ಧಾರವಾಡ: ಸರ್ಕಾರಿ ಶಾಲೆಯ ಸಿಸಿಟಿವಿ ಕ್ಯಾಮೆರಾ ಕಿತ್ತು ವ್ಯಕ್ತಿಯೋರ್ವ ಕಲ್ಲಿನಿಂದ ಜಜ್ಜಿ ಧ್ವಂಸಗೊಳಿಸಿದ್ದಾನೆ. ಜಿಲ್ಲೆಯ ಉಪ್ಪಿನ ಬೆಟಗೇರಿಯ ಶಾಲೆಯಲ್ಲಿ ಪುಂಡರು ಸಿಸಿಟಿವಿ ಕ್ಯಾಮೆರಾ ಧ್ವಂಸಗೊಳಿಸಿದ್ದಾರೆ.
ಕ್ಯಾಮೆರಾ ಹಿಂದಿನಿಂದ ಬಂದ ವ್ಯಕ್ತಿ ಕಿತ್ತುಕೊಂಡು ಹೋಗಿ ಕೊಂಚ ದೂರದಲ್ಲಿ ಕಲ್ಲಿನಿಂದ ಜಜ್ಜಿದ್ದಾನೆ. ಶಾಲೆಯ ನೀರಿನ ಟ್ಯಾಂಕರ್ ಬಳಿ ಅಳವಡಿಸಿದ್ದ ಇನ್ನೊಂದು ಕ್ಯಾಮೆರಾದಲ್ಲಿ ಈ ದೃಶ್ಯಗಳು ಸೆರೆಯಾಗಿವೆ.
ಇಂದು ಬೆಳಗ್ಗೆ ಶಾಲೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮತ್ತೊಂದು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಗ್ರಾಮ ಪಂಚಾಯ್ತಿಯವರು ಪುಂಡನಿಗಾಗಿ ಹುಡುಕಾಟ ನಡೆಸಿದ್ದಾರೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.