– ಟೆಲಿಗ್ರಾಂ ಭಾರತದ ಹೊಸ ಡಾರ್ಕ್ ವೆಬ್ ಆಗಿ ಪರಿವರ್ತನೆಯಾಗಿದೆ ಎಂದ ಕೇಂದ್ರ
ನವದೆಹಲಿ: ಜೂನ್ 21 ರಂದು ನಡೆಯಲಿರುವ ನೀಟ್ ಮರು ಪರೀಕ್ಷೆಗೆ (NEET Re-Exam) ಮುನ್ನ ಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ಜೂನ್ 22 ರವರೆಗೆ ಭಾರತದಲ್ಲಿ ಟೆಲಿಗ್ರಾಂ (Telegram) ಆ್ಯಪ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ (Delhi High Court) ತೀರ್ಪನ್ನು ಕಾಯ್ದಿರಿಸಿದೆ.
ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿ ತೇಜಸ್ ಕರಿಯಾ ಅವರು, ನೀಟ್ ಆಕಾಂಕ್ಷಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ ಎಂಬ ಕಾರಣಕ್ಕಾಗಿ 150 ಮಿಲಿಯನ್ ಬಳಕೆದಾರರ ಹಕ್ಕುಗಳನ್ನು ನಿರ್ಬಂಧಿಸಬಹುದೇ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು. ಇದೇ ಸಮಯದಲ್ಲಿ ಆಪಾದಿತ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ಟೆಲಿಗ್ರಾಮ್ ನೈಜ-ಸಮಯದ ಮೇಲ್ವಿಚಾರಣೆಯಂತಹ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆಯೇ ಎಂದು ನ್ಯಾಯಾಧೀಶರು ಕೇಳಿದರು. ಇದನ್ನೂ ಓದಿ: ನೀಟ್ ಮರುಪರೀಕ್ಷೆಗೂ ಮುನ್ನ ಡೆತ್ನೋಟ್ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ
ಟೆಲಿಗ್ರಾಂನ ಪರವಾಗಿ ಹಿರಿಯ ವಕೀಲ ಧ್ರುವ ಮೆಹ್ತಾ ವಾದ ಮಂಡಿಸಿದರು. ಕೇಂದ್ರವು ಆಕ್ಷೇಪಾರ್ಹ ಪೋಸ್ಟ್ಗಳನ್ನು ತೆಗೆದುಹಾಕಲು ಪ್ರಯತ್ನಿಸಬಹುದು. ಇಡೀ ಆ್ಯಪ್ ಮೇಲೆ ನಿಷೇಧ ಹೇರಲು ಸಾಧ್ಯವಿಲ್ಲ. ಇದರಿಂದ ಬಳಕೆದಾರರ ವಾಕ್ ಸ್ವಾತಂತ್ರಕ್ಕೆ ಧಕ್ಕೆಯಾಗುತ್ತದೆ ಎಂದರು. ಈ ಹಂತದಲ್ಲಿ, ಪರಿಸ್ಥಿತಿಯನ್ನು ಎದುರಿಸಲು ತೆಗೆದುಕೊಂಡ ಕ್ರಮಗಳ ಕುರಿತು ಸರ್ಕಾರವನ್ನು ತೃಪ್ತಿಪಡಿಸಲು ಟೆಲಿಗ್ರಾಮ್ಗೆ ಸಾಧ್ಯವೇ ಎಂದು ನ್ಯಾಯಾಲಯವು ವಕೀಲರನ್ನು ಕೇಳಿತು.

ಇದಕ್ಕೆ ಉತ್ತರಿಸಿದ ವಕೀಲರು, ಸೋರಿಕೆಯಾದ ಪತ್ರಿಕೆ ನಿಜವಲ್ಲ ಮತ್ತು ಪತ್ರಿಕೆ ಸೋರಿಕೆಯ ಬಗ್ಗೆ ತಪ್ಪು ಮಾಹಿತಿ ಹರಡಿದೆ ಎಂದು ಹೇಳಿದರು. ಇದಕ್ಕೆ ಒಪ್ಪದ ನ್ಯಾಯಾಲಯವು ಮೌಖಿಕವಾಗಿ, ಅದು ನಕಲಿ ಪ್ರಶ್ನೆಪತ್ರಿಕೆ ಎಂದು ನಿಮಗೆ ಹೇಗೆ ಗೊತ್ತು? ಸಮಸ್ಯೆ ಏನೆಂದರೆ ನಿಜವಾದ ಪ್ರಶ್ನೆ ಪತ್ರಿಕೆ ಇದೆ ಎಂದು ಹೇಳಿತು.
ಮತ್ತೊಂದೆಡೆ ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಟೆಲಿಗ್ರಾಮ್ ಅಪ್ಲಿಕೇಶನ್ನ ವಿನ್ಯಾಸ ವಿಭಿನ್ನವಾಗಿದ್ದು, ಕಾನೂನು ಜಾರಿ ಸಂಸ್ಥೆಗಳಿಗೆ ತನಿಖೆ ನಡೆಸುವುದು ಕಷ್ಟಕರವಾಗಿದೆ ಎಂದು ವಾದಿಸಿದರು. ಒಂದು ಬಾಟ್ ಅನ್ನು ನಿರ್ಬಂಧಿಸಿದ ನಂತರ, ಅದು ಚಾನಲ್ ಅನ್ನು ಪ್ರತಿಬಿಂಬಿಸಬಹುದು. ಅಂದರೆ ಅದು ಸ್ವಯಂಚಾಲಿತವಾಗಿ ಮತ್ತೊಂದು ಬಾಟ್ಗೆ ಮರುನಿರ್ದೇಶಿಸಲ್ಪಡುತ್ತದೆ. ಇದಕ್ಕೆ ಯಾವುದೇ ಮಾನವ ಹಸ್ತಕ್ಷೇಪದ ಅಗತ್ಯವಿಲ್ಲ. ಇದರಿಂದಾಗಿ ಕಾನೂನುಬಾಹಿರ ಚಟುವಟಿಕೆ ಮತ್ತೆ ಹೊರಹೊಮ್ಮಲು ಮತ್ತು ಗಣನೀಯವಾಗಿ ಅದೇ ರೀತಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ ಎಂದು ಆರೋಪಿಸಿದರು. ಇದನ್ನೂ ಓದಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೊಂದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ
ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡೆವಿಟ್ನಲ್ಲಿ ಟೆಲಿಗ್ರಾಂ ವಿರುದ್ಧ ಗಂಭೀರ ಆರೋಪಗಳನ್ನು ಸರ್ಕಾರ ಮಾಡಿದೆ. ಟೆಲಿಗ್ರಾಂ ಭಾರತದ ಹೊಸ ಡಾರ್ಕ್ ವೆಬ್ ಆಗಿ ಪರಿವರ್ತನೆಯಾಗಿದೆ. ಸೈಬರ್ ಅಪರಾಧ, ಆರ್ಥಿಕ ವಂಚನೆ, ಉಗ್ರಗಾಮಿ ಚಟುವಟಿಕೆ ಇತರೆ ಕಾನೂನು ಬಾಹಿರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದೆ.
