆಯ ಕ್ಷೇತ್ರಗಳಿಗೆ ಹೆಚ್ಡಿಕೆ ಟಿಕೆಟ್ ಘೋಷಣೆ ಮಾಡಲಿಲ್ಲ.
ಆದರೀಗ ಟಿಕೆಟ್ ಘೋಷಣೆಗೂ ಮುನ್ನ ಹಾಸನದಿಂದಲೇ ಸ್ಪರ್ಧೆ ಎಂದು ಭವಾನಿ ಘೋಷಣೆ ಮಾಡಿದ್ದಾರೆ. ಪಕ್ಷದೊಳಗೆ ಬೇರೆ ಆಟ ಚಾಲೂ ಆಗದಿರಲಿ ಎಂದು ಭವಾನಿ ಮೊದಲೇ ಟವೆಲ್ ಹಾಕಿ ತಂತ್ರ ಹೂಡಿದ್ದಾರೆ. ಹಾಗಾಗಿ ಫೆಬ್ರವರಿ ಅಂತ್ಯದೊಳಗೆ ಟಿಕೆಟ್ ಘೋಷಣೆಗೆ ರೇವಣ್ಣ ಕುಟುಂಬದಿಂದ ಒತ್ತಡ ಹೆಚ್ಚಾಗಿದೆ. ಭವಾನಿ ರೇವಣ್ಣ ಅವರ ಲಾಸ್ಟ್ ಚಾನ್ಸ್ ಪಾಲಿಟಿಕ್ಸ್ ಸಕ್ಸಸ್ ಆಗುತ್ತಾ ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಬಿಜೆಪಿ ಪಾಳಯಕ್ಕೆ ಸಿದ್ದು ಟಾರ್ಗೆಟ್- ಚಕ್ರವ್ಯೂಹ ರೂಪಿಸುವಂತೆ ಹೈಕಮಾಂಡ್ನಿಂದಲೇ ಸಂದೇಶ?
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k