
ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (H.D Devegowda) ಮೊಮ್ಮಗನ ಕೈ ಹಿಡಿದಂತೆ ಸೊಸೆಗೂ ಮಣೆ ಹಾಕಬಹುದಾ? ಜೆಡಿಎಸ್ನಲ್ಲಿ (JDS) ಈಗ ಗೌಡರ ಅಂಗಳದಲ್ಲಿರುವ ಚೆಂಡು ಏನಾಗುತ್ತೆ ಎಂಬ ಕುತೂಹಲ ಮನೆ ಮಾಡಿದೆ. ಮರಳಿ ಯತ್ನವಾ ಮಾಡು ಎನ್ನುವಂತ ಭವಾನಿ ರೇವಣ್ಣ (Bhavani Revanna) ಚುನಾವಣೆಗೆ ಸ್ವರ್ಧಿಸುವ ಹಠ ಬಿಟ್ಟಿಲ್ಲ. ಹಾಗಾಗಿ ಭವಾನಿ ನಡೆಯೂ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಅಂದಹಾಗೆ ಭವಾನಿ ರೇವಣ್ಣ ಶಾಸಕಿ ಆಗಬೇಕೆಂಬ ಆಸೆ ನಿನ್ನೆ ಮೊನ್ನೆಯದ್ದಲ್ಲ. 2013ರಿಂದ ಶಾಸಕಿ ಆಗ್ಬೇಕೆಂಬ ಕನಸು ನನಸಾಗುತ್ತಿಲ್ಲ. ಹುಣಸೂರು, ಕೆ.ಆರ್.ನಗರ, ಬೇಲೂರು ಆಸೆ ಮುಗಿದ ಅಧ್ಯಾಯ. ಆದ್ರೆ ಸ್ವಂತ ಜಿಲ್ಲೆ ಹಾಸನದಲ್ಲಾದ್ರೂ ಆ ಕನಸನ್ನ ನನಸು ಮಾಡಿಕೊಳ್ಳುವ ಛಲ. ಹಾಗಾಗಿ ದೇವೇಗೌಡರ ಮುಂದೆಯೇ ಭವಾನಿ ಸ್ಪರ್ಧೆಯ ಅಂತಿಮಗೊಳಿಸುವ ನಿರ್ಧಾರ ಆಗಲಿದೆ ಎನ್ನಲಾಗಿದೆ. ಈ ನಡುವೆ ಈಗಾಗಲೇ ರೇವಣ್ಣ, ಪ್ರಜ್ವಲ್ ರೇವಣ್ಣ ಕೂಡ ದೇವೇಗೌಡರೇ ಡಿಸೈಡ್ ಮಾಡ್ಲಿ ಎಂದಿದ್ದಾರೆ. ಹಾಗಾಗಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಬಹಿರಂಗ ಹೇಳಿಕೆ ಬಗ್ಗೆ ಗೌಡರ ರಾಜಿ ಸೂತ್ರದತ್ತ ಎಲ್ಲರ ಚಿತ್ತ ಇದೆ. ಇದನ್ನೂ ಓದಿ: ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧಿಸುವ ಅನಿವಾರ್ಯತೆಯಿಲ್ಲ: ಹೆಚ್ಡಿಕೆ
ಈ ಮೊದಲು ಎಂಪಿ ಚುನಾವಣೆಯಲ್ಲೂ ದೇವೇಗೌಡರಿಗೆ ಇದೇ ಸವಾಲು ಎದುರಾಗಿತ್ತು. ತಮ್ಮ ಕಡೇ ಚುನಾವಣೆಯಲ್ಲಿ ಹಾಸನ (Hassana) ಕ್ಷೇತ್ರವನ್ನು ಬಿಟ್ಟುಕೊಟ್ಟು ತುಮಕೂರಿಗೆ ಹೋಗಿದ್ರು ದೊಡ್ಡ ಗೌಡ್ರು. ಹಾಸನದಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆದ್ದಿದ್ರು, ತುಮಕೂರಲ್ಲಿ ದೇವೇಗೌಡರು ಸೋತಿದ್ರು ಆದ್ರೀಗ ಮತ್ತೆ ಸೊಸೆ ಸ್ಪರ್ಧೆಯ ವಿಚಾರವಾಗಿಯೂ ದೊಡ್ಡ ಗೌಡ್ರು ನಿರ್ಧಾರ ತೆಗೆದುಕೊಳ್ಳಬೇಕು. ಪಕ್ಷದ ಮಾಜಿ ಶಾಸಕನ ಮಗನ ಪರ ನಿಲ್ತಾರಾ..? ಸೊಸೆ ಪರ ನಿಲ್ತಾರಾ ದೇವೇಗೌಡರು..!? ಎಂಬುದಕ್ಕೆ ಕೆಲವೇ ದಿನಗಳಲ್ಲಿ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ಇದನ್ನೂ ಓದಿ: ಬಿಜೆಪಿ ಪಾಳಯಕ್ಕೆ ಸಿದ್ದು ಟಾರ್ಗೆಟ್- ಚಕ್ರವ್ಯೂಹ ರೂಪಿಸುವಂತೆ ಹೈಕಮಾಂಡ್ನಿಂದಲೇ ಸಂದೇಶ?
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k