ಬೆಳಗಾವಿ: ಸಹೋದರಿ ಮೇಲೆ ಕಣ್ಣು ಹಾಕಿದ್ದ ವ್ಯಕ್ತಿಯನ್ನು ಸ್ನೇಹಿತರ ಜೊತೆಗೂಡಿ ಯುವಕನೋರ್ವ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ನಗರದ ಮಜಗಾವಿಯಲ್ಲಿ ನಡೆದಿದೆ.
ಜೂನ್ 30ರಂದು ಮಜಗಾವಿಯ ಆದಿನಾಥ ಭವನ ಬಳಿ ಈ ಘಟನೆ ನಡೆದಿದ್ದು, ಯಲ್ಲೇಶ್ ಕೋಲಕಾರ್(37) ಕೊಲೆಯಾದ ವ್ಯಕ್ತಿಯಾಗಿದ್ದಾರೆ. ಇದೀಗ ಪೊಲೀಸರು ಆರೋಪಿಗಳಾದ ಸಂದೀಪ್ ಕೋಲಕಾರ್ (32), ಸಂತೋಷ ರಾಜಂಗಳಿ (19), ರವಿ ಗುಳ್ಳೇದಕೊಪ್ಪ(25), ಪ್ರದೀಪ್ ಕೋಲ್ಹಾರ್(24), ಶಿವಕುಮಾರ್ ಮಾನೆ(25)ಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಹಲ್ಚಲ್ ಎಬ್ಬಿಸಿದ ರ್ಯಾಂಬೋ ನಟಿಯ ನಯಾ ಫೋಟೋಸ್
ಸಹೋದರಿ ಮೇಲೆ ಕಣ್ಣು ಹಾಕಿದ್ದ ಎಂಬ ಕಾರಣಕ್ಕೆ ಸ್ನೇಹಿತರ ಜೊತೆಗೂಡಿ ಹಂತಕ ಸಂದೀಪ ಕೋಲಕಾರ್, ಯಲ್ಲೇಶ್ ಅನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದು ಆಟೋದಲ್ಲಿ ಪರಾರಿಯಾಗಿದ್ದನು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಕೊಡ್ಲಿ, ತಲ್ವಾರ್, ಚಾಕು, ಕೋಯತಾ ಹಾಗೂ ಆಟೋ ಜಪ್ತಿಗೊಳಿಸಿದ್ದಾರೆ ಮತ್ತು ಈ ಘಟನೆ ಸಂಬಂಧ ಬೆಳಗಾವಿಯ ಉದ್ಯಮಭಾಗ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೀಸೆ ಜಾರಿ ನೆಲದ ಮೇಲೆ ಬಿದ್ದರೂ ನರೇಶ್ ನಕ್ಕಿದ್ದೆ, ನನಗೆ ಸಿಕ್ಕ ಜಯ : ರಮ್ಯಾ