ನಟ ಧ್ರುವ ಸರ್ಜಾ ಬಾಳಿನಲ್ಲಿ ಸಂಭ್ರಮ ತಂದಿದ್ದಾರೆ ಪತ್ನಿ ಪ್ರೇರಣಾ. ಸಹೋದರ ಚಿರುವನ್ನು ಕಳೆದುಕೊಂಡು ದುಃಖದಲ್ಲಿದ್ದ ಧ್ರುವ ಮತ್ತು ಸರ್ಜಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗುತ್ತಿದ್ದು, ಇಂದು ಪ್ರೇರಣಾ ಅವರಿಗೆ ಸೀಮಂತ ಕಾರ್ಯ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಅರ್ಜುನ್ ಸರ್ಜಾ ಸೇರಿದಂತೆ ಸರ್ಜಾ ಕುಟುಂಬದ ಬಹುತೇಕರು ಹಾಜರಿದ್ದರು. ಮತ್ತು ಪ್ರೇರಣಾ ಕುಟುಂಬವೂ ಭಾಗಿ ಆಗಿತ್ತು.
ಮೊನ್ನೆಯಷ್ಟೇ ಅಭಿಮಾನಿಗಳ ಜೊತೆ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದ ಧ್ರುವ ಸರ್ಜಾ, ಪುಟ್ಟ ಕಂದಮ್ಮನಿಗಾಗಿ ಹಾರೈಸಿ ಎಂದು ಮನವಿ ಮಾಡಿದ್ದರು. ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪತ್ನಿಯ ಸೀಮಂತ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚಿರು ಅನುಪಸ್ಥಿತಿಯನ್ನೂ ನೆನೆದು ಬೇಸರಿಸಿಕೊಂಡಿದ್ದಾರೆ. ಚಿರುವನ್ನು ಬಿಟ್ಟು ಯಾವುದೇ ಕಾರ್ಯಕ್ರಮವನ್ನು ಮಾಡಿಕೊಂಡವರಲ್ಲ ಧ್ರುವ. ಹಾಗಾಗಿ ಸೀಮಂತ ಕಾರ್ಯದಲ್ಲಿ ಅಣ್ಣ ಇರಬೇಕಿತ್ತು ಎನ್ನುವುದು ಸಹಜ. ಇದನ್ನೂ ಓದಿ:ʻಬಿಗ್ ಬಾಸ್ʼ ಕನ್ನಡ ಸೀಸನ್ 9ಕ್ಕೆ ಕೌಂಟ್ ಡೌನ್ ಶುರು
ಈಗಾಗಲೇ ಸರ್ಜಾ ಕುಟುಂಬದಲ್ಲಿ ಚಿರು ಪುತ್ರ ರಾಯನ್ ಲವಲವಿಕೆಗೆ ತಂದಿದ್ದು, ಇದೀಗ ಧ್ರುವ ಸರ್ಜಾ ಮಗು ಕೂಡ ಜೊತೆಯಾಗಲಿದೆ. ಎರಡೂ ಕಂದಮ್ಮಗಳು ಚಿರುವಿನ ನೋವನ್ನು ಸರ್ಜಾ ಕುಟುಂಬಕ್ಕೆ ಮರೆಸಲಿವೆ. ಸೀಮಂತ ಕಾರ್ಯದಲ್ಲಿ ಸಿನಿಮಾ ಉದ್ಯಮದ ಆಪ್ತರು, ಮೇಘನಾ, ಪ್ರೇರಣಾ ಹಾಗೂ ಸರ್ಜಾ ಕುಟುಂಬ ಸದಸ್ಯರು ಹಾಜರಿದ್ದು, ಪ್ರೇರಣಾಗೆ ಹಾರೈಸಿದ್ದಾರೆ.