– ಗ್ಯಾರಂಟಿ ಪರಿಷ್ಕಣೆ ಹೆಸರಿನಲ್ಲಿ ಸರ್ಕಾರದಿಂದ ಮಹಿಳೆಯರಿಗೆ ಅಪಮಾನ
ಬೆಂಗಳೂರು : ಬಿಡದಿ ಟೌನ್ ಶಿಪ್ಗೆ (Bidadi township) ಪ್ರಧಾನಿ ಮೋದಿ(PM Modi) ಗ್ರೀನ್ ಸಿಗ್ನಲ್ ಕೊಟ್ಟಿದ್ದರೆ ದಾಖಲಾತಿಯನ್ನ ಬಹಿರಂಗ ಪಡಿಸಲಿ ಎಂದು ಸಿಎಂ ಡಿಕೆಶಿವಕುಮಾರ್ಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ(Chalavadi Narayanaswamy) ಸವಾಲ್ ಹಾಕಿದ್ದಾರೆ.
ಬಿಡದಿ ಟೌನ್ ಶಿಪ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಡದಿ ಟೌನ್ ಶಿಪ್ ಗೆ ನಾವು ಮೊದಲಿಂದ ವಿರೋಧ ಮಾಡ್ತಾ ಇದ್ದೇವೆ. ನಮ್ಮದು ಕೆಲವು ಕೆಲಸ ಇತ್ತು. ಅದಕ್ಕೆ ತಡ ಆಯ್ತು. ನಾನು ಮತ್ತು ಅಶೋಕ್ ಮಾತುಕತೆ ಮಾಡಿದ್ದೇವೆ. ಅಶೋಕ್ ಅವರ ಆರೋಗ್ಯ ಸರಿ ಇರಲಿಲ್ಲ. ಜೆಡಿಎಸ್ ಹೋರಾಟ ಮಾಡ್ತಿದೆ. ಅದಕ್ಕೆ ನಾವು ಹೋಗ್ತೀವಿ. ನಮ್ಮ ಬೆಂಬಲವೂ ಇದೆ ನಾವು ಹೋಗ್ತೀವಿ ಎಂದರು.
ಪ್ರಧಾನಿ ಮೋದಿ ಯೋಜನೆ ಒಪ್ಪಿದ್ದಾರೆ ಎಂಬ ಡಿಕೆಶಿ ಹೇಳಿಕೆಗೆ ಮೋದಿ ಅವರು ಏನ್ ಹೇಳಿದ್ರು ಅನ್ನೋದು ಡಿಕೆಶಿ ಬಹಿರಂಗ ಪಡಿಸಲಿ. ನೀವು ಆಪರೇಷನ್ ಸಿಂಧೂರ್ಗೂ ಸಾಕ್ಷಿ ಕೇಳಿದ್ರಿ. ಅದೇ ರೀತಿ ಮೋದಿ ಕೊಟ್ಟ ಗ್ರೀನ್ ಸಿಗ್ನಲ್ ಹೇಗಿತ್ತು? ಅದನ್ನ ಬಹಿರಂಗ ಮಾಡಿ. ಯಾವ ರೀತಿ ಮೋದಿ ಅವರು ಗ್ರೀನ್ ಸಿಗ್ನಲ್ ಕೊಟ್ಟರು ಡಿಕೆಶಿ ಬಹಿರಂಗ ಮಾಡಲಿ ಅಂತ ಸವಾಲ್ ಹಾಕಿದರು.
ಬಿಡದಿ ಹೋರಾಟ ವಿಚಾರದ ಕುರಿತು ನಾನು, ಅಶೋಕ್, ವಿಜಯೇಂದ್ರ ಚರ್ಚೆ ಮಾಡ್ತೀವಿ. ಜೆಡಿಎಸ್, ಬಿಜೆಪಿ ಅಂತ ಏನಿಲ್ಲ. ಇದು ಜನರ ವಿಚಾರ. ನಾವು ಅವರು ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಗ್ಯಾರಂಟಿ ಪರಿಷ್ಕರಣೆ ಕುರಿತು ಪ್ರತಿಕ್ರಿಯಿಸಿ, ಚುನಾವಣೆಗೆ ಓಟ್ ಬೇಕಾದಾಗ ಗೃಹ ಲಕ್ಷ್ಮಿ, ಸೌಭಾಗ್ಯ ಲಕ್ಷ ಆಗಿದ್ದರು. ಈಗ ದುಡ್ಡು ಖಾಲಿ ಆಗ್ತಾ ದರಿದ್ರಾ ಲಕ್ಷ್ಮಿಯರು ಆಗಿದ್ದಾರೆ. ಹೆಣ್ಣು ಮಕ್ಕಳಿಗೆ ಎಷ್ಟು ಅಪಮಾನ ಮಾಡ್ತಾ ಇದ್ದಾರೆ. ನಿಮ್ಮ ಸಹವಾಸ ಬೇಡ ಅಂತಿದ್ದಾರೆ ಹೆಣ್ಣುಮಕ್ಕಳು. ಹಣವನ್ನು ನಿಮ್ಮ ಎದೆಯ ಮೇಲೆ ಹಾಕಿಕೊಂಡು ಹೋಗಿ ಅಂತ ಆಕ್ರೋಶ ಹೊರ ಹಾಕ್ತಾ ಇದ್ದಾರೆ. ಮಹಿಳೆಯರನ್ನ ಬಿಕ್ಷುಕರಾಗಿ ಮಾಡಿದ್ದಾರೆ ಅಂತ ಕಿಡಿಕಾರಿದರು.ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ RSS ಬಗ್ಗೆ ತಿಳಿದುಕೊಳ್ಳಬೇಕಾದ್ರೆ ಶಾಖೆಗೆ ಬರಲಿ: ಸಿ.ಟಿ ರವಿ
ಹೆಣ್ಣು ಮಕ್ಕಳಿಗೆ ಇಂತಹ ಅಪಮಾನ ಬೇಕಿತ್ತಾ? 2 ಸಾವಿರಕ್ಕೆ ಭಿಕ್ಷುಕರಾಗಿ, ಹರಾಜು ಹಾಕ್ತಾ ಇದ್ದೀರಾ. ಅವರ ಮನೆತನಗಳನ್ನ ಹರಾಜು ಇಟ್ಟಿದ್ದೀರಾ ಈ ಸರ್ಕಾರದವರು. ಹಣ ಕೊಡಿ ಅಂತ ಯಾರು ಕೇಳಿರಲಿಲ್ಲ. ನೀವೆ ಕೊಟ್ಟು ನೀವೇ ಅಪಮಾನ ಮಾಡ್ತಾ ಇದ್ದೀರಾ. ನಿಮಗೆ ನಿಜಕ್ಕೂ ಹೆಣ್ಣು ಮಕ್ಕಳು ಓಟ್ ಹಾಕ್ತಾರಾ? ನೀವೇ ಮಹಿಳೆಯರಿಗೆ ಅಪಮಾನ ಮಾಡೋದು ಸರಿಯನಾ ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ವಿರುದ್ದ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: RSS ಬಗ್ಗೆ ಪ್ರಶ್ನೆ ಮಾಡೋ ಕಾಂಗ್ರೆಸ್ನ ವಿವೇಕವಿಲ್ಲದ ದೊರೆಗಳ ಪಟ್ಟಿಗೆ ಪ್ರಿಯಾಂಕ್ ಖರ್ಗೆ ಸೇರಿದ್ದಾರೆ: ಛಲವಾದಿ ನಾರಾಯಣಸ್ವಾಮಿ
