ಕಲಬುರಗಿ: ಬುರ್ರಾ ಜಾನಪದ ಕಥೆಗಳನ್ನು ಹಾಡಿನ ರೂಪದಲ್ಲಿ ಹಾಡುವ ಗಾಯಕಿ ಶಂಕರಮ್ಮ ಮಹಾದೇವಾಪ್ಪ ಅವರ ಕುರಿತ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ವರದಿ ಫಲಶ್ರುತಿಯಾಗಿ ಜಾನಪದ ಕ್ಷೇತ್ರದಲ್ಲಿನ ಅವರ ಸೇವೆಗಾಗಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾಮತೀರ್ಥ ಗ್ರಾಮದ ನಿವಾಸಿಯಾಗಿರುವ ಶಂಕರಮ್ಮ ಅವರು ಇಳಿ ವಯಸ್ಸಿನಲ್ಲೂ ಹಾಡಲು ಶುರು ಮಾಡಿದರೆ ಗಂಟೆಗಟ್ಟಲೆ ನಿರಂತರವಾಗಿ ಹಾಡುತ್ತಾ ರಂಜಿಸುತ್ತಾರೆ. ಅವರ ಜೀವನ ಸ್ಫೂರ್ತಿ ಎಲ್ಲರನ್ನು ಅಚ್ಚರಿಗೊಳಿಸಿತ್ತು. ಅನಕ್ಷರಸ್ಥೆಯಾಗಿರುವ ಶಂಕರಮ್ಮ ಮಹಾದೇವಪ್ಪ ಅವರಿಗೆ 10 ವರ್ಷವಿದ್ದಾಗ ಅವರ ತಾಯಿ ಕಥೆಗಳನ್ನ ಹೇಳುತ್ತಾ ಜೀವನ ಸಾಗಿಸುತ್ತಿದ್ದರು. ಅವರ ಜೊತೆ ಹೋಗಿ ಕಲಿತ ವಿದ್ಯೆಯಿಯೇ ಈ ಬುರ್ರಾ ಜಾನಪದ ಪ್ರಕಾರ. ಬುರ್ರಾ ಕಥೆಗಳ ಅಂದರೆ ಹಳೆಯ ಕಾಲದ ಇತಿಹಾಸವನ್ನ ಮತ್ತು ದೇವರ ಕಥೆಗಳನ್ನ ಹೇಳುತ್ತಾ, ಆಡು ಮಾತುಗಳನ್ನು ಕಥೆಗಳನ್ನಾಗಿ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಪ್ರಚಾರ ಪಡಿಸಿದ್ದಾರೆ.
ಇಷ್ಟೂ ವರ್ಷಗಳು ಕಲಾಸೇವೆಯನ್ನು ಮಾಡಿದ ಶಂಕ್ರಮ್ಮ ಮಹಾದೇವಪ್ಪಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಲಾವಿದರಿಗೆ ನೀಡುವ ಪಿಂಚಣಿ ನೀಡಿರಲಿಲ್ಲ, ಸರ್ಕಾರ ಇವರ ಕಲೆಗೆ ಬೆಲೆ ನೀಡದಿರೋದು ದುರಂತವಾಗಿತ್ತು. ಹೀಗಾಗಿ ಈ ಕಲಾವಿದರಿಗೆ ಕನಿಷ್ಟ ಸೌಲಭ್ಯ ಒದಗಿಸಲು ಅಪರೂಪದ ಗ್ರಾಮೀಣ ಪ್ರತಿಭೆಯ ಯಶೋಗಾಥೆಯನ್ನು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಲ್ಲಿ ಪ್ರಸಾರ ಮಾಡಿತ್ತು.
ಬೆಂಗಳೂರಿನಲ್ಲಿ ನಡೆದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಪರೂಪದ ಗ್ರಾಮೀಣ ಜಾನಪದ ಕಲಾವಿದೆ ಶಂಕರಮ್ಮ ಮಹಾದೇವಪ್ಪಾಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪಡೆದ ಶಂಕರಮ್ಮ ಅವರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಧನ್ಯವಾದ ಹೇಳಿ ಸಂತಸ ವ್ಯಕ್ತಪಡಿಸಿದ್ದಾರೆ.
https://www.youtube.com/watch?v=er12muixrJ0
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv