ರೆಬಲ್ ಸ್ಟಾರ್ ಅಂಬರೀಶ್ ತರ್ಲೆ, ತಮಾಷೆಗಳಿಗೆ ಹೆಸರಾದವರು. ಯಾವತ್ತೂ ಅವರು ಗಂಭೀರವಾಗಿ ಇದ್ದವರೇ ಅಲ್ಲ. ಜೊತೆಗಿದ್ದವರ ನಗಿಸುತ್ತಾ, ಕೋಪ ಬಂದಾಗ ಗದರುತ್ತಾ ತಮ್ಮಿಷ್ಟದಂತೆ ಬದುಕಿದವರು. ಇದೀಗ ಅಂಬರೀಶ್ ಪುತ್ರ ಅಭಿಷೇಕ್ ಕೂಡ ಅಪ್ಪನ ಹಾದಿಯಲ್ಲೇ ಸಾಗುತ್ತಿದ್ದಾರೆ. ಅಭಿಮಾನಿಗಳ ಜತೆ ಬೆರೆಯಲು ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಪ್ರತಿ ಸಲವೂ ಒಂದಿಲ್ಲೊಂದು ಸರ್ ಪ್ರೈಸ್ ಗಳನ್ನು ಅಭಿಮಾನಿಗಳಿಗೆ ನೀಡುತ್ತಾ, ರಂಜಿಸುತ್ತಾರೆ.
ಇತ್ತೀಚೆಗಷ್ಟೇ ಇನ್ ಸ್ಟಾ ಸ್ಟೋರಿಯಲ್ಲಿ ಅವರು ಫೋಟೋವೊಂದನ್ನು ಪೋಸ್ಟ್ ಮಾಡಿದ್ದು, ಗಾಂಧಿ ಟೋಪಿ ತೊಟ್ಟುಕೊಂಡು ಉತ್ತರ ಕರ್ನಾಟಕದ ಶೈಲಿಯಲ್ಲಿ ಮಿಂಚಿದ್ದಾರೆ. ಫೋಟೋದ ಜೊತೆಗೆ ‘ನಮ್ಮ ಕಲಬುರಗಿ’ ಎಂದು ಬರೆದು, ಆ ಭಾಗದ ಅಭಿಮಾನಿಗಳ ಕ್ರೇಜ್ ಗೆ ಕಾರಣರಾಗಿದ್ದಾರೆ. ಇದನ್ನೂ ಓದಿ: ನಾಳೆ ಬಿಡುಗಡೆ ಆಗಲಿರುವ ಗಂಗೂಬಾಯಿ ಕಾಠಿಯಾವಾಡಿ ಟೈಟಲ್ ಬದಲಾಗತ್ತಾ? ಕೋರ್ಟ್ ಕೊಟ್ಟ ಸಲಹೆ ಏನು?
View this post on Instagram
ಕಲಬುರಗಿ ಹೈದನ ಗೆಟಪ್ ಹಾಕಿಕೊಂಡಿದ್ದು ಯಾಕೆ ಎನ್ನುವುದನ್ನು ಅವರು ಎಲ್ಲಿಯೂ ಹೇಳಿಲ್ಲ. ಆದರೆ, ಅವರ ಆಪ್ತರು ಹೇಳುವಂತೆ ಸದ್ಯ ಅಭಿಷೇಕ್ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಗಾಗಿ ಅವರು ಕಲಬುರಗಿಗೆ ಹೋಗಿದ್ದು, ಅಲ್ಲಿ ಈ ವೇಷ ಹಾಕಿಕೊಂಡಿದ್ದರು ಎನ್ನಲಾಗಿದೆ.
ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಅಭಿಷೇಕ್ ಹೊಸ ಬಗೆಯ ಪಾತ್ರ ಮಾಡಿದ್ದು, ಇಲ್ಲಿ ಅವರು ಸಖತ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಇದೊಂದು ಸಾಹಸ ಪ್ರಧಾನ ಸಿನಿಮಾವಾಗಿದ್ದು, ನೆಗೆಟಿವ್ ಮತ್ತು ಪಾಸಿಟಿವ್ ಶೇಡ್ ಇರುವಂತಹ ಪಾತ್ರವನ್ನು ಅಭಿಷೇಕ್ ನಿಭಾಯಿಸುತ್ತಿದ್ದಾರಂತೆ. ಇದನ್ನೂ ಓದಿ: ನಯನತಾರಾ ಜೊತೆಗಿನ ಫೋಟೋ ಹಂಚಿಕೊಂಡ ಸಮಂತಾ – ಕುಚಿಕು ಗೆಳೆತಿಯರ ಫೋಟೋ ಕಹಾನಿ